ವಿಜಯಪುರ: ಬಸವನಬಾಗೇವಾಡಿ ತಾಲ್ಲೂಕಿನ ಹುಣಶ್ಯಾಳ ಪಿ.ಬಿ.ಗ್ರಾಮದಲ್ಲಿಜಮೀನಿನಲ್ಲಿ ದನ ಮೇಯಿಸುತ್ತಿದ್ದ ಸಹೋದರರಿಬ್ಬರು ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದಾರೆ.
ಹುಣಶ್ಯಾಳ ಪಿ.ಬಿ. ಗ್ರಾಮದರಮೇಶ ವಣಕ್ಯಾಳ(7) ಮತ್ತು ಮಾಳಿಂಗರಾಯ ವಣಕ್ಯಾಳ(11) ಸಾವಿಗೀಡಾದ ಸಹೋದರರುಎಂದು ಗುರುತಿಸಲಾಗಿದೆ.
ನೀರು ಕುಡಿಯಲು ಹೊಗಿ ಕಾಲು ಜಾರಿ ಹೊಂಡಕ್ಕೆ ಬಿದ್ದ ತಮ್ಮರಮೇಶನನ್ನು ರಕ್ಷಿಸಲು ಹೋದ ಅಣ್ಣ ಮಾಳಿಂಗರಾಯ ಕೊಡ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ.ಬಸವನಬಾಗೇವಾಡಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.