<p><strong>ಸಿಂದಗಿ:</strong> ಪಟ್ಟಣದ ಹೊರವಲಯ ಕಲಕೇರಿ ರಸ್ತೆಯಲ್ಲಿನ ಎಲೈಟ್ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಯುವ ವಿಜ್ಞಾನಿಗಳ ಎಕ್ಸ್ಪೋ ಮೇಳವನ್ನು ಆಯೋಜನೆ ಮಾಡಲಾಗಿತ್ತು.</p>.<p>ಆವರಣದಲ್ಲೆಲ್ಲ ಪುಟಾಣಿಗಳ ಕಲರವ ತುಂಬಿತ್ತು. ಪಾಲಕರೂ ಅತ್ಯಧಿಕ ಸಂಖ್ಯೆಯಲ್ಲಿದ್ದರು. ಎಕ್ಸ್ಪೋ ವಿಜ್ಞಾನ ಜಾತ್ರೆಯಂತೆ ಕಂಗೊಳಿಸುತ್ತಿತ್ತು.</p>.<p>678 ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳು, ಗಣಿತ ಮಾದರಿಗಳು, ಕನ್ನಡ ಜ್ಞಾನಕೋಶ ವಿಭಾಗಗಳಲ್ಲಿ ತಾವು ಸಿದ್ಧಪಡಿಸಿದ ಮಾದರಿಗಳ ಬಗ್ಗೆ ಪಟಪಟಾ ಅಂತ ಹೇಳುತ್ತಿದ್ದುದು ಪಾಲಕರಲ್ಲಿ ಖುಷಿ ಮೂಡಿಸಿತ್ತು.</p>.<p>ಎಕ್ಸ್ಪೋ ವೀಕ್ಷಣೆಗೆ ಬಂದ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ವಿದ್ಯಾರ್ಥಿ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಮನೋಭಾವ ಅತೀ ಅವಶ್ಯ. ಇದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.</p>.<p>ಎಲೈಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಸ್ತಫಾ ಅಸಂತಾಪೂರ, ಉಪಾಧ್ಯಕ್ಷ ಮನ್ಸೂರ್ ಅಸಂತಾಪೂರ ಹಾಗೂ ಆಡಳಿತಾಧಿಕಾರಿ ಎಂ.ಎಂ.ಅಸಂತಾಪೂರ, ಮುಖ್ಯ ಶಿಕ್ಷಕ ಟಿ.ಎಂ.ಕೆಂಭಾವಿ, ಸಂಯೋಜಕಿ ಭಾಗ್ಯಲಕ್ಷ್ಮಿ ಕೆಂಭಾವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ:</strong> ಪಟ್ಟಣದ ಹೊರವಲಯ ಕಲಕೇರಿ ರಸ್ತೆಯಲ್ಲಿನ ಎಲೈಟ್ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ ಯುವ ವಿಜ್ಞಾನಿಗಳ ಎಕ್ಸ್ಪೋ ಮೇಳವನ್ನು ಆಯೋಜನೆ ಮಾಡಲಾಗಿತ್ತು.</p>.<p>ಆವರಣದಲ್ಲೆಲ್ಲ ಪುಟಾಣಿಗಳ ಕಲರವ ತುಂಬಿತ್ತು. ಪಾಲಕರೂ ಅತ್ಯಧಿಕ ಸಂಖ್ಯೆಯಲ್ಲಿದ್ದರು. ಎಕ್ಸ್ಪೋ ವಿಜ್ಞಾನ ಜಾತ್ರೆಯಂತೆ ಕಂಗೊಳಿಸುತ್ತಿತ್ತು.</p>.<p>678 ವಿದ್ಯಾರ್ಥಿಗಳು ವಿಜ್ಞಾನ ಮಾದರಿಗಳು, ಗಣಿತ ಮಾದರಿಗಳು, ಕನ್ನಡ ಜ್ಞಾನಕೋಶ ವಿಭಾಗಗಳಲ್ಲಿ ತಾವು ಸಿದ್ಧಪಡಿಸಿದ ಮಾದರಿಗಳ ಬಗ್ಗೆ ಪಟಪಟಾ ಅಂತ ಹೇಳುತ್ತಿದ್ದುದು ಪಾಲಕರಲ್ಲಿ ಖುಷಿ ಮೂಡಿಸಿತ್ತು.</p>.<p>ಎಕ್ಸ್ಪೋ ವೀಕ್ಷಣೆಗೆ ಬಂದ ತಹಶೀಲ್ದಾರ್ ಕರೆಪ್ಪ ಬೆಳ್ಳಿ, ವಿದ್ಯಾರ್ಥಿ ಜೀವನದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಮನೋಭಾವ ಅತೀ ಅವಶ್ಯ. ಇದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.</p>.<p>ಎಲೈಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮುಸ್ತಫಾ ಅಸಂತಾಪೂರ, ಉಪಾಧ್ಯಕ್ಷ ಮನ್ಸೂರ್ ಅಸಂತಾಪೂರ ಹಾಗೂ ಆಡಳಿತಾಧಿಕಾರಿ ಎಂ.ಎಂ.ಅಸಂತಾಪೂರ, ಮುಖ್ಯ ಶಿಕ್ಷಕ ಟಿ.ಎಂ.ಕೆಂಭಾವಿ, ಸಂಯೋಜಕಿ ಭಾಗ್ಯಲಕ್ಷ್ಮಿ ಕೆಂಭಾವಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>