ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾಜದ ಅಂಕುಡೊಂಕು ತಿದ್ದಿದ ಶರಣ’

Last Updated 22 ಜನವರಿ 2021, 1:54 IST
ಅಕ್ಷರ ಗಾತ್ರ

ಸುರಪುರ: ‘ವಚನಗಳ ಮೂಲಕವೇ ಸಮಾಜದಲ್ಲಿನ ಮೇಲು ಕೀಳು, ಅಸ್ಪೃಶ್ಯತೆ, ಜಾತಿ, ಮೂಢನಂಬಿಕೆ ಹಾಗೂ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದ ನಿಜಶರಣ ಅಂಬಿಗರ ಚೌಡಯ್ಯ. ಅವರು ರಚಿಸಿರುವ ವಚನಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಹೇಳಿದರು.

ನಗರದ ಭೋವಿಗಲ್ಲಿ ಅಂಬಿಗರ ಚೌಡಯ್ಯನ ಕಟ್ಟೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.

ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮಾತನಾಡಿದರು.

ಗಂಗಾಮತ, ಕಬ್ಬಲಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಭಂಡಾರಿ ನಾಟೇಕರ್ ಮಾತನಾಡಿ, ‘ಮುಖ್ಯಮಂತ್ರಿಗಳು ಕೇಂದ್ರದ ಮೇಲೆ ಒತ್ತಡ ಹಾಕಿ ಗಂಗಾಮತ ಕಬ್ಬಲಿಗ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು’ ಎಂದು ಆಗ್ರಹಿಸಿದರು.

ನಗರಸಭೆ ಉಪಾಧ್ಯಕ್ಷ ಮಹೇಶ್ ಪಾಟೀಲ್, ಸದಸ್ಯರಾದ ಮಾನಪ್ಪ ಚಳ್ಳಿಗಿಡ, ನರಸಿಂಹಕಾಂತ ಪಂಚಮಗಿರಿ, ವಿಷ್ಣು ಗುತ್ತೇದಾರ, ಪಿಐ ಸಾಹೇಬಗೌಡ ಪಾಟೀಲ್, ಪೌರಾಯುಕ್ತ ಜೀವನ್, ಸಂಘಟನಾಧಿಕಾರಿ ಓಂಕಾರ ಪೂಜಾರಿ, ವ್ಯವಸ್ಥಾಪಕ ಯಲ್ಲಪ್ಪ ನಾಯಕ, ನಗರ ಘಟಕಾಧ್ಯಕ್ಷ ಪಾರಪ್ಪ ಗುತ್ತೇದಾರ, ಸಮಾಜದ ಗೌರವಾಧ್ಯಕ್ಷ ವೆಂಕಟೇಶ ಪೋತಲಕರ, ತಾ.ಪಂ. ಮಾಜಿ ಸದಸ್ಯ ಮಾನಪ್ಪ ಸೂಗೂರ, ಯಲ್ಲಪ್ಪ ಹುಜರಾತಿ, ಯಂಕಣ್ಣ ಕಟ್ಟಿಮನಿ, ವಕೀಲರಾದ ವಿಶ್ವಮಿತ್ರ ಕಟ್ಟಿಮನಿ, ನಂದಣ್ಣ ಬಾಕಲಿ, ಸಂಗಣ್ಣ ಬಾಕಲಿ, ಶಿವರಾಮಯ್ಯ, ವೆಂಕಟರೆಡ್ಡಿ, ಜಟ್ಟೆಪ್ಪ ವಾರಿ, ಪರಶುರಾಮ್, ಜಕ್ಕಪ್ಪ ಕಟ್ಟಿಮನಿ, ಸಾಯಿಬಣ್ಣ ಪೂಜಾರಿ, ವೆಂಕಟೇಶ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT