<p><strong>ವಿಜಯಪುರ: </strong>ನಗರದ ಕೋರ್ಟ್ ಕಾಲೊನಿ ನಿವಾಸಿ ಸಂಗಮೇಶ ಬದಾಮಿ ಅವರಿಗೆ ನಾಟಕ ಅಕಾಡೆಮಿಯ 2019–20ನೇ ಸಾಲಿನ ರಂಗ ಪ್ರಶಸ್ತಿ ಲಭಿಸಿದೆ.</p>.<p>40 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಕವಿತಾ ಲಂಕೇಶರ ‘ಅಲೆಮಾರಿ’, ದೊರೆ ಭಗವಾನ ನಿರ್ದೇಶನದ ‘ಬಸವಣ್ಣ’, ಟಿ.ಎಸ್.ರಂಗಾ ನಿರ್ದೇಶನದ ‘ಬರದನಾಡಿನ ಧ್ರುವತಾರೆ’ (ಸಾಕ್ಷ್ಯಚಿತ್ರ)ಯಲ್ಲಿ ಅಭಿನಯಿಸಿದ್ದಾರೆ.</p>.<p>ನಟ, ರಂಗ ನಿರ್ದೇಶಕ, ಬೀದಿ ನಾಟಕಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ‘ಮೊದಲ ಹೆಜ್ಜೆ’ ಕವನ ಸಂಕಲನ, ‘ಕಥಾ ಸ್ಪಂದನ’, ‘ನ್ಯಾಯ ಸಂದೇಶ’, ‘ಸಹಕಾರ ಸಾಧನ’ (ಸಂಪಾದಿತ ಕೃತಿಗಳು) ಕೃತಿಗಳನ್ನು ರಚಿಸಿದ್ದಾರೆ. ಪುಣೆ, ಮುಂಬಯಿ, ನವದೆಹಲಿ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ.</p>.<p>1952ರ ಜೂನ್ 1ರಂದು ಜನಿಸಿರುವ ಸಂಗಮೇಶ ಬದಾಮಿ ಅವರು ಕನ್ನಡ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಇವರಿಗೆ ‘ಸಿಜಿಕೆ ಪ್ರಶಸ್ತಿ’, ‘ಹೊಯ್ಸಳ ಪ್ರಶಸ್ತಿ’, ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.</p>.<p>‘40 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಮೊದಲೇ ಪ್ರಶಸ್ತಿ ಸಿಗಬೇಕಿತ್ತು. ಈಗಳಾದರೂ ಅಕಾಡೆಮಿಯವರು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿಯಾಗಿದೆ. ನಗರದಲ್ಲಿ ಇನ್ನೊಂದು ರಂಗಮಂದಿರ ಹಾಗೂ ಜಿಲ್ಲೆಯಲ್ಲಿ ಒಂದು ಕಲಾ ಗ್ರಾಮವನ್ನು ನಿರ್ಮಿಸಬೇಕು’ ಎಂದು ಸಂಗಮೇಶ ಬದಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ನಗರದ ಕೋರ್ಟ್ ಕಾಲೊನಿ ನಿವಾಸಿ ಸಂಗಮೇಶ ಬದಾಮಿ ಅವರಿಗೆ ನಾಟಕ ಅಕಾಡೆಮಿಯ 2019–20ನೇ ಸಾಲಿನ ರಂಗ ಪ್ರಶಸ್ತಿ ಲಭಿಸಿದೆ.</p>.<p>40 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಕವಿತಾ ಲಂಕೇಶರ ‘ಅಲೆಮಾರಿ’, ದೊರೆ ಭಗವಾನ ನಿರ್ದೇಶನದ ‘ಬಸವಣ್ಣ’, ಟಿ.ಎಸ್.ರಂಗಾ ನಿರ್ದೇಶನದ ‘ಬರದನಾಡಿನ ಧ್ರುವತಾರೆ’ (ಸಾಕ್ಷ್ಯಚಿತ್ರ)ಯಲ್ಲಿ ಅಭಿನಯಿಸಿದ್ದಾರೆ.</p>.<p>ನಟ, ರಂಗ ನಿರ್ದೇಶಕ, ಬೀದಿ ನಾಟಕಗಳ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ‘ಮೊದಲ ಹೆಜ್ಜೆ’ ಕವನ ಸಂಕಲನ, ‘ಕಥಾ ಸ್ಪಂದನ’, ‘ನ್ಯಾಯ ಸಂದೇಶ’, ‘ಸಹಕಾರ ಸಾಧನ’ (ಸಂಪಾದಿತ ಕೃತಿಗಳು) ಕೃತಿಗಳನ್ನು ರಚಿಸಿದ್ದಾರೆ. ಪುಣೆ, ಮುಂಬಯಿ, ನವದೆಹಲಿ, ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ.</p>.<p>1952ರ ಜೂನ್ 1ರಂದು ಜನಿಸಿರುವ ಸಂಗಮೇಶ ಬದಾಮಿ ಅವರು ಕನ್ನಡ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಇವರಿಗೆ ‘ಸಿಜಿಕೆ ಪ್ರಶಸ್ತಿ’, ‘ಹೊಯ್ಸಳ ಪ್ರಶಸ್ತಿ’, ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.</p>.<p>‘40 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈ ಮೊದಲೇ ಪ್ರಶಸ್ತಿ ಸಿಗಬೇಕಿತ್ತು. ಈಗಳಾದರೂ ಅಕಾಡೆಮಿಯವರು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿಯಾಗಿದೆ. ನಗರದಲ್ಲಿ ಇನ್ನೊಂದು ರಂಗಮಂದಿರ ಹಾಗೂ ಜಿಲ್ಲೆಯಲ್ಲಿ ಒಂದು ಕಲಾ ಗ್ರಾಮವನ್ನು ನಿರ್ಮಿಸಬೇಕು’ ಎಂದು ಸಂಗಮೇಶ ಬದಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>