<p><strong>ವಿಜಯಪುರ: </strong>ಸೋಮವಾರ ಸಂಜೆ ಅಸ್ತಂಗತರಾದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಪಾರ್ಥೀವ ಶರೀರವನ್ನು ಆಶ್ರಮದಿಂದ ತೆರೆದ ವಾಹನದಲ್ಲಿ ಸೈನಿಕ ಶಾಲೆಗೆ ತರಲಾಯಿತು.</p>.<p>ಆಶ್ರಮದಿಂದ ಶ್ರೀಗಳ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ನಗರದ ಬಿಎಲ್ಡಿಇ ಆಸ್ಪತ್ರೆ, ಸಿದ್ಧೇಶ್ವರ ದೇವಾಲಯ, ಗಾಂಧಿ ಚೌಕ, ಶಿವಾಜಿ ವೃತ್ತದ ಮಾರ್ಗವಾಗಿ ಸೈನಿಕ ಶಾಲೆಗೆ ತರಲಾಯಿತು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಭಕ್ತರು ಶ್ರೀಗಳ ಪಾರ್ಥೀವ ಶರೀರವನ್ನು ದರ್ಶನ ಮಾಡಿ, ಕೈಮುಗಿದು ಕಂಬನಿ ಮಿಡಿದರು.</p>.<p>ಭಕ್ತರಿಂದ ಶಿವಸ್ತೋತ್ರ, ವಚನಗಳ ಗಾಯನ ಸೈನಿಕ ಶಾಲೆಯ ಆವರಣದಲ್ಲಿ ಅನುರಣಿಸುತ್ತಿದೆ.</p>.<p>ಸೈನಿಕ ಶಾಲೆಯ ಆವರಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 3ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಹಸ್ರಾರು ಭಕ್ತರು ಸೈನಿಕ ಶಾಲೆಯತ್ತ ಧಾವಿಸತೊಡಗಿದ್ದಾರೆ.</p>.<p>ಸಂಜೆ 4ರ ಬಳಿಕ ಶ್ರೀಗಳ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಸೈನಿಕ ಶಾಲೆಯಿಂದ ಮರಳಿ ಆಶ್ರಮಕ್ಕೆ ತಂದು, ಸಂಜೆ 6ಕ್ಕೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು. ಅವರ ಆಶಯದಂತೆ ಪಾರ್ಥೀವ ಶರೀರವನ್ನು ಅಗ್ನಿಗೆ ಅರ್ಪಿಸಲು ಸಿದ್ಧತೆ ನಡೆದಿದೆ.</p>.<p>ಭಕ್ತ ಸಾಗರ ವಿಜಯಪುರದತ್ತ ಬರುತ್ತಿರುವುದರಿಂದ ಯಾವುದೇ ಅವ್ಯವಸ್ಥೆ ಆಗದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ</p>.<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ, ನಾಡಿನ ಗಣ್ಯರು, ಸಚಿವರು, ಶಾಸಕರು, ಮಠಾಧೀಶರು ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ವಿಜಯಪುರಕ್ಕೆ ಬರುತ್ತಿದ್ದಾರೆ.</p>.<p>ಕನ್ಹೇರಿಮಠದ ಅದೃಶ್ಯನಂದ ಕಾಡಸಿದ್ದೇಶ್ವರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಬಸವಾನಂದ ಸ್ವಾಮೀಜಿ ಹಾಗೂ ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.</p>.<p><strong>ಇವನ್ನೂ ಓದಿ... </strong></p>.<p><a href="https://www.prajavani.net/karnataka-news/jnanayogashrama-jnanayogi-sri-siddheshwar-swamiji-no-more-1002621.html" target="_blank">‘ಜ್ಞಾನಯೋಗಿ’ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯ</a></p>.<p><a href="https://www.prajavani.net/district/vijayapura/simple-and-people-friendly-siddeshwar-swamiji-1002718.html" target="_blank">ನುಡಿದಂತೆ ನಡೆದ ಸಜ್ಜನಿಕೆಯ ಸಿದ್ಧೇಶ್ವರ ಸ್ವಾಮೀಜಿ...</a></p>.<p><a href="https://www.prajavani.net/district/vijayapura/vairagyamurthy-siddheshwar-swamiji-stand-far-from-awards-1002722.html" target="_blank">‘ಕಿಸೆ’ಯಿಲ್ಲದ ವೈರಾಗ್ಯಮೂರ್ತಿ ಸಿದ್ಧೇಶ್ವರ ಸ್ವಾಮೀಜಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>ಸೋಮವಾರ ಸಂಜೆ ಅಸ್ತಂಗತರಾದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಪಾರ್ಥೀವ ಶರೀರವನ್ನು ಆಶ್ರಮದಿಂದ ತೆರೆದ ವಾಹನದಲ್ಲಿ ಸೈನಿಕ ಶಾಲೆಗೆ ತರಲಾಯಿತು.</p>.<p>ಆಶ್ರಮದಿಂದ ಶ್ರೀಗಳ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ನಗರದ ಬಿಎಲ್ಡಿಇ ಆಸ್ಪತ್ರೆ, ಸಿದ್ಧೇಶ್ವರ ದೇವಾಲಯ, ಗಾಂಧಿ ಚೌಕ, ಶಿವಾಜಿ ವೃತ್ತದ ಮಾರ್ಗವಾಗಿ ಸೈನಿಕ ಶಾಲೆಗೆ ತರಲಾಯಿತು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಭಕ್ತರು ಶ್ರೀಗಳ ಪಾರ್ಥೀವ ಶರೀರವನ್ನು ದರ್ಶನ ಮಾಡಿ, ಕೈಮುಗಿದು ಕಂಬನಿ ಮಿಡಿದರು.</p>.<p>ಭಕ್ತರಿಂದ ಶಿವಸ್ತೋತ್ರ, ವಚನಗಳ ಗಾಯನ ಸೈನಿಕ ಶಾಲೆಯ ಆವರಣದಲ್ಲಿ ಅನುರಣಿಸುತ್ತಿದೆ.</p>.<p>ಸೈನಿಕ ಶಾಲೆಯ ಆವರಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ 3ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಹಸ್ರಾರು ಭಕ್ತರು ಸೈನಿಕ ಶಾಲೆಯತ್ತ ಧಾವಿಸತೊಡಗಿದ್ದಾರೆ.</p>.<p>ಸಂಜೆ 4ರ ಬಳಿಕ ಶ್ರೀಗಳ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಸೈನಿಕ ಶಾಲೆಯಿಂದ ಮರಳಿ ಆಶ್ರಮಕ್ಕೆ ತಂದು, ಸಂಜೆ 6ಕ್ಕೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು. ಅವರ ಆಶಯದಂತೆ ಪಾರ್ಥೀವ ಶರೀರವನ್ನು ಅಗ್ನಿಗೆ ಅರ್ಪಿಸಲು ಸಿದ್ಧತೆ ನಡೆದಿದೆ.</p>.<p>ಭಕ್ತ ಸಾಗರ ವಿಜಯಪುರದತ್ತ ಬರುತ್ತಿರುವುದರಿಂದ ಯಾವುದೇ ಅವ್ಯವಸ್ಥೆ ಆಗದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ</p>.<p>ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ, ನಾಡಿನ ಗಣ್ಯರು, ಸಚಿವರು, ಶಾಸಕರು, ಮಠಾಧೀಶರು ಶ್ರೀಗಳ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ವಿಜಯಪುರಕ್ಕೆ ಬರುತ್ತಿದ್ದಾರೆ.</p>.<p>ಕನ್ಹೇರಿಮಠದ ಅದೃಶ್ಯನಂದ ಕಾಡಸಿದ್ದೇಶ್ವರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಬಸವಾನಂದ ಸ್ವಾಮೀಜಿ ಹಾಗೂ ಶಾಸಕರಾದ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.</p>.<p><strong>ಇವನ್ನೂ ಓದಿ... </strong></p>.<p><a href="https://www.prajavani.net/karnataka-news/jnanayogashrama-jnanayogi-sri-siddheshwar-swamiji-no-more-1002621.html" target="_blank">‘ಜ್ಞಾನಯೋಗಿ’ ಸಿದ್ಧೇಶ್ವರ ಸ್ವಾಮೀಜಿ ಲಿಂಗೈಕ್ಯ</a></p>.<p><a href="https://www.prajavani.net/district/vijayapura/simple-and-people-friendly-siddeshwar-swamiji-1002718.html" target="_blank">ನುಡಿದಂತೆ ನಡೆದ ಸಜ್ಜನಿಕೆಯ ಸಿದ್ಧೇಶ್ವರ ಸ್ವಾಮೀಜಿ...</a></p>.<p><a href="https://www.prajavani.net/district/vijayapura/vairagyamurthy-siddheshwar-swamiji-stand-far-from-awards-1002722.html" target="_blank">‘ಕಿಸೆ’ಯಿಲ್ಲದ ವೈರಾಗ್ಯಮೂರ್ತಿ ಸಿದ್ಧೇಶ್ವರ ಸ್ವಾಮೀಜಿ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>