<p><strong>ವಿಜಯಪುರ</strong>: ‘ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ, ಲಿಂಗಾಯತ, ವೀರಶೈವ ಇವೆಲ್ಲ ಧರ್ಮಗಳಲ್ಲ, ಮತಗಳು. ಇವುಗಳನ್ನು ಧರ್ಮ ಎಂದು ಹೇಳುತ್ತಿರುವುದಕ್ಕೆ ಸಮಸ್ಯೆಗಳು ಉದ್ಭವಿಸುತ್ತಿವೆ’ ಎಂದು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗ ಸ್ವಾಮೀಜಿ ಹೇಳಿದರು.</p>.<p>ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮೀಜಿಗಳ 3ನೇ ವರ್ಷದ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ‘ದಯೆ ಮತ್ತು ಧರ್ಮ’ ಗೋಷ್ಠಿಯನ್ನುದ್ದೇಶಿಸಿ ಆಶೀರ್ವಚನ ನೀಡಿದರು.</p>.<p>‘ಧರ್ಮ ಎಂದರೆ ಧಾರಣೆ ಮಾಡುವುದು, ಧರ್ಮ ಎನ್ನುವುದು ಅತೀ ಸೂಕ್ಷ್ಮ ಪದ, ದೇಶದಲ್ಲಿ ಧರ್ಮದ ಬಗ್ಗೆ ಗೊಂದಲಗಳು ನಡೆಯುತ್ತಿರುವುದಕ್ಕೆ ಕಾರಣ ನಾವು ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನಾವು ನಮ್ಮ ಸ್ವಭಾವಕ್ಕೆ ತಕ್ಕಂತೆ ಜಾತಿ, ಮತಗಳನ್ನು ಮಾಡಿಕೊಂಡಿದ್ದೇವೆ. ಆದರೆ, ನಾವೆಲ್ಲರೂ ದಯೆ-ಧರ್ಮವನ್ನು ಪಾಲಿಸಬೇಕು’ ಎಂದರು.</p>.<p>‘ಭಾರತದ ಸಂಸ್ಕೃತಿಗೆ ಆಪತ್ತುಗಳು ಬಂದಾಗ ಅದನ್ನು ಕಾಪಾಡಿದವರು ಸನ್ಯಾಸಿಗಳು. ಸಿದ್ಧೇಶ್ವರ ಶ್ರೀಗಳು ಜ್ಞಾನವನ್ನೇ ಉಣಬಡಿಸಿದ್ದಾರೆ. ಸೃಷ್ಟಿಯ ಪ್ರತಿಯೊಂದು ವಸ್ತುವೂ ಪರಮಾತ್ಮನ ಸೃಷ್ಟಿ. ಎಲ್ಲ ಚರಾ-ಚರ ವಸ್ತುಗಳ ಮೇಲೆ, ಪ್ರಾಣಿ, ಪಕ್ಷಿಗಳ ಮೇಲೆ ನಾವು ದಯೆ ಕರುಣೆ ತೋರಿಸಬೇಕು. ಸದಾ ಅಪ್ಪಗಳು ಪ್ರೀತಿಸುತ್ತಿದ್ದ ಪರಿಸರ, ಪ್ರಕೃತಿಯನ್ನು ನಾವು ರಕ್ಷಣೆ ಮಾಡಬೇಕು’ ಎಂದು ಹೇಳಿದರು.</p>.<p>ಡಿವೈಎಸ್ಪಿ ಬಸವರಾಜ ಯಲಿಗಾರ ಮಾತನಾಡಿ, ‘ಸಿದ್ಧೇಶ್ವರ ಸ್ವಾಮೀಜಿಗಳ ಬಗ್ಗೆ ತಿಳಿಯದವರು ಯಾರು ಇಲ್ಲ, ಕೇಳದವರು ಯಾರು ಇಲ್ಲ. ಸಿದ್ಧೇಶ್ವರ ಅಪ್ಪಗಳನ್ನು ಪರಿಚಯಿಸುವುದು ಎಂದರೆ ಸೂರ್ಯನನ್ನು ಪರಿಚಯಿಸಿದಂತೆ. ಇದರ ಅರ್ಥ ಅವರನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವೆ ಇಲ್ಲ’ ಎಂದರು.</p>.<p>‘ಸಿದ್ದೇಶ್ವರ ಶ್ರೀ ನಮ್ಮ ಪುಣ್ಯದಂತೆ ಬಂದರು, ಯಾವಾಗ ಭೂಮಿಯ ಮೇಲೆ ಧರ್ಮ ದಿಕ್ಕು ತಪ್ಪುತ್ತದೆ ಎಂದು ತಿಳಿಯುತ್ತದೆಯೋ ಆಗ ಆ ಭಗವಂತ ಮತ್ತೊಂದು ಅವತಾರದಲ್ಲಿ ಜನ್ಮ ನೀಡಬೇಕಾಗುತ್ತದೆ. ಆ ಧರ್ಮ ಉಳಿಸಲು ಬಂದವರೇ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ನಾವು ಅಪ್ಪಗಳು ಹೇಳಿದಂತೆ ನಡೆದರೆ ಸಾಕು ಅವರಿಗೆ ನಾವು ಸಲ್ಲಿಸುವ ನಿಜವಾದ ನುಡಿ ನಮನ’ ಎಂದರು.</p>.<p>‘ಏನು ಮಾತಾಡುತ್ತೇವೆಯೋ ಅದರಂತೆ ನಡೆಯಬೇಕು. ಇದು ಶರಣರ ನಡೆ-ನುಡಿ ಸಿದ್ಧಾಂತ. ಸಿದ್ದೇಶ್ವರ ಶ್ರೀಗಳು ಕೋಟಿಗೊಬ್ಬ ಶರಣ. ಅವರು ಹೇಳಿದಂತೆ ತಣ್ಣಗೆ ಇರುದು ಕಲಿಯಿರಿ. 12ನೇ ಶತಮಾನದ ಬಸವಣ್ಣನವರು ಎಲ್ಲರೂ ಮನುಷ್ಯ ಜಾತಿಯವರೇ ಎಂದಿದ್ದರೂ ಆದರೆ ಅದನ್ನು ಯಾರು ಪಾಲಿಸಲಿಲ್ಲ. ನಿಜವಾಗಿ ಪಾಲಿಸಿದವರು ಸಿದ್ದೇಶ್ವರ ಸ್ವಾಮೀಜಿ’ ಎಂದರು.</p>.<p>ನನ್ನನ್ನು ಪೂಜಿಸಬಾರದು ಎನ್ನುವ ಕಾರಣಕ್ಕೆ ನನ್ನ ಗದ್ದುಗೆ ಕಟ್ಟಬೇಡಿ ಎಂದು ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದ್ದಾರೆ. ನಾವು ಸಿದ್ದೇಶ್ವರ ಸ್ವಾಮೀಜಿಗಳು ನಡೆ ನುಡಿಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.</p>.<p>ನಾಡಿನ ಸಾಧಕರು, ಪೂಜ್ಯರು, ಜ್ಞಾನಯೋಗಾಶ್ರಮದ ಭಕ್ತರು ಇದ್ದರು.</p>.<div><blockquote>ಮತಕ್ಕೂ ಧರ್ಮಕ್ಕೂ ಸಂಬಂಧವೇ ಇಲ್ಲ. ಮತ ಬೇರೆ ಧರ್ಮ ಬೇರೆ. ಮತಗಳು ಎರಡಲ್ಲ ಎರಡು ಸಾವಿರವಾಗಲಿ ಎರಡು ಕೋಟಿಯಾಗಲಿ ಧರ್ಮಕ್ಕೆ ಯಾವುದೇ ತೊಂದರೆ ಇಲ್ಲ.</blockquote><span class="attribution">– ನಿಜಲಿಂಗ ಸ್ವಾಮೀಜಿ, ಉತ್ತರಾಧಿಕಾರಿ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸಂಸ್ಥಾನ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ‘ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ, ಲಿಂಗಾಯತ, ವೀರಶೈವ ಇವೆಲ್ಲ ಧರ್ಮಗಳಲ್ಲ, ಮತಗಳು. ಇವುಗಳನ್ನು ಧರ್ಮ ಎಂದು ಹೇಳುತ್ತಿರುವುದಕ್ಕೆ ಸಮಸ್ಯೆಗಳು ಉದ್ಭವಿಸುತ್ತಿವೆ’ ಎಂದು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗ ಸ್ವಾಮೀಜಿ ಹೇಳಿದರು.</p>.<p>ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮೀಜಿಗಳ 3ನೇ ವರ್ಷದ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ‘ದಯೆ ಮತ್ತು ಧರ್ಮ’ ಗೋಷ್ಠಿಯನ್ನುದ್ದೇಶಿಸಿ ಆಶೀರ್ವಚನ ನೀಡಿದರು.</p>.<p>‘ಧರ್ಮ ಎಂದರೆ ಧಾರಣೆ ಮಾಡುವುದು, ಧರ್ಮ ಎನ್ನುವುದು ಅತೀ ಸೂಕ್ಷ್ಮ ಪದ, ದೇಶದಲ್ಲಿ ಧರ್ಮದ ಬಗ್ಗೆ ಗೊಂದಲಗಳು ನಡೆಯುತ್ತಿರುವುದಕ್ಕೆ ಕಾರಣ ನಾವು ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನಾವು ನಮ್ಮ ಸ್ವಭಾವಕ್ಕೆ ತಕ್ಕಂತೆ ಜಾತಿ, ಮತಗಳನ್ನು ಮಾಡಿಕೊಂಡಿದ್ದೇವೆ. ಆದರೆ, ನಾವೆಲ್ಲರೂ ದಯೆ-ಧರ್ಮವನ್ನು ಪಾಲಿಸಬೇಕು’ ಎಂದರು.</p>.<p>‘ಭಾರತದ ಸಂಸ್ಕೃತಿಗೆ ಆಪತ್ತುಗಳು ಬಂದಾಗ ಅದನ್ನು ಕಾಪಾಡಿದವರು ಸನ್ಯಾಸಿಗಳು. ಸಿದ್ಧೇಶ್ವರ ಶ್ರೀಗಳು ಜ್ಞಾನವನ್ನೇ ಉಣಬಡಿಸಿದ್ದಾರೆ. ಸೃಷ್ಟಿಯ ಪ್ರತಿಯೊಂದು ವಸ್ತುವೂ ಪರಮಾತ್ಮನ ಸೃಷ್ಟಿ. ಎಲ್ಲ ಚರಾ-ಚರ ವಸ್ತುಗಳ ಮೇಲೆ, ಪ್ರಾಣಿ, ಪಕ್ಷಿಗಳ ಮೇಲೆ ನಾವು ದಯೆ ಕರುಣೆ ತೋರಿಸಬೇಕು. ಸದಾ ಅಪ್ಪಗಳು ಪ್ರೀತಿಸುತ್ತಿದ್ದ ಪರಿಸರ, ಪ್ರಕೃತಿಯನ್ನು ನಾವು ರಕ್ಷಣೆ ಮಾಡಬೇಕು’ ಎಂದು ಹೇಳಿದರು.</p>.<p>ಡಿವೈಎಸ್ಪಿ ಬಸವರಾಜ ಯಲಿಗಾರ ಮಾತನಾಡಿ, ‘ಸಿದ್ಧೇಶ್ವರ ಸ್ವಾಮೀಜಿಗಳ ಬಗ್ಗೆ ತಿಳಿಯದವರು ಯಾರು ಇಲ್ಲ, ಕೇಳದವರು ಯಾರು ಇಲ್ಲ. ಸಿದ್ಧೇಶ್ವರ ಅಪ್ಪಗಳನ್ನು ಪರಿಚಯಿಸುವುದು ಎಂದರೆ ಸೂರ್ಯನನ್ನು ಪರಿಚಯಿಸಿದಂತೆ. ಇದರ ಅರ್ಥ ಅವರನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವೆ ಇಲ್ಲ’ ಎಂದರು.</p>.<p>‘ಸಿದ್ದೇಶ್ವರ ಶ್ರೀ ನಮ್ಮ ಪುಣ್ಯದಂತೆ ಬಂದರು, ಯಾವಾಗ ಭೂಮಿಯ ಮೇಲೆ ಧರ್ಮ ದಿಕ್ಕು ತಪ್ಪುತ್ತದೆ ಎಂದು ತಿಳಿಯುತ್ತದೆಯೋ ಆಗ ಆ ಭಗವಂತ ಮತ್ತೊಂದು ಅವತಾರದಲ್ಲಿ ಜನ್ಮ ನೀಡಬೇಕಾಗುತ್ತದೆ. ಆ ಧರ್ಮ ಉಳಿಸಲು ಬಂದವರೇ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ನಾವು ಅಪ್ಪಗಳು ಹೇಳಿದಂತೆ ನಡೆದರೆ ಸಾಕು ಅವರಿಗೆ ನಾವು ಸಲ್ಲಿಸುವ ನಿಜವಾದ ನುಡಿ ನಮನ’ ಎಂದರು.</p>.<p>‘ಏನು ಮಾತಾಡುತ್ತೇವೆಯೋ ಅದರಂತೆ ನಡೆಯಬೇಕು. ಇದು ಶರಣರ ನಡೆ-ನುಡಿ ಸಿದ್ಧಾಂತ. ಸಿದ್ದೇಶ್ವರ ಶ್ರೀಗಳು ಕೋಟಿಗೊಬ್ಬ ಶರಣ. ಅವರು ಹೇಳಿದಂತೆ ತಣ್ಣಗೆ ಇರುದು ಕಲಿಯಿರಿ. 12ನೇ ಶತಮಾನದ ಬಸವಣ್ಣನವರು ಎಲ್ಲರೂ ಮನುಷ್ಯ ಜಾತಿಯವರೇ ಎಂದಿದ್ದರೂ ಆದರೆ ಅದನ್ನು ಯಾರು ಪಾಲಿಸಲಿಲ್ಲ. ನಿಜವಾಗಿ ಪಾಲಿಸಿದವರು ಸಿದ್ದೇಶ್ವರ ಸ್ವಾಮೀಜಿ’ ಎಂದರು.</p>.<p>ನನ್ನನ್ನು ಪೂಜಿಸಬಾರದು ಎನ್ನುವ ಕಾರಣಕ್ಕೆ ನನ್ನ ಗದ್ದುಗೆ ಕಟ್ಟಬೇಡಿ ಎಂದು ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದ್ದಾರೆ. ನಾವು ಸಿದ್ದೇಶ್ವರ ಸ್ವಾಮೀಜಿಗಳು ನಡೆ ನುಡಿಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.</p>.<p>ನಾಡಿನ ಸಾಧಕರು, ಪೂಜ್ಯರು, ಜ್ಞಾನಯೋಗಾಶ್ರಮದ ಭಕ್ತರು ಇದ್ದರು.</p>.<div><blockquote>ಮತಕ್ಕೂ ಧರ್ಮಕ್ಕೂ ಸಂಬಂಧವೇ ಇಲ್ಲ. ಮತ ಬೇರೆ ಧರ್ಮ ಬೇರೆ. ಮತಗಳು ಎರಡಲ್ಲ ಎರಡು ಸಾವಿರವಾಗಲಿ ಎರಡು ಕೋಟಿಯಾಗಲಿ ಧರ್ಮಕ್ಕೆ ಯಾವುದೇ ತೊಂದರೆ ಇಲ್ಲ.</blockquote><span class="attribution">– ನಿಜಲಿಂಗ ಸ್ವಾಮೀಜಿ, ಉತ್ತರಾಧಿಕಾರಿ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸಂಸ್ಥಾನ ಮಠ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>