ಜಿಲ್ಲೆಯಲ್ಲಿ ಕೋವಿಡ್-19 ಖಚಿತಪಟ್ಟ 163 ಪ್ರಕರಣಗಳ ಪೈಕಿ 9 ಜನ ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.
ಸುರಪುರ ತಾಲ್ಲೂಕಿನ ಬೇವಿನಾಳ ಎಸ್.ಕೆ ಗ್ರಾಮದ 28 ವರ್ಷದ ಪುರುಷ (ಪ್ರಕರಣ ಸಂಖ್ಯೆ 2475), ಬೇವಿನಾಳ ಎಸ್.ಕೆ ಗ್ರಾಮದ 24 ವರ್ಷದ ಪುರುಷ (ಪಿ-2476), ಬೇವಿನಾಳ ಎಸ್.ಕೆ ಗ್ರಾಮದ 28 ವರ್ಷದ ಪುರುಷ (ಪಿ-2477), ಯಾದಗಿರಿ ತಾಲ್ಲೂಕಿನ ಸೈದಾಪುರ ಗ್ರಾಮದ 24 ವರ್ಷದ ಮಹಿಳೆ (ಪಿ-2478), ಶಹಾಪುರ ತಾಲ್ಲೂಕಿನ ಉಕ್ಕಿನಾಳ ತಾಂಡಾದ 4 ವರ್ಷದ ಬಾಲಕ (ಪಿ-2479), ಗುರುಮಠಕಲ್ ನಗರದ 46 ವರ್ಷದ ಪುರುಷ (ಪಿ-2480), ಯಾದಗಿರಿ ತಾಲ್ಲೂಕಿನ ಮೋಟನಳ್ಳಿ ತಾಂಡಾದ 11 ವರ್ಷದ ಬಾಲಕನಿಗೆ (ಪಿ-2481) ಕೋವಿಡ್ ದೃಢಪಟ್ಟಿದೆ.
ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ಸೊಲ್ಲಾಪುರ ಸ್ಥಳಗಳಿಂದ ಜಿಲ್ಲೆಗೆ ಹಿಂದಿರುಗಿದರಾಗಿದ್ದಾರೆ. ಪ್ರಕರಣ ಸಂಖ್ಯೆ ಪಿ-2475, ಪಿ-2476, ಪಿ-2477 ವ್ಯಕ್ತಿಗಳು ಮೇ 15ರಂದು ಜಿಲ್ಲೆಗೆ ಆಗಮಿಸಿದ್ದರು. ಪಿ-2478, ಪಿ-2480 ವ್ಯಕ್ತಿಗಳು ಮೇ 21ರಂದು ಆಗಮಿಸಿದರೆ, ಪಿ-2479 ಮತ್ತು 2481 ವ್ಯಕ್ತಿಗಳು ಮೇ 13ರಂದು ಆಗಮಿಸಿದ್ದರು.