ತಳ್ಳಳ್ಳಿ (ಬಿ) ಗ್ರಾಮದ ಸಿದ್ಧರಾಮ ಹರವಾಳ ಅವರು ಮಂಗಳವಾರ ಶಹಾಪುರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿ ಮರಳಿ ಕೆಂಭಾವಿ ಗ್ರಾಮಕ್ಕೆ ಕಾರಿನಲ್ಲಿ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಏಕಾಏಕಿ ಕಾರಿನ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಕಾರು ಚಾಲಕ ಕೆಳಗಡೆ ಇಳಿದು ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಬೆಂಕಿ ಸಂಪೂರ್ಣ ಕಾರಿಗೆ ಆವರಿಸಿದೆ. ಕೂಡಲೇ ಕಾರಿನಲ್ಲಿದ್ದವರು ಕೆಳಗಡೆ ಇಳಿದಿದ್ದಾರೆ. ಯಾವುದೇ ಅವಘಡ ಸಂಭವಿಸಿಲ್ಲ. ಅಗ್ನಿ ಶಾಮಕ ಠಾಣಾಧಿಕಾರಿ ಪ್ರಮೋದ ವಾಲಿ, ಸಿಬ್ಬಂದಿ ಮಲ್ಲಿಕಾರ್ಜುನ ತಳವಾರ, ಸದ್ಧಾಂ ಹುಸೇನ್, ಸಿ.ಬಿ. ಮುಜಾವಾರ, ಸುಭಾಶಚಂದ್ರ ಬಂದು ಕಾರಿನ ಬೆಂಕಿ ನಂದಿಸಿದರು.