<p><strong>ವಿಜಾಪುರ: `</strong>ಭೀಮಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಶಾಸಕರು ಹಾಗೂ ಪೊಲೀಸರು ನೇರವಾಗಿ ಶಾಮೀಲಾಗಿದ್ದಾರೆ~ ಎಂದು ಆಡಳಿತ ಪಕ್ಷದ ಇಂಡಿ ಕ್ಷೇತ್ರದ ಶಾಸಕ ಡಾ.ಸಾರ್ವಭೌಮ ಬಗಲಿ ಗಂಭೀರ ಆರೋಪ ಮಾಡಿದರು.<br /> <br /> ಭೀಮಾ ತೀರದಲ್ಲಿ ಬೋಟ್ಗಳನ್ನು ಬಳಸಿ ಅಕ್ರಮವಾಗಿ ಮರಳು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅಮಾಯಕ ಲಾರಿ ಚಾಲಕರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.<br /> <br /> `ಇಂಡಿಯ ಡಿವೈಎಸ್ಪಿ ಮುತ್ತುರಾಜ್ ಅವರು ಹಿಂಗಣಿಯಿಂದ ಧೂಳಖೇಡವರೆಗೆ ನದಿ ತೀರದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಏಳು ಬೋಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶ ಝಳಕಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. <br /> <br /> ಝಳಕಿ ಠಾಣೆಯಲ್ಲಿದ್ದ ಪ್ರಾಮಾಣಿಕ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಅಸಮರ್ಥ ಅಧಿಕಾರಿಯನ್ನು ಅಲ್ಲಿಗೆ ನಿಯೋಜಿಸಲಾಗಿದೆ. ಇದಕ್ಕೆ ಬೆಳಗಾವಿ ವಲಯದ ಐಜಿಪಿ ಸಂಧು ಅವರೇ ಹೊಣೆ~ ಎಂದು ಆರೋಪಿಸಿದರು.<br /> <br /> `ಸರ್ಕಾರವೂ ಅಷ್ಟೇ. ಒಂದು ಗುಂಪಿನ ಶಾಸಕರಿಗೆ ಮಾತ್ರ ಆದ್ಯತೆ ನೀಡಿ ಅವರ ಕೆಲಸಗಳನ್ನು ಮಾಡಿಕೊಡುತ್ತಿದೆ. ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಅಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆಗೆ ಮನವಿ ಮಾಡಿದರೂ ನಮ್ಮ ಮಾತಿಗೆ ಮಾನ್ಯತೆ ನೀಡುತ್ತಿಲ್ಲ~ ಎಂದು ದೂರಿದರು.<br /> <br /> <strong>ಹೋರಾಟದಲ್ಲಿ ಪಾಲ್ಗೊಂಡಿಲ್ಲ: </strong>`ಭೀಮಾ ನದಿಯಲ್ಲಿ ಮರಳು ಇದೆ. ಅಲ್ಲಿಯೇ ಗಣಿಗಾರಿಕೆ ನಡೆಯಲು ಸಾಧ್ಯ. ಅದನ್ನು ಬಿಟ್ಟು ಇನ್ನೇನು ವಿಜಾಪುರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತದೆಯೇ?~ ಎಂದು ಪತ್ರಿಕಾಗೋಷ್ಠಿಯಲ್ಲಿದ್ದ ಸಿಂದಗಿಯ ಶಾಸಕ ರಮೇಶ ಭೂಸನೂರ ಪ್ರಶ್ನಿಸಿದರು.<br /> <br /> ತಮ್ಮ ಸ್ವಗ್ರಾಮ ದೇವಣಗಾಂವದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಅಲ್ಲಿಯ ಜನ ಪ್ರತಿಭಟನೆ ನಡೆಸಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.`ಅಕ್ರಮ ಮರಳು ಗಣಿಗಾರಿಕೆ ವಿರೋಧಿಸಿ ಸಿಂದಗಿ ತಾಲ್ಲೂಕು ದೇವಣಗಾಂವದಲ್ಲಿ ಗ್ರಾಮಸ್ಥರು ನಡೆಸಿದ ಹೋರಾಟದಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಅವರು ಹೋರಾಟ ನಡೆಸುತ್ತಿದ್ದಾಗ ನಾನು ಅಲ್ಲಿಂದ ಹೊರಟಿದ್ದೆ. ಸೌಜನ್ಯಕ್ಕೆ ಅವರನ್ನು ಭೇಟಿಯಾಗಿದ್ದೆ~ ಎಂದು ಸ್ಪಷ್ಟನೆ ನೀಡಿದರು.<br /> <br /> `ನಮ್ಮ ಕ್ಷೇತ್ರದಲ್ಲಿ ಕಾಲುವೆ ನೀರನ್ನು ಕಾಂಗ್ರೆಸ್ನ ಮಾಜಿ ಶಾಸಕರೊಬ್ಬರು ಅಕ್ರಮವಾಗಿ ತಮ್ಮ ಹೊಲಕ್ಕೆ ಪಡೆದಿದ್ದಾರೆ ಎಂಬ ವರದಿ ಹಾಗೂ ಅದಕ್ಕೆ ಆ ಮಾಜಿ ಶಾಸಕರು ನೀಡಿದ ಸ್ಪಷ್ಟನೆ ಗಮನಿಸಿದ್ದೇನೆ. ನಾನು ಸ್ಥಳಕ್ಕೆ ಭೇಟಿ ನೀಡಿಲ್ಲ. <br /> <br /> ಅಧಿಕಾರಿಗಳಿಂದಲೂ ಮಾಹಿತಿ ಪಡೆದಿಲ್ಲ; ಎಲ್ಲ ರೈತರಿಗೂ ತಲುಪುವಂತೆ ಸಮರ್ಪಕವಾಗಿ ನೀರು ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸಿಲ್ಲ~ ಎಂದು ಭೂಸನೂರ ಪ್ರತಿಕ್ರಿಯಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: `</strong>ಭೀಮಾ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಶಾಸಕರು ಹಾಗೂ ಪೊಲೀಸರು ನೇರವಾಗಿ ಶಾಮೀಲಾಗಿದ್ದಾರೆ~ ಎಂದು ಆಡಳಿತ ಪಕ್ಷದ ಇಂಡಿ ಕ್ಷೇತ್ರದ ಶಾಸಕ ಡಾ.ಸಾರ್ವಭೌಮ ಬಗಲಿ ಗಂಭೀರ ಆರೋಪ ಮಾಡಿದರು.<br /> <br /> ಭೀಮಾ ತೀರದಲ್ಲಿ ಬೋಟ್ಗಳನ್ನು ಬಳಸಿ ಅಕ್ರಮವಾಗಿ ಮರಳು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಅಮಾಯಕ ಲಾರಿ ಚಾಲಕರ ಮೇಲೆ ಮೊಕದ್ದಮೆ ದಾಖಲಿಸಲಾಗುತ್ತಿದೆ ಎಂದು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.<br /> <br /> `ಇಂಡಿಯ ಡಿವೈಎಸ್ಪಿ ಮುತ್ತುರಾಜ್ ಅವರು ಹಿಂಗಣಿಯಿಂದ ಧೂಳಖೇಡವರೆಗೆ ನದಿ ತೀರದಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಏಳು ಬೋಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶ ಝಳಕಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತದೆ. <br /> <br /> ಝಳಕಿ ಠಾಣೆಯಲ್ಲಿದ್ದ ಪ್ರಾಮಾಣಿಕ ಪೊಲೀಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಅಸಮರ್ಥ ಅಧಿಕಾರಿಯನ್ನು ಅಲ್ಲಿಗೆ ನಿಯೋಜಿಸಲಾಗಿದೆ. ಇದಕ್ಕೆ ಬೆಳಗಾವಿ ವಲಯದ ಐಜಿಪಿ ಸಂಧು ಅವರೇ ಹೊಣೆ~ ಎಂದು ಆರೋಪಿಸಿದರು.<br /> <br /> `ಸರ್ಕಾರವೂ ಅಷ್ಟೇ. ಒಂದು ಗುಂಪಿನ ಶಾಸಕರಿಗೆ ಮಾತ್ರ ಆದ್ಯತೆ ನೀಡಿ ಅವರ ಕೆಲಸಗಳನ್ನು ಮಾಡಿಕೊಡುತ್ತಿದೆ. ನಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿಲ್ಲ. ಅಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆಗೆ ಮನವಿ ಮಾಡಿದರೂ ನಮ್ಮ ಮಾತಿಗೆ ಮಾನ್ಯತೆ ನೀಡುತ್ತಿಲ್ಲ~ ಎಂದು ದೂರಿದರು.<br /> <br /> <strong>ಹೋರಾಟದಲ್ಲಿ ಪಾಲ್ಗೊಂಡಿಲ್ಲ: </strong>`ಭೀಮಾ ನದಿಯಲ್ಲಿ ಮರಳು ಇದೆ. ಅಲ್ಲಿಯೇ ಗಣಿಗಾರಿಕೆ ನಡೆಯಲು ಸಾಧ್ಯ. ಅದನ್ನು ಬಿಟ್ಟು ಇನ್ನೇನು ವಿಜಾಪುರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತದೆಯೇ?~ ಎಂದು ಪತ್ರಿಕಾಗೋಷ್ಠಿಯಲ್ಲಿದ್ದ ಸಿಂದಗಿಯ ಶಾಸಕ ರಮೇಶ ಭೂಸನೂರ ಪ್ರಶ್ನಿಸಿದರು.<br /> <br /> ತಮ್ಮ ಸ್ವಗ್ರಾಮ ದೇವಣಗಾಂವದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂದು ಅಲ್ಲಿಯ ಜನ ಪ್ರತಿಭಟನೆ ನಡೆಸಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.`ಅಕ್ರಮ ಮರಳು ಗಣಿಗಾರಿಕೆ ವಿರೋಧಿಸಿ ಸಿಂದಗಿ ತಾಲ್ಲೂಕು ದೇವಣಗಾಂವದಲ್ಲಿ ಗ್ರಾಮಸ್ಥರು ನಡೆಸಿದ ಹೋರಾಟದಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಅವರು ಹೋರಾಟ ನಡೆಸುತ್ತಿದ್ದಾಗ ನಾನು ಅಲ್ಲಿಂದ ಹೊರಟಿದ್ದೆ. ಸೌಜನ್ಯಕ್ಕೆ ಅವರನ್ನು ಭೇಟಿಯಾಗಿದ್ದೆ~ ಎಂದು ಸ್ಪಷ್ಟನೆ ನೀಡಿದರು.<br /> <br /> `ನಮ್ಮ ಕ್ಷೇತ್ರದಲ್ಲಿ ಕಾಲುವೆ ನೀರನ್ನು ಕಾಂಗ್ರೆಸ್ನ ಮಾಜಿ ಶಾಸಕರೊಬ್ಬರು ಅಕ್ರಮವಾಗಿ ತಮ್ಮ ಹೊಲಕ್ಕೆ ಪಡೆದಿದ್ದಾರೆ ಎಂಬ ವರದಿ ಹಾಗೂ ಅದಕ್ಕೆ ಆ ಮಾಜಿ ಶಾಸಕರು ನೀಡಿದ ಸ್ಪಷ್ಟನೆ ಗಮನಿಸಿದ್ದೇನೆ. ನಾನು ಸ್ಥಳಕ್ಕೆ ಭೇಟಿ ನೀಡಿಲ್ಲ. <br /> <br /> ಅಧಿಕಾರಿಗಳಿಂದಲೂ ಮಾಹಿತಿ ಪಡೆದಿಲ್ಲ; ಎಲ್ಲ ರೈತರಿಗೂ ತಲುಪುವಂತೆ ಸಮರ್ಪಕವಾಗಿ ನೀರು ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಒತ್ತಾಯಿಸಿಲ್ಲ~ ಎಂದು ಭೂಸನೂರ ಪ್ರತಿಕ್ರಿಯಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>