ಯುಕೆಪಿ ವೃತ್ತದ ಮೂಲಕ ವಿಜಯಪುರದತ್ತ ವೇಗವಾಗಿ ಸಾಗುತ್ತಿದ್ದ ಕ್ರೂಸರ್ ಎದುರಿಗೆ ಬರುತ್ತಿದ್ದ ಬೈಕ್ಗೆ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಮಗ ಈರಪ್ಪ ಹಂಗರಗಿ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿಯಲ್ಲಿ ಕುಳಿತ್ತಿದ್ದ ತಂದೆ ಶಂಕ್ರಪ್ಪ ಹಂಗರಗಿ (65) ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ. ಇಬ್ಬರು ತಾಲ್ಲೂಕಿನ ಮಸೂತಿ ಗ್ರಾಮದ ನಿವಾಸಿಗಳಾಗಿದ್ದು ಹಾಲಿ ಬಳೂತಿಯಲ್ಲಿ ವಾಸವಾಗಿದ್ದರು.