<p><strong>ಆಲಮಟ್ಟಿ:</strong>ಜಲಾಶಯದ ಬಲಭಾಗದ ಸೀತಮ್ಮನಗಿರಿಯ ಮೇಲ್ಬಾಗದಲ್ಲಿ 7 ಕಾಟೇಜ್ ಹಾಗೂ 14 ಕೋಣೆಗಳುಳ್ಳ ಪ್ರವಾಸಿ ಮಂದಿರವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.</p>.<p>ಕೆಎಸ್ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕ ಕುಮಾರ ಪುಷ್ಕರ್ ಪೂಜೆ ನೆರವೇರಿಸಿ ಸರಳವಾಗಿ ಉದ್ಘಾಟಿಸಿದರು.</p>.<p>ಜಲಾಶಯದ ಬಲಭಾಗದ ಕುರುಚಲು ಅರಣ್ಯ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ ಸುಮಾರು 596 ಮೀಟರ್ ಎತ್ತರದಲ್ಲಿ ಕರ್ನಾಟಕ ವಿದ್ಯುತ್ ನಿಗಮ ಕಟ್ಟಿಸಿದ ಈ ಸುಂದರ ಜಪಾನಿಸ್ ಮಾದರಿಯ ಕಟ್ಟಡಗಳನ್ನು ಪ್ರವಾಸೋದ್ಯಮ ನಿಗಮ ಲೀಸ್ಗೆ ಪಡೆದು ಪ್ರವಾಸಿಗರಿಗೆ ಮುಕ್ತಗೊಳಿಸಿತು.</p>.<p><strong>ಶೇ 50ರಷ್ಟು ರಿಯಾಯಿತಿ: </strong>‘ಶುಕ್ರವಾರದರಿಂದ ಕೋಣೆಗಳ ಬುಕ್ಕಿಂಗ್ ಅವಕಾಶ ಕೆಎಸ್ಟಿಡಿಸಿಯ ವೆಬ್ಸೈಟ್ ಮೂಲಕ ಆರಂಭಗೊಂಡಿತು. ಪ್ರಾರಂಭೋತ್ಸವದ ಕೊಡುಗೆಯಾಗಿ ಶೇ 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ’ ಎಂದು ಎಂಡಿ ಕುಮಾರ್ ಪುಷ್ಕರ್ ಹೇಳಿದರು.</p>.<p><strong>ಜಲಕ್ರೀಡೆಗಳು:</strong> ‘ಪ್ರವಾಸೋದ್ಯಮ ಇಲಾಖೆ ವತಿಯಿಂದ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಕೆಬಿಜೆಎನ್ಎಲ್ ಅನುಮತಿ ಪಡೆದು ಹಲವು ಜಲಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಜಲಾಶಯದ ಹಿನ್ನೀರಿನಲ್ಲಿ ಸ್ಪೀಡ್, ಜೆಟ್ ಬೋಟಿಂಗ್, ಮೋಟಾರ್ ಬೋಟಿಂಗ್ ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು.</p>.<p>‘ಜಲಾಶಯದ ಹಿನ್ನೀರಿನ ಐಲ್ಯಾಂಡ್ಗಳನ್ನು ಅಭಿವೃದ್ಧಿಪಡಿಸಿ ಕೃಷ್ಣಾ ನದಿಯಿಂದ ಬೋಟ್ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ಯೋಜನೆ ಹೊಂದಿದ್ದೇವೆ. ಸರ್ಕಾರದ ಅನುದಾನ ದೊರೆಯದಿದ್ದರೆ, ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಜಾರಿಗೆ ತರಲಾಗುವುದು’ ಎಂದರು.</p>.<p>ಜಾಲತಾಣದಲ್ಲಿ ಆಲಮಟ್ಟಿ: ‘ಮೊಘಲ್, ಲವಕುಶ, ರಾಕ್, ಕೃಷ್ಣಾ, ಸಂಗೀತ ಕಾರಂಜಿ, ಲೇಸರ್ ಶೋ ಸೇರಿದಂತೆ ಹಲವಾರು ಉದ್ಯಾನಗಳಿಂದ ಪ್ರಸಿದ್ಧಗೊಂಡಿರುವ ಆಲಮಟ್ಟಿಯ ಬಗ್ಗೆ ಕೆಎಸ್ಟಿಡಿಸಿ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಲಾಗುವುದು. ವೆಬ್ಸೈಟ್ನಲ್ಲಿ ಆಲಮಟ್ಟಿಯ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಮಾಹಿತಿ ಸಹ ದೊರಯಲಿದೆ. ಪ್ರವಾಸಿಗರು ವಾಸ್ತವ್ಯ ಮಾಡಿದರೆ ಸ್ಥಳೀಯರ ವ್ಯಾಪಾರ–ವಹಿವಾಟು ಹೆಚ್ಚಲಿದೆ ಎಂದರು.</p>.<p>‘ನವದೆಹಲಿಯಲ್ಲಿರುವ ಕರ್ನಾಟಕ ಭವನ-3 ಅನ್ನು ಮೇಲ್ವಿಚಾರಣೆಗಾಗಿ ಕೆಎಸ್ಟಿಡಿಸಿ ನಿಗಮಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ’ ಎಂದು ಪುಷ್ಕರ್ ತಿಳಿಸಿದರು.</p>.<p>ಕೆಎಸ್ಟಿಡಿಸಿಯ ಜನರಲ್ ಮ್ಯಾನೇಜರ್ ಕೆ.ಎನ್. ಗಂಗಾಧರ, ಎಜಿಎಂ ಎಸ್.ಬಿ. ದೇಶಮುಖ, ಪ್ರಾದೇಶಿಕ ವ್ಯವಸ್ಥಾಪಕ ಉದಯಕುಮಾರ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ:</strong>ಜಲಾಶಯದ ಬಲಭಾಗದ ಸೀತಮ್ಮನಗಿರಿಯ ಮೇಲ್ಬಾಗದಲ್ಲಿ 7 ಕಾಟೇಜ್ ಹಾಗೂ 14 ಕೋಣೆಗಳುಳ್ಳ ಪ್ರವಾಸಿ ಮಂದಿರವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು.</p>.<p>ಕೆಎಸ್ಟಿಡಿಸಿಯ ವ್ಯವಸ್ಥಾಪಕ ನಿರ್ದೇಶಕ ಕುಮಾರ ಪುಷ್ಕರ್ ಪೂಜೆ ನೆರವೇರಿಸಿ ಸರಳವಾಗಿ ಉದ್ಘಾಟಿಸಿದರು.</p>.<p>ಜಲಾಶಯದ ಬಲಭಾಗದ ಕುರುಚಲು ಅರಣ್ಯ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ ಸುಮಾರು 596 ಮೀಟರ್ ಎತ್ತರದಲ್ಲಿ ಕರ್ನಾಟಕ ವಿದ್ಯುತ್ ನಿಗಮ ಕಟ್ಟಿಸಿದ ಈ ಸುಂದರ ಜಪಾನಿಸ್ ಮಾದರಿಯ ಕಟ್ಟಡಗಳನ್ನು ಪ್ರವಾಸೋದ್ಯಮ ನಿಗಮ ಲೀಸ್ಗೆ ಪಡೆದು ಪ್ರವಾಸಿಗರಿಗೆ ಮುಕ್ತಗೊಳಿಸಿತು.</p>.<p><strong>ಶೇ 50ರಷ್ಟು ರಿಯಾಯಿತಿ: </strong>‘ಶುಕ್ರವಾರದರಿಂದ ಕೋಣೆಗಳ ಬುಕ್ಕಿಂಗ್ ಅವಕಾಶ ಕೆಎಸ್ಟಿಡಿಸಿಯ ವೆಬ್ಸೈಟ್ ಮೂಲಕ ಆರಂಭಗೊಂಡಿತು. ಪ್ರಾರಂಭೋತ್ಸವದ ಕೊಡುಗೆಯಾಗಿ ಶೇ 50 ರಷ್ಟು ರಿಯಾಯಿತಿ ನೀಡಲಾಗುತ್ತಿದೆ’ ಎಂದು ಎಂಡಿ ಕುಮಾರ್ ಪುಷ್ಕರ್ ಹೇಳಿದರು.</p>.<p><strong>ಜಲಕ್ರೀಡೆಗಳು:</strong> ‘ಪ್ರವಾಸೋದ್ಯಮ ಇಲಾಖೆ ವತಿಯಿಂದ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಕೆಬಿಜೆಎನ್ಎಲ್ ಅನುಮತಿ ಪಡೆದು ಹಲವು ಜಲಕ್ರೀಡೆಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಜಲಾಶಯದ ಹಿನ್ನೀರಿನಲ್ಲಿ ಸ್ಪೀಡ್, ಜೆಟ್ ಬೋಟಿಂಗ್, ಮೋಟಾರ್ ಬೋಟಿಂಗ್ ಆರಂಭಿಸಲಾಗುವುದು’ ಎಂದು ಅವರು ತಿಳಿಸಿದರು.</p>.<p>‘ಜಲಾಶಯದ ಹಿನ್ನೀರಿನ ಐಲ್ಯಾಂಡ್ಗಳನ್ನು ಅಭಿವೃದ್ಧಿಪಡಿಸಿ ಕೃಷ್ಣಾ ನದಿಯಿಂದ ಬೋಟ್ ಮೂಲಕ ಪ್ರವಾಸಿಗರನ್ನು ಕರೆದೊಯ್ಯುವ ಯೋಜನೆ ಹೊಂದಿದ್ದೇವೆ. ಸರ್ಕಾರದ ಅನುದಾನ ದೊರೆಯದಿದ್ದರೆ, ಖಾಸಗಿ ಸಹಭಾಗಿತ್ವದಲ್ಲಿ ಇದನ್ನು ಜಾರಿಗೆ ತರಲಾಗುವುದು’ ಎಂದರು.</p>.<p>ಜಾಲತಾಣದಲ್ಲಿ ಆಲಮಟ್ಟಿ: ‘ಮೊಘಲ್, ಲವಕುಶ, ರಾಕ್, ಕೃಷ್ಣಾ, ಸಂಗೀತ ಕಾರಂಜಿ, ಲೇಸರ್ ಶೋ ಸೇರಿದಂತೆ ಹಲವಾರು ಉದ್ಯಾನಗಳಿಂದ ಪ್ರಸಿದ್ಧಗೊಂಡಿರುವ ಆಲಮಟ್ಟಿಯ ಬಗ್ಗೆ ಕೆಎಸ್ಟಿಡಿಸಿ ವತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸಲಾಗುವುದು. ವೆಬ್ಸೈಟ್ನಲ್ಲಿ ಆಲಮಟ್ಟಿಯ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಮಾಹಿತಿ ಸಹ ದೊರಯಲಿದೆ. ಪ್ರವಾಸಿಗರು ವಾಸ್ತವ್ಯ ಮಾಡಿದರೆ ಸ್ಥಳೀಯರ ವ್ಯಾಪಾರ–ವಹಿವಾಟು ಹೆಚ್ಚಲಿದೆ ಎಂದರು.</p>.<p>‘ನವದೆಹಲಿಯಲ್ಲಿರುವ ಕರ್ನಾಟಕ ಭವನ-3 ಅನ್ನು ಮೇಲ್ವಿಚಾರಣೆಗಾಗಿ ಕೆಎಸ್ಟಿಡಿಸಿ ನಿಗಮಕ್ಕೆ ನೀಡಲು ಸರ್ಕಾರ ನಿರ್ಧರಿಸಿದೆ’ ಎಂದು ಪುಷ್ಕರ್ ತಿಳಿಸಿದರು.</p>.<p>ಕೆಎಸ್ಟಿಡಿಸಿಯ ಜನರಲ್ ಮ್ಯಾನೇಜರ್ ಕೆ.ಎನ್. ಗಂಗಾಧರ, ಎಜಿಎಂ ಎಸ್.ಬಿ. ದೇಶಮುಖ, ಪ್ರಾದೇಶಿಕ ವ್ಯವಸ್ಥಾಪಕ ಉದಯಕುಮಾರ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>