ಸಂಜೆ ಅನ್ನಸಂತರ್ಪಣೆ ಹಾಗೂ ರಾತ್ರಿ ಸಂಗಪ್ಪ ಅಂಬಿಗೇರ ಇವರಿಂದ ರೇಣುಕಾ ಯಲ್ಲಮ್ಮ ಬಯಲಾಟ ಪ್ರದರ್ಶನ ಜರುಗಿತು. ಈ ವೇಳೆ ದೇವಸ್ಥಾನ ಕಮಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಬೆಳ್ಳುಬ್ಬಿ, ಮುಖಂಡರಾದ ಹುಚ್ಚಪ್ಪ ಬಾಟಿ, ಪುಂಡಲೀಕ ಬಾಟಿ, ಮಾಜಿ ಪ.ಪಂ ಅಧ್ಯಕ್ಷರುಗಳಾದ ಕಲ್ಲಪ್ಪ ಸೊನ್ನದ, ವಿರೂಪಾಕ್ಷಿ ಕೊಲಕಾರ, ರೈತ ಮುಖಂಡರಾದ ಮಳೆಪ್ಪ ಬರಗಿ, ರಮೇಶ ಬಾಲಗೊಂಡ, ಪರಮಾನಂದ ಬರಗಿ ಹಾಗೂ ಹಲವರಿದ್ದರು.