65 ವರ್ಷ ಮೇಲ್ಪಟ್ಟ ನಾಗರಿಕರು, ಗರ್ಭಿನಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಅನಾರೋಗ್ಯ ಪೀಡಿತರಿಗೆ ಮಂದಿರದಲ್ಲಿ ಪ್ರವೇಶ ಇಲ್ಲ. ಪ್ರತಿದಿನ 15 ಸಾವಿರ ಭಕ್ತರಿಗೆ ಮಂದಿರದಲ್ಲಿ ಪ್ರವೇಶ ನೀಡಲಾಗುವುದು. ಮಂದಿರದಿಂದ ಎರಡು ನೂರು ಮೀಟರ್ ವರೆಗೆ ಹೂವು, ಕಾಯಿ ಯಾವುದೇ ತರದ ಪದಾರ್ಥಗಳನ್ನು ಮಾರಲು ಅನುಮತಿ ಇಲ್ಲ. ಅಕ್ಟೋಬರ್ 18 ರಿಂದ 20 ರ ಮಧ್ಯದಲ್ಲಿ ಅಶ್ವಿನ ಹುಣ್ಣಿಮೆಯ ದಿನದಂದು ನಡೆಯುವ ಜಾತ್ರೆಯನ್ನು ರದ್ದು ಮಾಡಲಾಗಿದೆ. ಈ ಸಂದರ್ಭದಲ್ಲಿ ಬೇರೆ ಊರುಗಳಿಂದ ಬರುವ ಭಕ್ತರಿಗೆ ತುಳಜಾಪುರಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಬೆಳಿಗ್ಗೆ 6ರಿಂದ ದಿನವಿಡಿ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ.