<p><strong>ಹೊರ್ತಿ:</strong> ಸಮೀಪದ ಹಳಗುಣಕಿ ಗ್ರಾಮದ ಹನುಮಾನ ದೇವರ ದೇವಸ್ಥಾನ ಜಾತ್ರಾ ಮಹೋತ್ಸವ ಆರಂಭಗೊಂಡಿದೆ.</p>.<p><strong>ಐತಿಹಾಸಿಕ ಹಿನ್ನೆಲೆ:</strong> ಗ್ರಾಮದ ಪ್ರಾಣ ದೇವರಾದ ಮಾರುತೇಶ್ವರನು ಏಳು<strong> </strong>ಊರಿನ ರಸ್ತೆಗಳ ಮಾರ್ಗದ ಮದ್ಯದಲ್ಲಿದೆ. 1 ಎಕರೆ ಜಮೀನಿನಲ್ಲಿ 18ನೇ ಶತಮಾನದಲ್ಲಿ ವಾಮನಾಚಾರ್ಯ ಎಂಬುವರು ನಿರ್ಮಾಣ ಮಾಡಿದ್ದಾರೆ. ಶಿವಾನುಭವ ಮಂಟಪ, ಮಾತೋಶ್ರೀ ರತ್ನಮಾಲಾ ಭೋಜನಾಲಯ, ಹಳೆ ಬಾವಿ,<strong> </strong>53 ಅಡಿ<strong> ಎ</strong>ತ್ತರದ ದೀಪಸ್ಥಂಭವಿದೆ. ಭಕ್ತರ ಶೃದ್ಧಾ, ಭಕ್ತಿ, ಭಾವಗಳ ಕೇಂದ್ರವಾಗಿದೆ.</p>.<p><strong>ಮಂಗಳವಾರದಿಂದ ಜಾತ್ರೆ ಆರಂಭಗೊಂಡಿದ್ದು, </strong>ಬೆಳಿಗ್ಗೆ ಭಕ್ತರಿಂದ ದೀರ್ಘದಂಡ ನಮಸ್ಕಾರ, ಊರ ಗೌಡರ ನೇತೃತ್ವದಲ್ಲಿ ವಿವಿದ ಕಲಾ ವಾದ್ಯ ಮೇಳಗಳೊಂದಿಗೆ ವಾಡೆಯಿಂದ ಮೊಸರು ಗಡಿಗೆ ಮೆರವಣಿಗೆ, ನಂತರ ಅನ್ನಸಂತರ್ಪಣೆ, ರಾತ್ರಿ 8 ಮದ್ದು ಸುಡುವ ಕಾರ್ಯಕ್ರಮ<strong>,</strong> 28ಕ್ಕೂ ಹೆಚ್ಚು ಜಂಗೀ ನಿಕಾಲಿ ಕುಸ್ತಿ ನಡೆದವು.</p>.<p>ರಾತ್ರಿ 10ಕ್ಕೆ ಬಾಗಲಕೋಟೆಯ ಶ್ರೀ ಗುರು ಪುಟ್ಟರಾಜ ಕೃಪಾಪೋಷಿತ ಕಲಾ ನಾಟ್ಯ ಸಂಘದವರಿಂದ 'ಧರ್ಮದ ದಾರಿಯಲ್ಲಿ ಕರ್ಮದ ಬಿರುಗಾಳಿ' ಅರ್ಥಾತ್ ನೀತಿಗೆಟ್ಟ ಸಮಾಜ ಎಂಬ ನಾಟಕ ಪ್ರದರ್ಶನ ನಡೆಯಿತು.</p>.<p>ಏ.12ರಂದು ಮುಂಜಾನೆ 6:15ಕ್ಕೆ ಹನುಮಾನ ದೇವಸ್ಥಾನ ಶ್ರಿ ಹನುಮಾನ ಜಯಂತಿ ನಡೆದು ಜಾತ್ರೋತ್ಸವ ಮುಕ್ತಾಯಗೊಳ್ಳಿದೆ ಎಂದು ಹಳಗುಣಕಿ ಗ್ರಾಮದ ಹನುಮಾನ ದೇವರ ದೇವಸ್ಥಾನ ಜಾತ್ರಾ ಮಹೋತ್ಸವ ಕಮಿಟಿಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊರ್ತಿ:</strong> ಸಮೀಪದ ಹಳಗುಣಕಿ ಗ್ರಾಮದ ಹನುಮಾನ ದೇವರ ದೇವಸ್ಥಾನ ಜಾತ್ರಾ ಮಹೋತ್ಸವ ಆರಂಭಗೊಂಡಿದೆ.</p>.<p><strong>ಐತಿಹಾಸಿಕ ಹಿನ್ನೆಲೆ:</strong> ಗ್ರಾಮದ ಪ್ರಾಣ ದೇವರಾದ ಮಾರುತೇಶ್ವರನು ಏಳು<strong> </strong>ಊರಿನ ರಸ್ತೆಗಳ ಮಾರ್ಗದ ಮದ್ಯದಲ್ಲಿದೆ. 1 ಎಕರೆ ಜಮೀನಿನಲ್ಲಿ 18ನೇ ಶತಮಾನದಲ್ಲಿ ವಾಮನಾಚಾರ್ಯ ಎಂಬುವರು ನಿರ್ಮಾಣ ಮಾಡಿದ್ದಾರೆ. ಶಿವಾನುಭವ ಮಂಟಪ, ಮಾತೋಶ್ರೀ ರತ್ನಮಾಲಾ ಭೋಜನಾಲಯ, ಹಳೆ ಬಾವಿ,<strong> </strong>53 ಅಡಿ<strong> ಎ</strong>ತ್ತರದ ದೀಪಸ್ಥಂಭವಿದೆ. ಭಕ್ತರ ಶೃದ್ಧಾ, ಭಕ್ತಿ, ಭಾವಗಳ ಕೇಂದ್ರವಾಗಿದೆ.</p>.<p><strong>ಮಂಗಳವಾರದಿಂದ ಜಾತ್ರೆ ಆರಂಭಗೊಂಡಿದ್ದು, </strong>ಬೆಳಿಗ್ಗೆ ಭಕ್ತರಿಂದ ದೀರ್ಘದಂಡ ನಮಸ್ಕಾರ, ಊರ ಗೌಡರ ನೇತೃತ್ವದಲ್ಲಿ ವಿವಿದ ಕಲಾ ವಾದ್ಯ ಮೇಳಗಳೊಂದಿಗೆ ವಾಡೆಯಿಂದ ಮೊಸರು ಗಡಿಗೆ ಮೆರವಣಿಗೆ, ನಂತರ ಅನ್ನಸಂತರ್ಪಣೆ, ರಾತ್ರಿ 8 ಮದ್ದು ಸುಡುವ ಕಾರ್ಯಕ್ರಮ<strong>,</strong> 28ಕ್ಕೂ ಹೆಚ್ಚು ಜಂಗೀ ನಿಕಾಲಿ ಕುಸ್ತಿ ನಡೆದವು.</p>.<p>ರಾತ್ರಿ 10ಕ್ಕೆ ಬಾಗಲಕೋಟೆಯ ಶ್ರೀ ಗುರು ಪುಟ್ಟರಾಜ ಕೃಪಾಪೋಷಿತ ಕಲಾ ನಾಟ್ಯ ಸಂಘದವರಿಂದ 'ಧರ್ಮದ ದಾರಿಯಲ್ಲಿ ಕರ್ಮದ ಬಿರುಗಾಳಿ' ಅರ್ಥಾತ್ ನೀತಿಗೆಟ್ಟ ಸಮಾಜ ಎಂಬ ನಾಟಕ ಪ್ರದರ್ಶನ ನಡೆಯಿತು.</p>.<p>ಏ.12ರಂದು ಮುಂಜಾನೆ 6:15ಕ್ಕೆ ಹನುಮಾನ ದೇವಸ್ಥಾನ ಶ್ರಿ ಹನುಮಾನ ಜಯಂತಿ ನಡೆದು ಜಾತ್ರೋತ್ಸವ ಮುಕ್ತಾಯಗೊಳ್ಳಿದೆ ಎಂದು ಹಳಗುಣಕಿ ಗ್ರಾಮದ ಹನುಮಾನ ದೇವರ ದೇವಸ್ಥಾನ ಜಾತ್ರಾ ಮಹೋತ್ಸವ ಕಮಿಟಿಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>