<p><strong>ವಿಜಯಪುರ:</strong> ಜಿಲ್ಲೆಯಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕಿಗೆಸತತ ನಾಲ್ಕು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಕಾಶ ಬಗಲಿ ಅಧ್ಯಕ್ಷರಾಗಿ, ಸತತ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಗೊಂಡ ಬೋರಮ್ಮ ಬಾಬು ಗೊಬ್ಬೂರ ಉಪಾಧ್ಯಕ್ಷರಾಗಿಅವಿರೋಧವಾಗಿ ಆಯ್ಕೆಯಾದರು.</p>.<p>ಬ್ಯಾಂಕಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳಾ ಉಪಾಧ್ಯಕ್ಷೆ ಎಂಬುವ ಹಿರಿಮೆಗೆ ಬೋರಮ್ಮ ಪಾತ್ರರಾದರು.</p>.<p>ಶಿವಪ್ಪ ಬಗಲಿ ಅವರು ಈ ಹಿಂದೆ ಸಿದ್ಧೇಶ್ವರ ಸಂಸ್ಥೆ ನಿರ್ದೇಶಕರಾಗಿ ಹಾಗೂ ವಿಜಯಪುರ ನಗರಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.</p>.<p>ಅಧ್ಯಕ್ಷರಾದ ಪ್ರಕಾಶ ಶಿವಪ್ಪ ಬಗಲಿ ಅವರಿಗೆ ನಿರ್ದೇಶಕರಾದ ಜಿ.ಎಸ್.ಗಚ್ಚಿನಮಠ ಸೂಚಕರಾಗಿ ಹಾಗೂ ವಿ.ಆರ್. ಅವರಂಗಬಾದ ಅನುಮೋದಕರಾಗಿ ಪಾಲ್ಗೊಂಡರು. </p>.<p>ಉಪಾಧ್ಯಕ್ಷರಾದ ಬೋರಮ್ಮ ಬಾಬು ಗೊಬ್ಬೂರ ಅವರಿಗೆ ನಿರ್ದೇಶಕರಾದ ಎಸ್.ಎಸ್.ಭೋವಿ ಹಾಗೂ ಅನುಮೋದಕರಾಗಿ ಆರ್.ಎಚ್.ಬಿದನೂರ ಪಾಲ್ಗೊಂಡರು.</p>.<p>ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಅವರ ಅಭಿಮಾನಿಗಳು ಅಭಿನಂದಿಸಿ, ಸಿಹಿ ಹಂಚಿ ಸಂಭ್ರಮಿಸಿದರು.</p>.<p>2020-2025 ನೇ ಸಾಲಿನ ಆಡಳಿತ ಮಂಡಳಿಗೆ ಇತ್ತೀಚಿಗೆ ನಡೆದಚುನಾವಣೆಯಲ್ಲಿ ಹಳೇ ಪೆನಲ್ ಜಯಭೇರಿ ಹೊಂದಿತ್ತು.ಚುನಾವಣಾ ಅಧಿಕಾರಿ ಪಿ.ಬಿ.ಕಾಳಗಿ ಕಾರ್ಯನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಜಿಲ್ಲೆಯಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಹಕಾರ ಬ್ಯಾಂಕಿಗೆಸತತ ನಾಲ್ಕು ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಕಾಶ ಬಗಲಿ ಅಧ್ಯಕ್ಷರಾಗಿ, ಸತತ ಮೂರು ಬಾರಿ ನಿರ್ದೇಶಕರಾಗಿ ಆಯ್ಕೆಗೊಂಡ ಬೋರಮ್ಮ ಬಾಬು ಗೊಬ್ಬೂರ ಉಪಾಧ್ಯಕ್ಷರಾಗಿಅವಿರೋಧವಾಗಿ ಆಯ್ಕೆಯಾದರು.</p>.<p>ಬ್ಯಾಂಕಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಹಿಳಾ ಉಪಾಧ್ಯಕ್ಷೆ ಎಂಬುವ ಹಿರಿಮೆಗೆ ಬೋರಮ್ಮ ಪಾತ್ರರಾದರು.</p>.<p>ಶಿವಪ್ಪ ಬಗಲಿ ಅವರು ಈ ಹಿಂದೆ ಸಿದ್ಧೇಶ್ವರ ಸಂಸ್ಥೆ ನಿರ್ದೇಶಕರಾಗಿ ಹಾಗೂ ವಿಜಯಪುರ ನಗರಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.</p>.<p>ಅಧ್ಯಕ್ಷರಾದ ಪ್ರಕಾಶ ಶಿವಪ್ಪ ಬಗಲಿ ಅವರಿಗೆ ನಿರ್ದೇಶಕರಾದ ಜಿ.ಎಸ್.ಗಚ್ಚಿನಮಠ ಸೂಚಕರಾಗಿ ಹಾಗೂ ವಿ.ಆರ್. ಅವರಂಗಬಾದ ಅನುಮೋದಕರಾಗಿ ಪಾಲ್ಗೊಂಡರು. </p>.<p>ಉಪಾಧ್ಯಕ್ಷರಾದ ಬೋರಮ್ಮ ಬಾಬು ಗೊಬ್ಬೂರ ಅವರಿಗೆ ನಿರ್ದೇಶಕರಾದ ಎಸ್.ಎಸ್.ಭೋವಿ ಹಾಗೂ ಅನುಮೋದಕರಾಗಿ ಆರ್.ಎಚ್.ಬಿದನೂರ ಪಾಲ್ಗೊಂಡರು.</p>.<p>ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಅವರ ಅಭಿಮಾನಿಗಳು ಅಭಿನಂದಿಸಿ, ಸಿಹಿ ಹಂಚಿ ಸಂಭ್ರಮಿಸಿದರು.</p>.<p>2020-2025 ನೇ ಸಾಲಿನ ಆಡಳಿತ ಮಂಡಳಿಗೆ ಇತ್ತೀಚಿಗೆ ನಡೆದಚುನಾವಣೆಯಲ್ಲಿ ಹಳೇ ಪೆನಲ್ ಜಯಭೇರಿ ಹೊಂದಿತ್ತು.ಚುನಾವಣಾ ಅಧಿಕಾರಿ ಪಿ.ಬಿ.ಕಾಳಗಿ ಕಾರ್ಯನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>