<p><strong>ಇಂಡಿ</strong>: ತಾಲ್ಲೂಕಿನ ಇಂಗಳಗಿ ಮತ್ತು ಆಳೂರ ಗ್ರಾಮದ ರೈತರು ಕೃಷಿಗೆ ಹಗಲು ಹೊತ್ತಿನಲ್ಲಿ ಏಳು ಗಂಟೆ ಮತ್ತು ರಾತ್ರಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗಲು ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಗುರುವಾರ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ಎ.ಎ.ಪವಾರ, ಎ.ಐ.ಜಾಧವ ಮಾತನಾಡಿ, ಹಗಲು ಮತ್ತು ರಾತ್ರಿ ಸೇರಿ 7 ಗಂಟೆ ವಿದ್ಯುತ್ ಕೊಡುವುದರಿಂದ ರೈತರಿಗೆ ತೊಂದರೆಯಾಗುತ್ತದೆ. ಅದಲ್ಲದೆ ತಾಲ್ಲೂಕಿನ ಅನೇಕ ಕಡೆ ಹಗಲು ಏಳು ಗಂಟೆ ವಿದ್ಯುತ್ ನೀಡುತ್ತಾರೆ ಮತ್ತು ಪರೀಕ್ಷೆಗಳು ನಡೆದಿದ್ದು, ವಿದ್ಯಾರ್ಥಿಗಳಿಗೆ ಓದಿಗೆ ಅನುಕೂಲವಾಗೆಂದು ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.</p>.<p>ಹೆಸ್ಕಾ ಎಇಇ ಎಸ್.ಆರ್. ಮೆಂಡೆಗಾರ ಮಾತನಾಡಿ, ಮುಂದಿನ ದಿನಗಳಲ್ಲಿ ಹಗಲು ಹೊತ್ತು ವಿದ್ಯುತ್ 7 ಗಂಟೆ ನೀಡಲಾಗುತ್ತಿದೆ. ಅದಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈಗಾಗಲೇ ಟೂ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಇದೇ ವೇಳೆ ರೈತರು ಮೋಟಾರು ಚಾಲು ಮಾಡಿದರೆ ವಿದ್ಯುತ್ ಕಡಿತ ಆಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ದೃಷ್ಟಿಯಿಂದ ರೈತರು ರಾತ್ರಿ ನೀರಾವರಿ ಪಂಪ್ಸೆಟ್ ಬಳಸದಿರಲು ವಿನಂತಿಸಿದರು.</p>.<p>ಪ್ರತಿಭಟನೆಯಲ್ಲಿ ಎಸ್.ಟಿ.ಪವಾರ, ಬಿ.ಟಿ.ಪವಾರ, ಎಸ್.ಪಿ.ಕುಂಬಾರ, ಎಸ್.ಎಸ್.ಸೀತಿಮನಿ, ಎಸ್.ಬಿ.ಜಾಧವ, ಎಂ.ಎಂ.ಬಳಬಟ್ಟಿ, ಪಿ.ಜೆ.ಚಾಬುಕಸವಾರ, ಎಸ್.ವಿ.ಬನಸೋಡೆ,ಬಿ.ಎಂ.ಪಾಟೀಲ, ಎಸ್.ಆರ್.ನಾಟಿಕಾರ, ಜೆ.ಎಂ.ಸುತಾರ, ವೈ.ಎಂ.ಸಲದತ್ತಿ, ಎ.ಪಿ.ಮಾವಿನಹಳ್ಳಿ, ಆರ್.ಕೆ.ಜಾಧವ ಇದ್ದರು.<br /> ಎಇಇ ಮೆಂಡೆಗಾರ ಇವರಿಗೆ ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ</strong>: ತಾಲ್ಲೂಕಿನ ಇಂಗಳಗಿ ಮತ್ತು ಆಳೂರ ಗ್ರಾಮದ ರೈತರು ಕೃಷಿಗೆ ಹಗಲು ಹೊತ್ತಿನಲ್ಲಿ ಏಳು ಗಂಟೆ ಮತ್ತು ರಾತ್ರಿ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗಲು ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ಗುರುವಾರ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.</p>.<p>ಎ.ಎ.ಪವಾರ, ಎ.ಐ.ಜಾಧವ ಮಾತನಾಡಿ, ಹಗಲು ಮತ್ತು ರಾತ್ರಿ ಸೇರಿ 7 ಗಂಟೆ ವಿದ್ಯುತ್ ಕೊಡುವುದರಿಂದ ರೈತರಿಗೆ ತೊಂದರೆಯಾಗುತ್ತದೆ. ಅದಲ್ಲದೆ ತಾಲ್ಲೂಕಿನ ಅನೇಕ ಕಡೆ ಹಗಲು ಏಳು ಗಂಟೆ ವಿದ್ಯುತ್ ನೀಡುತ್ತಾರೆ ಮತ್ತು ಪರೀಕ್ಷೆಗಳು ನಡೆದಿದ್ದು, ವಿದ್ಯಾರ್ಥಿಗಳಿಗೆ ಓದಿಗೆ ಅನುಕೂಲವಾಗೆಂದು ಸಿಂಗಲ್ ಫೇಸ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿದರು.</p>.<p>ಹೆಸ್ಕಾ ಎಇಇ ಎಸ್.ಆರ್. ಮೆಂಡೆಗಾರ ಮಾತನಾಡಿ, ಮುಂದಿನ ದಿನಗಳಲ್ಲಿ ಹಗಲು ಹೊತ್ತು ವಿದ್ಯುತ್ 7 ಗಂಟೆ ನೀಡಲಾಗುತ್ತಿದೆ. ಅದಲ್ಲದೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈಗಾಗಲೇ ಟೂ ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಇದೇ ವೇಳೆ ರೈತರು ಮೋಟಾರು ಚಾಲು ಮಾಡಿದರೆ ವಿದ್ಯುತ್ ಕಡಿತ ಆಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳ ದೃಷ್ಟಿಯಿಂದ ರೈತರು ರಾತ್ರಿ ನೀರಾವರಿ ಪಂಪ್ಸೆಟ್ ಬಳಸದಿರಲು ವಿನಂತಿಸಿದರು.</p>.<p>ಪ್ರತಿಭಟನೆಯಲ್ಲಿ ಎಸ್.ಟಿ.ಪವಾರ, ಬಿ.ಟಿ.ಪವಾರ, ಎಸ್.ಪಿ.ಕುಂಬಾರ, ಎಸ್.ಎಸ್.ಸೀತಿಮನಿ, ಎಸ್.ಬಿ.ಜಾಧವ, ಎಂ.ಎಂ.ಬಳಬಟ್ಟಿ, ಪಿ.ಜೆ.ಚಾಬುಕಸವಾರ, ಎಸ್.ವಿ.ಬನಸೋಡೆ,ಬಿ.ಎಂ.ಪಾಟೀಲ, ಎಸ್.ಆರ್.ನಾಟಿಕಾರ, ಜೆ.ಎಂ.ಸುತಾರ, ವೈ.ಎಂ.ಸಲದತ್ತಿ, ಎ.ಪಿ.ಮಾವಿನಹಳ್ಳಿ, ಆರ್.ಕೆ.ಜಾಧವ ಇದ್ದರು.<br /> ಎಇಇ ಮೆಂಡೆಗಾರ ಇವರಿಗೆ ಮನವಿ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>