<p>ತಾಳಿಕೋಟೆ: ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿಭೆಗಳಿಗೆ ನಿರೀಕ್ಷಿತ ಬೆಂಬಲ ಬೆಂಗಳೂರು ಸಿನಿಮಾದವರಾಗಲಿ, ಚಾನೆಲ್ ನವರಾಗಲಿ ನೀಡುವುದಿಲ್ಲ. ತಮ್ಮ ಟಿಆರ್ಪಿ ಬೆಳೆಸಿಕೊಳ್ಳಲು ನಾವು ಬಳಕೆಯಾಗುತ್ತೇವೆ ಎಂದು ಜನಪದ ಗಾಯಕ ಗುರುರಾಜ ಹೊಸಪೇಟಿ ಹೇಳಿದರು.</p>.<p>ಪಟ್ಟಣದ ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಅಂಗವಾಗಿ ಎರಡನೆಯ ದಿನವಾದ ಶನಿವಾರ ರಾಜವಾಡೆಯ ಆವರಣದಲ್ಲಿ ಹಾಕಿದ್ದ ಭವ್ಯ ವೇದಿಕೆಯಲ್ಲಿ ಜಾನಪದ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಮ್ಮ ಉತ್ತರ ಕರ್ನಾಟಕದ ಕಲಾಕಾರರು ಬೆಂಗಳೂರಿಗೆ ಹೋಗಿಯೂ ಉಪಯೋಗ ಇಲ್ಲ. ಆದ್ದರಿಂದ ಉತ್ತರ ಕರ್ನಾಟಕದವರೇ ಈ ದಿಸೆಯಲ್ಲಿ ಚಾನಲ್ ಪ್ರಾರಂಭಿಸಬೇಕು. ನನ್ನ ಮಗ, ಇಬ್ಬರು ಹೆಣ್ಣುಮಕ್ಕಳು, ಅಳಿಯ ಎಲ್ಲರೂ ಸೇರಿ ನಮ್ಮದೇ ಹಾಡಿನ ತಂಡ ಕಟ್ಟಿದ್ದೇವೆ. ನನಗೀಗ 73 ವಯಸ್ಸಾಗಿದ್ದರೂ ಮುಪ್ಪು ಬಂದಿಲ್ಲ. ಇದಕ್ಕೆ ನಿಮ್ಮ ಹರ್ಷದ ಚಪ್ಪಾಳೆ ಪ್ರೋತ್ಸಾಹದ ಮಾತುಗಳೇ ಕಾರಣ ಎಂದರು.</p>.<p>80ಕ್ಕೂ ಅಧಿಕ ಚಿತ್ರಗಳಿಗೆ ಹಾಡು ಹಾಡಿರುವೆ. ಆದರೆ, ನಾನು ನಟ ಅಥವಾ ಗಾಯಕ ಎಂದುಕೊಳ್ಳಬಯಸದೇ ಒಬ್ಬ ಜಾನಪದ ಗಾಯಕನಾಗಿಯೇ ಉಳಿದುಕೊಳ್ಳ ಬಯಸುವೆ ಎಂದರು.</p>.<p>ಜಾತ್ರಾ ಮಹೋತ್ಸವಕ್ಕೆ ನೆರವಾದ ದಾನಿಗಳನ್ನು ಗೌರವಿಸಲಾಯಿತು. ಜಾತ್ರಾ ಸಮಿತಿಯವರು ಹಾಡುಗಾರರಿಗೆ ಮಳೆಯ ತೊಂದರೆ ಬರದಂತೆ ತಕ್ಷಣವೇ ತಾಡಪತ್ರಿಯನ್ನು ಅವರ ತಲೆಯ ಮೇಲೆ ಹಿಡಿದು ರಕ್ಷಣೆ ನೀಡಿ ಹಾಡುಗಾರಿಕೆಗೆ ಅನುಕೂಲ ಮಾಡಿಕೊಟ್ಟರು.</p>.<p>ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಗೀಗಿ ಪದಗಳ ಜುಗಲ್ ಬಂಧಿ ಸೇರಿದ್ದ ಜನರನ್ನು ರಂಜಿಸಿದವು. ರಾತ್ರಿ ಜಗಜ್ಯೋತಿ ಬಸವೇಶ್ವರ ನಾಟ್ಯ ಸಂಘ, ಬ.ಬಾಗೇವಾಡಿ ಇವರಿಂದ ‘ಜಮೀನ್ದಾರ ಸೊಸೆ’ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತಾಳಿಕೋಟೆ: ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಪ್ರತಿಭೆಗಳಿಗೆ ನಿರೀಕ್ಷಿತ ಬೆಂಬಲ ಬೆಂಗಳೂರು ಸಿನಿಮಾದವರಾಗಲಿ, ಚಾನೆಲ್ ನವರಾಗಲಿ ನೀಡುವುದಿಲ್ಲ. ತಮ್ಮ ಟಿಆರ್ಪಿ ಬೆಳೆಸಿಕೊಳ್ಳಲು ನಾವು ಬಳಕೆಯಾಗುತ್ತೇವೆ ಎಂದು ಜನಪದ ಗಾಯಕ ಗುರುರಾಜ ಹೊಸಪೇಟಿ ಹೇಳಿದರು.</p>.<p>ಪಟ್ಟಣದ ಗ್ರಾಮದೇವತೆಯ ಜಾತ್ರಾ ಮಹೋತ್ಸವದ ಅಂಗವಾಗಿ ಎರಡನೆಯ ದಿನವಾದ ಶನಿವಾರ ರಾಜವಾಡೆಯ ಆವರಣದಲ್ಲಿ ಹಾಕಿದ್ದ ಭವ್ಯ ವೇದಿಕೆಯಲ್ಲಿ ಜಾನಪದ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನಮ್ಮ ಉತ್ತರ ಕರ್ನಾಟಕದ ಕಲಾಕಾರರು ಬೆಂಗಳೂರಿಗೆ ಹೋಗಿಯೂ ಉಪಯೋಗ ಇಲ್ಲ. ಆದ್ದರಿಂದ ಉತ್ತರ ಕರ್ನಾಟಕದವರೇ ಈ ದಿಸೆಯಲ್ಲಿ ಚಾನಲ್ ಪ್ರಾರಂಭಿಸಬೇಕು. ನನ್ನ ಮಗ, ಇಬ್ಬರು ಹೆಣ್ಣುಮಕ್ಕಳು, ಅಳಿಯ ಎಲ್ಲರೂ ಸೇರಿ ನಮ್ಮದೇ ಹಾಡಿನ ತಂಡ ಕಟ್ಟಿದ್ದೇವೆ. ನನಗೀಗ 73 ವಯಸ್ಸಾಗಿದ್ದರೂ ಮುಪ್ಪು ಬಂದಿಲ್ಲ. ಇದಕ್ಕೆ ನಿಮ್ಮ ಹರ್ಷದ ಚಪ್ಪಾಳೆ ಪ್ರೋತ್ಸಾಹದ ಮಾತುಗಳೇ ಕಾರಣ ಎಂದರು.</p>.<p>80ಕ್ಕೂ ಅಧಿಕ ಚಿತ್ರಗಳಿಗೆ ಹಾಡು ಹಾಡಿರುವೆ. ಆದರೆ, ನಾನು ನಟ ಅಥವಾ ಗಾಯಕ ಎಂದುಕೊಳ್ಳಬಯಸದೇ ಒಬ್ಬ ಜಾನಪದ ಗಾಯಕನಾಗಿಯೇ ಉಳಿದುಕೊಳ್ಳ ಬಯಸುವೆ ಎಂದರು.</p>.<p>ಜಾತ್ರಾ ಮಹೋತ್ಸವಕ್ಕೆ ನೆರವಾದ ದಾನಿಗಳನ್ನು ಗೌರವಿಸಲಾಯಿತು. ಜಾತ್ರಾ ಸಮಿತಿಯವರು ಹಾಡುಗಾರರಿಗೆ ಮಳೆಯ ತೊಂದರೆ ಬರದಂತೆ ತಕ್ಷಣವೇ ತಾಡಪತ್ರಿಯನ್ನು ಅವರ ತಲೆಯ ಮೇಲೆ ಹಿಡಿದು ರಕ್ಷಣೆ ನೀಡಿ ಹಾಡುಗಾರಿಕೆಗೆ ಅನುಕೂಲ ಮಾಡಿಕೊಟ್ಟರು.</p>.<p>ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಗೀಗಿ ಪದಗಳ ಜುಗಲ್ ಬಂಧಿ ಸೇರಿದ್ದ ಜನರನ್ನು ರಂಜಿಸಿದವು. ರಾತ್ರಿ ಜಗಜ್ಯೋತಿ ಬಸವೇಶ್ವರ ನಾಟ್ಯ ಸಂಘ, ಬ.ಬಾಗೇವಾಡಿ ಇವರಿಂದ ‘ಜಮೀನ್ದಾರ ಸೊಸೆ’ ಎಂಬ ಸಾಮಾಜಿಕ ನಾಟಕ ಪ್ರದರ್ಶನವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>