<p><strong>ಮುದ್ದೇಬಿಹಾಳ (ವಿಜಯಪುರ ಜಿಲ್ಲೆ):</strong> ತಾಲ್ಲೂಕಿನ ಬಸರಕೋಡದಲ್ಲಿ ಬುಧವಾರ ಸಂಜೆ ಬೀಸಿದ ಭಾರಿ ಬಿರುಗಾಳಿ ಹಾಗೀ ಆಲಿಕಲ್ಲು ಸಮೇತ ಮಳೆಗೆ ಪಪ್ಪಾಯ, ದ್ರಾಕ್ಷಿ ಬೆಳೆ ನಾಶವಾಗಿದೆ.</p>.<p>ಗ್ರಾಮದ ರೈತ ಕೆ.ವೈ. ಬಿರಾದಾರ ಅವರ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಂದಾಜು ನಾಲ್ಕು ಸಾವಿರ ಪಪ್ಪಾಯ ಸಸಿಗಳು ನೆಲಕಚ್ಚಿವೆ. ‘ಎರಡು ತಿಂಗಳು ಕಳೆದಿದ್ದರೆ ಫಸಲು ಕೈಗೆ ಬರುತ್ತಿತ್ತು. ಬೆಳೆಗಾಗಿ ₹ 3 ಲಕ್ಷ ಖರ್ಚು ಮಾಡಿದ್ದು ಕೈಗೆ ಬಂದಿದ್ದು ಬಾಯಿಗೆ ಬಾರದಂತಾಗಿದೆ’ ಎಂದು ಬಿರಾದಾರ ಅಲವತ್ತುಕೊಂಡಿದ್ದಾರೆ.</p>.<p>ಗ್ರಾಮದ ಶಿವಾನಂದ ಬಿರಾದಾರ ಅವರು ಆರು ಎಕರೆ ಪ್ರದೇಶದಲ್ಲಿ ಹಾಕಿದ್ದ ದ್ರಾಕ್ಷಿ ತೋಟಕ್ಕೂ ಹಾನಿಯಾಗಿದ್ದು ಬೆಳೆ ನೆಲಕಚ್ಚಿ ನಷ್ಟವುಂಟಾಗಿದೆ.</p>.<p>ಢವಳಗಿ ಹೋಬಳಿಯ ಬಸರಕೋಡ, ರೂಢಗಿ, ಅಗಸಬಾಳ ಭಾಗದಲ್ಲಿ ಬುಧವಾರ ಸಂಜೆ ಬೀಸಿದ ಬಿರುಗಾಳಿಗೆ ಹಲವು ಮರಗಳು ಉರುಳಿ ಬಿದ್ದಿದ್ದು ವಿದ್ಯುತ್ ವ್ಯತ್ಯಯವಾಗಿತ್ತು. ಹೊಲದಲ್ಲಿದ್ದ ತೋಟಗಾರಿಕೆ ಬೆಳೆಯೂ ನೆಲಕಚ್ಚಿದೆ.</p>.<p>ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ರೈತ ಮುಖಂಡ ಗುರುನಾಥಗೌಡ ಬಿರಾದಾರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದ್ದೇಬಿಹಾಳ (ವಿಜಯಪುರ ಜಿಲ್ಲೆ):</strong> ತಾಲ್ಲೂಕಿನ ಬಸರಕೋಡದಲ್ಲಿ ಬುಧವಾರ ಸಂಜೆ ಬೀಸಿದ ಭಾರಿ ಬಿರುಗಾಳಿ ಹಾಗೀ ಆಲಿಕಲ್ಲು ಸಮೇತ ಮಳೆಗೆ ಪಪ್ಪಾಯ, ದ್ರಾಕ್ಷಿ ಬೆಳೆ ನಾಶವಾಗಿದೆ.</p>.<p>ಗ್ರಾಮದ ರೈತ ಕೆ.ವೈ. ಬಿರಾದಾರ ಅವರ ನಾಲ್ಕು ಎಕರೆ ಜಮೀನಿನಲ್ಲಿ ಬೆಳೆದಿದ್ದ ಅಂದಾಜು ನಾಲ್ಕು ಸಾವಿರ ಪಪ್ಪಾಯ ಸಸಿಗಳು ನೆಲಕಚ್ಚಿವೆ. ‘ಎರಡು ತಿಂಗಳು ಕಳೆದಿದ್ದರೆ ಫಸಲು ಕೈಗೆ ಬರುತ್ತಿತ್ತು. ಬೆಳೆಗಾಗಿ ₹ 3 ಲಕ್ಷ ಖರ್ಚು ಮಾಡಿದ್ದು ಕೈಗೆ ಬಂದಿದ್ದು ಬಾಯಿಗೆ ಬಾರದಂತಾಗಿದೆ’ ಎಂದು ಬಿರಾದಾರ ಅಲವತ್ತುಕೊಂಡಿದ್ದಾರೆ.</p>.<p>ಗ್ರಾಮದ ಶಿವಾನಂದ ಬಿರಾದಾರ ಅವರು ಆರು ಎಕರೆ ಪ್ರದೇಶದಲ್ಲಿ ಹಾಕಿದ್ದ ದ್ರಾಕ್ಷಿ ತೋಟಕ್ಕೂ ಹಾನಿಯಾಗಿದ್ದು ಬೆಳೆ ನೆಲಕಚ್ಚಿ ನಷ್ಟವುಂಟಾಗಿದೆ.</p>.<p>ಢವಳಗಿ ಹೋಬಳಿಯ ಬಸರಕೋಡ, ರೂಢಗಿ, ಅಗಸಬಾಳ ಭಾಗದಲ್ಲಿ ಬುಧವಾರ ಸಂಜೆ ಬೀಸಿದ ಬಿರುಗಾಳಿಗೆ ಹಲವು ಮರಗಳು ಉರುಳಿ ಬಿದ್ದಿದ್ದು ವಿದ್ಯುತ್ ವ್ಯತ್ಯಯವಾಗಿತ್ತು. ಹೊಲದಲ್ಲಿದ್ದ ತೋಟಗಾರಿಕೆ ಬೆಳೆಯೂ ನೆಲಕಚ್ಚಿದೆ.</p>.<p>ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ರೈತ ಮುಖಂಡ ಗುರುನಾಥಗೌಡ ಬಿರಾದಾರ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>