ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ನೇಸರ ತೊಟ್ಟ ಕಾಮನಬಿಲ್ಲಿನ ಉಂಗುರ!

Last Updated 2 ಜೂನ್ 2021, 14:56 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಹಲವೆಡೆ ಬುಧವಾರ ಮಧ್ಯಾಹ್ನದ ವೇಳೆ ಆಗಸದಲ್ಲಿ ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರ ಸೃಷ್ಟಿಯಾದ ಖಗೋಳ ವಿಸ್ಮಯ ಜನರ ಮನಸೂರೆಗೊಂಡಿತು.

ತಾಳಿಕೋಟೆ, ನಾಲತವಾಡ, ಕಲಕೇರಿ, ಆಲಮಟ್ಟಿ, ನಿಡಗುಂದಿ ವ್ಯಾಪ್ತಿಯಲ್ಲಿ ಕಂಡುಬಂದ ಪ್ರಕೃತಿಯ ಈ ವಿಸ್ಮಯವನ್ನು ಜನರು ಕಣ್ತುಂಬಿಕೊಂಡರು. ಮೋಡದ ಮರೆಯಲ್ಲಿ ಬಹಳ ಹೊತ್ತು ಕಂಡುಬಂದ ಈ ಖಗೋಳ ಕೌತಕವನ್ನು ಅನೇಕರು ತಮ್ಮ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆ ಹಿಡಿದರು.

ಸೂರ್ಯನ ಸುತ್ತ ಆವರಿಸಿರುವ ಮೋಡದಲ್ಲಿ ಹುದುಗಿರುವ ಮಂಜಿನ ಕಣಗಳ ಮೇಲೆ ಬೆಳಕು ತೂರಿಕೊಂಡು ಭೂಮಿಯತ್ತ ಬರುವಾಗ ಈ ಆಕರ್ಷಕ ವೃತ್ತ ಗೋಚರಿಸುತ್ತದೆ. ವಾತಾವರಣದಲ್ಲಿ ತೇವಾಂಶ ಹೆಚ್ಚು ಮತ್ತು ಮಳೆ ಬರುವ ಮುನ್ಸೂಚನೆಯನ್ನು ಇದು ನೀಡುತ್ತದೆ.

ವಾರದ ಹಿಂದೆ ಬೆಂಗಳೂರು ಭಾಗದಲ್ಲಿ ಕಾಣಿಸಿಕೊಂಡಿದ್ದ ಈ ವಿಸ್ಮಯ ಇದೀಗ ವಿಜಯಪುರ, ಯಾದಗಿರಿ, ಕಲಬುರ್ಗಿ, ಬೀದರ್‌ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT