<p><strong>ಯಾದಗಿರಿ:</strong> ಮಧ್ಯಪ್ರದೇಶದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಇಂಡಿಯನ್ ಓವರ್ಸಿಸ್ ಕಾಂಗ್ರೆಸ್ ಸ್ಪೇನ್ ದೇಶದ ಅಧ್ಯಕ್ಷ, ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದ ನಿವಾಸಿ ಬಸವರಾಜ ಸಂಕೀನ್ ಹೆಜ್ಜೆ ಹಾಕಿದರು.</p>.<p>ಯಾತ್ರೆಯಲ್ಲಿ ಭಾಗವಹಿಸಲೆಂದೇ ಅವರು ಈಚೆಗೆ ಸ್ಪೇನ್ನಿಂದ ಬಂದಿದ್ದಾರೆ. ಬಾಹ್ಯಾಕಾಶ ಎಂಜಿನಿಯರ್ ಆಗಿರುವ ಬಸವರಾಜ ಸಂಕೀನ್ ಹಲವು ವರ್ಷಗಳಿಂದ ಸ್ಪೇನ್ ದೇಶದಲ್ಲಿ ನೆಲೆಸಿದ್ದಾರೆ.</p>.<p>ಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ಬಸವರಾಜ ಸಂಕೀನ್ ಅವರೊಂದಿಗೆ ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಿದರು. ‘ಪಕ್ಷ ಸಂಘಟನೆಗೆ ಯುವ ಜನತೆ ಕಠಿಣವಾಗಿ ಶ್ರಮಿಸುವುದು ತುಂಬ ಅಗತ್ಯವಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.</p>.<p>ಇಂಡಿಯನ್ ಓವರ್ಸಿಸ್ ಕಾಂಗ್ರೆಸ್ ಸ್ಪೇನ್ ದೇಶದ ಅಧ್ಯಕ್ಷ ಸಂಕೀನ್, ಭಾರತ್ ಜೋಡೊ ಯಾತ್ರೆಗೆ ದೇಶದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ದೇಶದ ರಾಜಕೀಯ ದಿಕ್ಕನ್ನು ಬದಲಿಸುವುದರಲ್ಲಿ ಅನುಮಾನವೇ ಇಲ್ಲ.ಸ್ವಯಂ ಪ್ರೇರಿತರಾಗಿ ಜನತೆ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜಕಾರಣಿಗಳು ಮಾತ್ರವಲ್ಲ. ಸಿನಿಮಾ, ಸಾಮಾಜಿಕ ಹೋರಾಟಗಾರರು ಮತ್ತು ಮಹಿಳಾ ಹೋರಾಟಗಾರರು ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ<br />ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಮಧ್ಯಪ್ರದೇಶದಲ್ಲಿ ನಡೆದ ಭಾರತ್ ಜೋಡೊ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಇಂಡಿಯನ್ ಓವರ್ಸಿಸ್ ಕಾಂಗ್ರೆಸ್ ಸ್ಪೇನ್ ದೇಶದ ಅಧ್ಯಕ್ಷ, ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದ ನಿವಾಸಿ ಬಸವರಾಜ ಸಂಕೀನ್ ಹೆಜ್ಜೆ ಹಾಕಿದರು.</p>.<p>ಯಾತ್ರೆಯಲ್ಲಿ ಭಾಗವಹಿಸಲೆಂದೇ ಅವರು ಈಚೆಗೆ ಸ್ಪೇನ್ನಿಂದ ಬಂದಿದ್ದಾರೆ. ಬಾಹ್ಯಾಕಾಶ ಎಂಜಿನಿಯರ್ ಆಗಿರುವ ಬಸವರಾಜ ಸಂಕೀನ್ ಹಲವು ವರ್ಷಗಳಿಂದ ಸ್ಪೇನ್ ದೇಶದಲ್ಲಿ ನೆಲೆಸಿದ್ದಾರೆ.</p>.<p>ಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ಬಸವರಾಜ ಸಂಕೀನ್ ಅವರೊಂದಿಗೆ ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಿದರು. ‘ಪಕ್ಷ ಸಂಘಟನೆಗೆ ಯುವ ಜನತೆ ಕಠಿಣವಾಗಿ ಶ್ರಮಿಸುವುದು ತುಂಬ ಅಗತ್ಯವಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.</p>.<p>ಇಂಡಿಯನ್ ಓವರ್ಸಿಸ್ ಕಾಂಗ್ರೆಸ್ ಸ್ಪೇನ್ ದೇಶದ ಅಧ್ಯಕ್ಷ ಸಂಕೀನ್, ಭಾರತ್ ಜೋಡೊ ಯಾತ್ರೆಗೆ ದೇಶದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ದೇಶದ ರಾಜಕೀಯ ದಿಕ್ಕನ್ನು ಬದಲಿಸುವುದರಲ್ಲಿ ಅನುಮಾನವೇ ಇಲ್ಲ.ಸ್ವಯಂ ಪ್ರೇರಿತರಾಗಿ ಜನತೆ ಭಾರತ್ ಜೋಡೊ ಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ. ರಾಜಕಾರಣಿಗಳು ಮಾತ್ರವಲ್ಲ. ಸಿನಿಮಾ, ಸಾಮಾಜಿಕ ಹೋರಾಟಗಾರರು ಮತ್ತು ಮಹಿಳಾ ಹೋರಾಟಗಾರರು ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ರಾಹುಲ್ ಗಾಂಧಿ ಅವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ<br />ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>