ಬಸವನಬಾಗೇವಾಡಿ ಪಟ್ಟಣದ ನಿಡಗುಂದಿ ರಸ್ತೆಯ ಎಲ್ಐಸಿ ಕಚೇರಿ ಎದುರಿನ ಬಸವನಗರ ರಸ್ತೆಯಲ್ಲಿರುವ ತೆರೆದ ಚರಂಡಿ.
ಬಸವನಬಾಗೇವಾಡಿ ಪುರಸಭೆ
ಪಟ್ಟಣದಲ್ಲಿ ಕೊಳಚೆ ನೀರಿನ ಚರಂಡಿಗಳನ್ನು ತೆರೆದು ಬಿಟ್ಟಿದ್ದರಿಂದ ಎಲ್ಲೆಂದರಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿ ಪಟ್ಟಣ ನಿವಾಸಿಗಳು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕೂಡಲೇ ಪುರಸಭೆಯ ಚುನಾಯಿತ ಸದಸ್ಯರು ಅಧಿಕಾರಿಗಳು ಹಂದಿಗಳ ಹಾವಳಿ ನಿಯಂತ್ರಿಸಲು ತೆರೆದ ಚರಂಡಿಗಳಿಗೆ ಸ್ಲ್ಯಾಬ್ ಗಳನ್ನು ಅಳವಡಿಸಿ ಮುಚ್ಚಲು ಕ್ರಮ ಕೈಗೊಂಡು ಸಾರ್ವಜನಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು.
- ಶಂಕರಗೌಡ ಬಿರಾದಾರ ಸಂಸ್ಥಾಪಕ ಅಧ್ಯಕ್ಷ ರಾಷ್ಟ್ರೀಯ ಬಸವಸೈನ್ಯ ಬಸವನಬಾಗೇವಾಡಿ
ಬಸವನಬಾಗೇವಾಡಿ ಪಟ್ಟಣದ ಕೆಲವು ವಾರ್ಡ್ ಗಳಲ್ಲಿ ಕೊಳಚೆ ನೀರಿನ ಚರಂಡಿಗಳನ್ನು ತೆರೆದು ಬಿಟ್ಟಿರುವುದು ಅದರಿಂದ ಹಂದಿಗಳ ಕಾಟ ಜನರಿಗೆ ತೊಂದರೆಯಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಕೆಲವು ವಾರ್ಡ್ ಗಳಲ್ಲಿ ಈಗಾಗಲೇ ಚರಂಡಿಗಳಿಗೆ ಸ್ಲ್ಯಾಬ್ ಗಳನ್ನು ಅಳವಡಿಸಲಾಗಿದೆ. ಅನುದಾನ ಬಂದ ಬಳಿಕ ಎಲ್ಲಾ ವಾರ್ಡ್ ಗಳಲ್ಲಿನ ತೆರೆದ ಚರಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುತ್ತೇವೆ.