ವಿಜಯಪುರ ನಗರ, ಕೊಲ್ಹಾರ, ಕನಮಡಿ, ಬಳಬಟ್ಟಿ, ಯರಝರಿ, ಆಲಮೇಲ, ದೇವರ ಹಿಪ್ಪರಗಿ, ತಾಳಿಕೋಟೆ, ತಾಂಬಾ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಳೆಯಾಗಿದ್ದು, ಬಿಸಿಲಿನಿಂದ ಕಾದು ಕಬ್ಬಿಣದಂತಾಗಿದ್ದ ವಾತಾವರಣ ತಂಪಾಗಿದೆ. ಮಳೆಯ ಪರಿಣಾಮ ಒಣದ್ರಾಕ್ಷಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ತಿಕೋಟಾ ಭಾಗದಲ್ಲಿ ಬಿಸಿಲಿಗೆ ಒಣಗಿಸಲು ಹಾಕಿದ್ದ ದ್ರಾಕ್ಷಿಗೆ ಮಳೆಯಿಂದ ಸಮಸ್ಯೆಯಾಗಿದೆ.