ನಿರಂತರ ವಿದ್ಯುತ್ ಪೂರೈಕೆ ಭರವಸೆ

ಹುಣಸಗಿ: ಕೊಡೇಕಲ್ಲ ವಲಯದ 37 ಹಳ್ಳಿಗಳಿಗೂ ನಿರಂತರ ಜ್ಯೋತಿ ವಿದ್ಯುತ್ ಸರಬರಾಜು ಮತ್ತು ಕೊಡೇಕಲ್ಲ ಪಟ್ಟಣಕ್ಕೆ ಪ್ರತ್ಯೇಕ ಫಿಡರ್ ಅಳವಡಿಕೆ ಮಾಡುವಂತೆ ಒತ್ತಾಯಿಸಿ ಎರಡು ದಿನದಿಂದ ನಡೆದ ಧರಣಿ ಸ್ಥಳಕ್ಕೆ ಮಂಗಳವಾರ ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಆಗಮಿಸಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರವೇ (ಪ್ರವೀಣ್ ಶೆಟ್ಟಿ) ಬಣದ ತಾಲ್ಲೂಕು ಅಧ್ಯಕ್ಷ ರಮೇಶ ಬಿರಾದಾರ ಮಾತನಾಡಿ, ನಮ್ಮ ಬೇಡಿಕೆ ಬಗ್ಗೆ ಸಾಕಷ್ಟು ಸಲ ಮನವಿ ಮಾಡಿಕೊಂಡಿದ್ದೇವು, ಆದರೆ ಜೆಸ್ಕಾಂ ಅಧಿಕಾರಿಗಳು ಸ್ಪಂದಿಸಿಲ್ಲ ಆದ್ದರಿಂದ ಧರಣಿ ಹಮ್ಮಿಕೊಳ್ಳುವಂತಾಗಿತ್ತು ಎಂದರು.
ಇಇ ರಾಘವೇಂದ್ರ ಅವರು ಮಾತನಾಡಿ, 10 ದಿನದ ತಮ್ಮ ಸಮಸ್ಯೆ ಬಗೆ ಹರಿಸುವದಾಗಿ ಲಿಖಿತ ಭರವಸೆ ನೀಡಿದ್ದರಿಂದ ಧರಣಿ ಅಂತ್ಯಗೊಳಿಸಿದರು.
ತಾಲ್ಲೂಕು ಗೌರವಾಧ್ಯಕ್ಷ ಶಿವರಾಜ ಹೊಕ್ರಾಣಿ, ತಾಲ್ಲೂಕು ಉಪಾಧ್ಯಕ್ಷ ದೇವರಾಜ ಪಾಟೀಲ, ಕಾರ್ಯದರ್ಶಿ ಅಮರೇಶ ನೂಲಿ, ವಲಯಾಧ್ಯಕ್ಷ ರಮೇಶ ಪೂಜಾರಿ, ಪದಾಧಿಕಾರಿಗಳು
ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.