<p><strong>ವಿಜಯಪುರ</strong>: ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಂಗಳವಾರ ನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಉತ್ತರಾರಾಧನೆಯು ಭಕ್ತಿಯಿಂದ ಜರುಗಿತು.</p>.<p>ಬೆಳಿಗ್ಗೆ ಸುಪ್ರಭಾತ, ವೇದ ಪಾರಾಯಣ ಜರುಗಿತು. ಬಳಿಕ ನಡೆದ ಅಷ್ಟೋತ್ತರ, ಫಲ ಪಂಚಾಮೃತ ಅಭಿಷೇಕ ನಡೆಯಿತು. ಪ್ರಲ್ಹಾದ ರಾಜರ ಉತ್ಸವ ಮೂರ್ತಿಗೆ ಪಾದಪೂಜೆ ಸಲ್ಲಿಸುವುದರೊಂದಿಗೆ ರಾಜಬೀದಿಯ ಭವ್ಯ ರಥೋತ್ಸವಕ್ಕೆ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ ಚಾಲನೆ ನೀಡಿದರು.</p>.<p>ಹೂವಿನಿಂದ ಅಲಂಕೃತ ವಾಹನದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಉತ್ಸವ ಮೂರ್ತಿ ಹಾಗೂ ಗುರುಸಾರ್ವಭೌಮರ ಭಾವ ಚಿತ್ರದ ಆಕರ್ಷಣೆ ತಂದಿತು. ಜುಮನಾಳದ ಕಿರಣಭಟ್ ಅವರ ನೇತೃತ್ವದ ಪಂಢರಪುರ ವಿಠ್ಠಲ ಮಂದಿರದ ಭಕ್ತರು ವಾರಕರಿ ಸಂಪ್ರದಾಯದಂತೆ ವೇಷ ಭೂಷಣ ತೊಟ್ಟು, ಲಯಬದ್ಧವಾಗಿ ಭಜನೆ ಮಾಡುತ್ತಾ ಮೆರವಣಿಗೆಯುದ್ದಕ್ಕೂ ಭಕ್ತಿ ಭಾವ ಮೆರೆದರು.</p>.<p>ಪ್ರಲ್ಹಾದರಾಜರ ಉತ್ಸವ ಮೂರ್ತಿಯನ್ನು ಶ್ರೀಮಠದ ಆವರಣದಲ್ಲಿ ತರುತ್ತಿದ್ದಂತೆ ಭಕ್ತರು ಭಕ್ತಿ ಭಾವದಿಂದ ತಮ್ಮ ಶ್ರದ್ಧೆ ಪ್ರದರ್ಶಿಸಿದರು. ಮೂರ್ತಿಯನ್ನು ಪ್ರದಕ್ಷಿಣೆ ಹಾಕಿಸುತ್ತಿದ್ದಂತೆ ಅದರ ಸುತ್ತಲೂ ತಾವು ಪ್ರದಕ್ಷಿಣೆ ಹಾಕಿದರು.</p>.<p>ಬಳಿಕ ಶ್ರೀಮಠದ ಆವರಣದಲ್ಲಿ ನಡೆದ ಭವ್ಯ ರಥೋತ್ಸವದಲ್ಲಿ ಸಂಗೀತ-ವಾದ್ಯ- ನೃತ್ಯವು ಭಕ್ತಿಯ ಪರಾಕಾಷ್ಠೆ ಮೆರೆಯಿತು. ರಥೋತ್ಸವದ ಮೇಲೆ ಪುಷ್ಪ ವೃಷ್ಟಿ ಮಾಡಲಾಯಿತು. ನೆರೆದ ಭಕ್ತರೆಲ್ಲ ಭಾವ ಪುಳಕಿತರಾಗಿ ಕುಣಿದು ಕುಪ್ಪಳಿಸಿದರು. ಭಕ್ತರೆಲ್ಲ ಮೈತುಂಬ ಗುಲಾಲು ಎರಚಿಕೊಂಡು ಭಕ್ತಿ ಭಾವ ಮೆರೆದರು.</p>.<p>ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ ಪಾದ ಪೂಜೆ ನೆರವೇರಿಸಲಾಯಿತು. ಆನಂತರ ಅರ್ಚನೆ, ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ ಜರುಗಿ ತೀರ್ಥ ಪ್ರಸಾದ ನಡೆಯಿತು.</p>.<p>ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ವಾಮನರಾವ ದೇಶಪಾಂಡೆ, ಶ್ರೀಕೃಷ್ಣ ಪಡಗಾನೂರ, ಕಿರಣ ಭಟ್ ಜೋಶಿ ಜುಮನಾಳಕರ, ಅಶೋಕ ದಿಕ್ಷಿತ್, ಶಾಮಭಟ್ಟ ಜೋಶಿ, ಶಂಭು ಭಟ್ ಜೋಶಿ, ಕಿರಣ ಕುಲಕರ್ಣಿ, ಭೀಮಣ್ಣ ಕುಲಕರ್ಣಿ, ವಿಜಯೀಂದ್ರ ನಾಮಣ್ಣ, ಮನೋಜ ಶಹಾಪುರ, ಬಂಡಾಚಾರ್ಯ ಜೋಶಿ ಕೂಡಗಿ, ವಿಜಯಿಂದ್ರ ಜೋಶಿ, ಅಶೋಕ ತಾವರಗೇರಿ, ಗೋವಿಂದ ಸವದತ್ತಿ, ಕಿರಣ ಕುಲಕರ್ಣಿ, ಗಿರೀಶ ಕುಲಕರ್ಣಿ, ಸಂತೋಷ ಕೌತಾಳ, ಶ್ರೀಧರ ಹರಿದಾಸ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಂಗಳವಾರ ನಗರದ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಉತ್ತರಾರಾಧನೆಯು ಭಕ್ತಿಯಿಂದ ಜರುಗಿತು.</p>.<p>ಬೆಳಿಗ್ಗೆ ಸುಪ್ರಭಾತ, ವೇದ ಪಾರಾಯಣ ಜರುಗಿತು. ಬಳಿಕ ನಡೆದ ಅಷ್ಟೋತ್ತರ, ಫಲ ಪಂಚಾಮೃತ ಅಭಿಷೇಕ ನಡೆಯಿತು. ಪ್ರಲ್ಹಾದ ರಾಜರ ಉತ್ಸವ ಮೂರ್ತಿಗೆ ಪಾದಪೂಜೆ ಸಲ್ಲಿಸುವುದರೊಂದಿಗೆ ರಾಜಬೀದಿಯ ಭವ್ಯ ರಥೋತ್ಸವಕ್ಕೆ ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ ಚಾಲನೆ ನೀಡಿದರು.</p>.<p>ಹೂವಿನಿಂದ ಅಲಂಕೃತ ವಾಹನದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಉತ್ಸವ ಮೂರ್ತಿ ಹಾಗೂ ಗುರುಸಾರ್ವಭೌಮರ ಭಾವ ಚಿತ್ರದ ಆಕರ್ಷಣೆ ತಂದಿತು. ಜುಮನಾಳದ ಕಿರಣಭಟ್ ಅವರ ನೇತೃತ್ವದ ಪಂಢರಪುರ ವಿಠ್ಠಲ ಮಂದಿರದ ಭಕ್ತರು ವಾರಕರಿ ಸಂಪ್ರದಾಯದಂತೆ ವೇಷ ಭೂಷಣ ತೊಟ್ಟು, ಲಯಬದ್ಧವಾಗಿ ಭಜನೆ ಮಾಡುತ್ತಾ ಮೆರವಣಿಗೆಯುದ್ದಕ್ಕೂ ಭಕ್ತಿ ಭಾವ ಮೆರೆದರು.</p>.<p>ಪ್ರಲ್ಹಾದರಾಜರ ಉತ್ಸವ ಮೂರ್ತಿಯನ್ನು ಶ್ರೀಮಠದ ಆವರಣದಲ್ಲಿ ತರುತ್ತಿದ್ದಂತೆ ಭಕ್ತರು ಭಕ್ತಿ ಭಾವದಿಂದ ತಮ್ಮ ಶ್ರದ್ಧೆ ಪ್ರದರ್ಶಿಸಿದರು. ಮೂರ್ತಿಯನ್ನು ಪ್ರದಕ್ಷಿಣೆ ಹಾಕಿಸುತ್ತಿದ್ದಂತೆ ಅದರ ಸುತ್ತಲೂ ತಾವು ಪ್ರದಕ್ಷಿಣೆ ಹಾಕಿದರು.</p>.<p>ಬಳಿಕ ಶ್ರೀಮಠದ ಆವರಣದಲ್ಲಿ ನಡೆದ ಭವ್ಯ ರಥೋತ್ಸವದಲ್ಲಿ ಸಂಗೀತ-ವಾದ್ಯ- ನೃತ್ಯವು ಭಕ್ತಿಯ ಪರಾಕಾಷ್ಠೆ ಮೆರೆಯಿತು. ರಥೋತ್ಸವದ ಮೇಲೆ ಪುಷ್ಪ ವೃಷ್ಟಿ ಮಾಡಲಾಯಿತು. ನೆರೆದ ಭಕ್ತರೆಲ್ಲ ಭಾವ ಪುಳಕಿತರಾಗಿ ಕುಣಿದು ಕುಪ್ಪಳಿಸಿದರು. ಭಕ್ತರೆಲ್ಲ ಮೈತುಂಬ ಗುಲಾಲು ಎರಚಿಕೊಂಡು ಭಕ್ತಿ ಭಾವ ಮೆರೆದರು.</p>.<p>ಪ್ರಲ್ಹಾದರಾಜರ ಉತ್ಸವ ಮೂರ್ತಿಗೆ ಕನಕಾಭಿಷೇಕ ಪಾದ ಪೂಜೆ ನೆರವೇರಿಸಲಾಯಿತು. ಆನಂತರ ಅರ್ಚನೆ, ನೈವೇದ್ಯ, ಅಲಂಕಾರ, ಮಹಾ ಮಂಗಳಾರತಿ ಜರುಗಿ ತೀರ್ಥ ಪ್ರಸಾದ ನಡೆಯಿತು.</p>.<p>ಶ್ರೀಮಠದ ವಿಚಾರಣಾಕರ್ತಾ ಗೋಪಾಲ ನಾಯಕ, ವಾಮನರಾವ ದೇಶಪಾಂಡೆ, ಶ್ರೀಕೃಷ್ಣ ಪಡಗಾನೂರ, ಕಿರಣ ಭಟ್ ಜೋಶಿ ಜುಮನಾಳಕರ, ಅಶೋಕ ದಿಕ್ಷಿತ್, ಶಾಮಭಟ್ಟ ಜೋಶಿ, ಶಂಭು ಭಟ್ ಜೋಶಿ, ಕಿರಣ ಕುಲಕರ್ಣಿ, ಭೀಮಣ್ಣ ಕುಲಕರ್ಣಿ, ವಿಜಯೀಂದ್ರ ನಾಮಣ್ಣ, ಮನೋಜ ಶಹಾಪುರ, ಬಂಡಾಚಾರ್ಯ ಜೋಶಿ ಕೂಡಗಿ, ವಿಜಯಿಂದ್ರ ಜೋಶಿ, ಅಶೋಕ ತಾವರಗೇರಿ, ಗೋವಿಂದ ಸವದತ್ತಿ, ಕಿರಣ ಕುಲಕರ್ಣಿ, ಗಿರೀಶ ಕುಲಕರ್ಣಿ, ಸಂತೋಷ ಕೌತಾಳ, ಶ್ರೀಧರ ಹರಿದಾಸ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>