<p><strong>ಗುರುಮಠಕಲ್: </strong>ಪಟ್ಟಣದ ಹೊರವಲಯದ ಯಶೋಧಾ ಪೆಟ್ರೋಲ್ ಬಂಕ್ ಹತ್ತಿರಲಾರಿಯು ಚಾಲಕನ ನಿಯಂತ್ರಣ ತಪ್ಪಿ ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಭಾನುವಾರ ಜರುಗಿದೆ.</p>.<p>ಇಬ್ಬರಿಗೆ ಗಂಭೀರ ಹಾಗೂ 20 ಜನರಿಗೆ ಸಣ್ಣಪುಟ್ಟ ಗಾಯಗ ಳಾಗಿವೆ.ಮೃತರನ್ನು ತೆಲಂಗಾಣ ರಾಜ್ಯದ ತಾಂಡೂರು ನಗರದ ವ್ಯಾಪ್ತಿಯ ಮಲ್ಲರೆಡ್ಡಿಪಲ್ಲಿ ಗ್ರಾಮದ ಚಂದ್ರಮ್ಮ ಬಿಚ್ಚಪ್ಪ (48) ಎಂದು ಗುರುತಿಸಲಾಗಿದೆ.</p>.<p>ಕೋಸಗಿ ಮೂಲದ ಯುವತಿ ಅಖಿಲಾ (17) ಅವರ ಎದೆಯ ಬಲಭಾಗದಲ್ಲಿ ಹಾಗೂ ಲಾರಿ ಚಾಲಕನಿಗೆ ಪಕ್ಕೆಲಬುಗಳಲ್ಲಿ ಕಬ್ಬಿಣದ ಸರಳು ನಾಟಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನಗರಕ್ಕೆ ಕಳುಹಿಸಲಾಗಿದೆ.</p>.<p>ಮೂಳೆ ಮುರಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸಾಮಾನ್ಯ ಪೆಟ್ಟುಗಳಾಗಿರುವವರಿಗೆ ಗುರುಮಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.</p>.<p>ಗುರುಮಠಕಲ್ ಸಿಪಿಐ ಹೊಸಕೇರಪ್ಪ, ಪಿಎಸೈ ಶೀಲಾದೇವಿ ಸ್ಥಳಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್: </strong>ಪಟ್ಟಣದ ಹೊರವಲಯದ ಯಶೋಧಾ ಪೆಟ್ರೋಲ್ ಬಂಕ್ ಹತ್ತಿರಲಾರಿಯು ಚಾಲಕನ ನಿಯಂತ್ರಣ ತಪ್ಪಿ ತೆಲಂಗಾಣ ಸಾರಿಗೆ ಸಂಸ್ಥೆಯ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಭಾನುವಾರ ಜರುಗಿದೆ.</p>.<p>ಇಬ್ಬರಿಗೆ ಗಂಭೀರ ಹಾಗೂ 20 ಜನರಿಗೆ ಸಣ್ಣಪುಟ್ಟ ಗಾಯಗ ಳಾಗಿವೆ.ಮೃತರನ್ನು ತೆಲಂಗಾಣ ರಾಜ್ಯದ ತಾಂಡೂರು ನಗರದ ವ್ಯಾಪ್ತಿಯ ಮಲ್ಲರೆಡ್ಡಿಪಲ್ಲಿ ಗ್ರಾಮದ ಚಂದ್ರಮ್ಮ ಬಿಚ್ಚಪ್ಪ (48) ಎಂದು ಗುರುತಿಸಲಾಗಿದೆ.</p>.<p>ಕೋಸಗಿ ಮೂಲದ ಯುವತಿ ಅಖಿಲಾ (17) ಅವರ ಎದೆಯ ಬಲಭಾಗದಲ್ಲಿ ಹಾಗೂ ಲಾರಿ ಚಾಲಕನಿಗೆ ಪಕ್ಕೆಲಬುಗಳಲ್ಲಿ ಕಬ್ಬಿಣದ ಸರಳು ನಾಟಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ನಗರಕ್ಕೆ ಕಳುಹಿಸಲಾಗಿದೆ.</p>.<p>ಮೂಳೆ ಮುರಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸಾಮಾನ್ಯ ಪೆಟ್ಟುಗಳಾಗಿರುವವರಿಗೆ ಗುರುಮಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.</p>.<p>ಗುರುಮಠಕಲ್ ಸಿಪಿಐ ಹೊಸಕೇರಪ್ಪ, ಪಿಎಸೈ ಶೀಲಾದೇವಿ ಸ್ಥಳಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>