ಸುರಪುರ: ಕೇಂದ್ರ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಎಸ್ಐಆರ್ ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್ಎಫ್) ಪರೀಕ್ಷೆಯಲ್ಲಿ ಸುರಪುರದ ವೇಣುಗೋಪಾಲ ನಾಯಕ ವೆಂಕೋಬ ದೊರೆ 196ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ವೇಣುಗೋಪಾಲ ನಾಯಕ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ. (ಭೌತಶಾಸ್ತ್ರ) ಓದಿದ್ದು ಫ್ಲೋರೋಸೆನ್ಸ್ ವಿಷಯದ ಬಗ್ಗೆ ಸಂಶೋಧನೆ (ಪಿಎಚ್.ಡಿ) ಮಾಡುತ್ತಿದ್ದಾರೆ.