<p><strong>ವಿಜಯಪುರ</strong>: ಮುದ್ದೇಬಿಹಾಳ ತಾಲ್ಲೂಕು ಕೋಳೂರು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕೊನೇಯ ಅರಸ ಅಳಿಯ ರಾಮರಾಯರ ಸಮಾಧಿಯನ್ನು ಅತಿ ಶೀಘ್ರದಲ್ಲಿ ಅಭಿವೃದ್ದಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.</p>.<p>ಕೋಳೂರು ಗ್ರಾಮದಲ್ಲಿರುವ ರಾಮರಾಯರ ಸಮಾಧಿ ಸ್ಥಳಕ್ಕೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಸಮಾಧಿಯ ಸ್ಥಿತಗತಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.</p>.<p>ತಾಳಿಕೋಟೆ ಕದನವೆಂದೇ ಖ್ಯಾತಿ ಪಡೆದಿರುವ ರಕ್ಕಸ-ತಂಗಡಗಿ ಯುದ್ಧದಲ್ಲಿ ಅವನತಿ ಹೊಂದಿದ ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಏಕೈಕ ಕನ್ನಡ ಅರಸರ ಸಾಮ್ರಾಜ್ಯವಾಗಿತ್ತು. ಆದರೆ, ಇದರ ಕೊನೇಗಾಲ ದುರಂತಮಯವಾಗಿತ್ತು ಎಂದರು</p>.<p>ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಕೃಷ್ಣಾ ನದಿ ತೀರದ ರಕ್ಕಸ ತಂಗಡಗಿಯಿಂದ ಹಿಡಿದು ತಾಳಿಕೋಟೆವರೆಗೂ ಯುದ್ಧದ ಕುರುಹುಗಳು ಇವೆ. ಇದೊಂದು ರಣಭೂಮಿ ಆಗಿತ್ತು. ಈಗಾಗಲೇ ನನ್ನ ಕೋರಿಕೆ ಮತ್ತು ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಪರಿಣಾಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರದೇಶದಲ್ಲಿರುವ ಐತಿಹಾಸಿಕ ಪ್ರದೇಶಗಳ ಅಭಿವೃದ್ದಿ ಕುರಿತು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ವಿಶೇಷ ಅನುದಾನವೂ ಮುಂದಿನ ದಿನಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು.</p>.<p>ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಲು ಮತ್ತು ಈ ಭಾಗದ ಐತಿಹಾಸಿಕ ಪ್ರದೇಶಗಳನ್ನು ಪ್ರವಾಸಿ ತಾಣವನ್ನಾಗಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ದೇಶ ವಿದೇಶದ ಪ್ರವಾಸಿಗಳು ಈ ಭಾಗಕ್ಕೆ ಆಗಮಿಸಿ ಇಲ್ಲಿನ ಐತಿಹಾಸಿಕ, ಪ್ರವಾಸಿ ತಾಣಗಳ ಸೌಂದರ್ಯ ಅನುಭವಿಸುವ ರೀತಿಯಲ್ಲಿ ಅಭಿವೃದ್ಧಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.</p>.<p>ಸಮಾಧಿಯ ಮೇಲಿರುವ ಶಿವಲಿಂಗ, ವೀರಗಲ್ಲು, ಬಸವಣ್ಣ, ಕಲ್ಲುನಾಗರ, ಯುದ್ಧದ ಚಿತ್ರಣ ತಿಳಿಸುವ ಕಲ್ಲು ಮುಂತಾದ ಪಳೆಯುಳಿಕೆಗಳನ್ನು ಶಾಸಕರು ಇದೇ ಸಂದರ್ಭ ಪರಿಶೀಲಿಸಿ ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು.</p>.<p>ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಗ್ರಾಮದ ಪ್ರಮುಖರು ಇದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಮುದ್ದೇಬಿಹಾಳ ತಾಲ್ಲೂಕು ಕೋಳೂರು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದ ಕೊನೇಯ ಅರಸ ಅಳಿಯ ರಾಮರಾಯರ ಸಮಾಧಿಯನ್ನು ಅತಿ ಶೀಘ್ರದಲ್ಲಿ ಅಭಿವೃದ್ದಿಪಡಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಕೊಳ್ಳಲಾಗುತ್ತದೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.</p>.<p>ಕೋಳೂರು ಗ್ರಾಮದಲ್ಲಿರುವ ರಾಮರಾಯರ ಸಮಾಧಿ ಸ್ಥಳಕ್ಕೆ ಗ್ರಾಮಸ್ಥರೊಂದಿಗೆ ಭೇಟಿ ನೀಡಿ ಸಮಾಧಿಯ ಸ್ಥಿತಗತಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು.</p>.<p>ತಾಳಿಕೋಟೆ ಕದನವೆಂದೇ ಖ್ಯಾತಿ ಪಡೆದಿರುವ ರಕ್ಕಸ-ತಂಗಡಗಿ ಯುದ್ಧದಲ್ಲಿ ಅವನತಿ ಹೊಂದಿದ ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಏಕೈಕ ಕನ್ನಡ ಅರಸರ ಸಾಮ್ರಾಜ್ಯವಾಗಿತ್ತು. ಆದರೆ, ಇದರ ಕೊನೇಗಾಲ ದುರಂತಮಯವಾಗಿತ್ತು ಎಂದರು</p>.<p>ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಕೃಷ್ಣಾ ನದಿ ತೀರದ ರಕ್ಕಸ ತಂಗಡಗಿಯಿಂದ ಹಿಡಿದು ತಾಳಿಕೋಟೆವರೆಗೂ ಯುದ್ಧದ ಕುರುಹುಗಳು ಇವೆ. ಇದೊಂದು ರಣಭೂಮಿ ಆಗಿತ್ತು. ಈಗಾಗಲೇ ನನ್ನ ಕೋರಿಕೆ ಮತ್ತು ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಪರಿಣಾಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರದೇಶದಲ್ಲಿರುವ ಐತಿಹಾಸಿಕ ಪ್ರದೇಶಗಳ ಅಭಿವೃದ್ದಿ ಕುರಿತು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ವಿಶೇಷ ಅನುದಾನವೂ ಮುಂದಿನ ದಿನಗಳಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದರು.</p>.<p>ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಿಕೊಡಲು ಮತ್ತು ಈ ಭಾಗದ ಐತಿಹಾಸಿಕ ಪ್ರದೇಶಗಳನ್ನು ಪ್ರವಾಸಿ ತಾಣವನ್ನಾಗಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ದೇಶ ವಿದೇಶದ ಪ್ರವಾಸಿಗಳು ಈ ಭಾಗಕ್ಕೆ ಆಗಮಿಸಿ ಇಲ್ಲಿನ ಐತಿಹಾಸಿಕ, ಪ್ರವಾಸಿ ತಾಣಗಳ ಸೌಂದರ್ಯ ಅನುಭವಿಸುವ ರೀತಿಯಲ್ಲಿ ಅಭಿವೃದ್ಧಿ ಮಾಡುವ ಸಂಕಲ್ಪ ತೊಟ್ಟಿದ್ದೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.</p>.<p>ಸಮಾಧಿಯ ಮೇಲಿರುವ ಶಿವಲಿಂಗ, ವೀರಗಲ್ಲು, ಬಸವಣ್ಣ, ಕಲ್ಲುನಾಗರ, ಯುದ್ಧದ ಚಿತ್ರಣ ತಿಳಿಸುವ ಕಲ್ಲು ಮುಂತಾದ ಪಳೆಯುಳಿಕೆಗಳನ್ನು ಶಾಸಕರು ಇದೇ ಸಂದರ್ಭ ಪರಿಶೀಲಿಸಿ ಗ್ರಾಮಸ್ಥರಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡರು.</p>.<p>ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಗ್ರಾಮದ ಪ್ರಮುಖರು ಇದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>