<p><strong>ಯಾದಗಿರಿ:</strong> ‘ನಾಡಿಗೆ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಅವಶ್ಯವಿದೆ’ ಎಂದು ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.</p>.<p>ನಗರದ ದಿ.ವಿಶ್ವನಾಥರೆಡ್ಡಿ ಗೌಡ ಮುದ್ನಾಳ ಸಭಾಂಗಣದಲ್ಲಿ ಭೀಮ ಜ್ಯೋತಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಕುರಿತ ನಾಟಕ ಪ್ರದರ್ಶನ ಡಾ.ಬಿ.ಆರ್. ಅಂಬೇಡ್ಕರ್ ಸೇವರತ್ನ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸಮಾಜದಲ್ಲಿ ಉತ್ತಮ ನಡೆ, ರಾಷ್ಟ್ರೀಯ ಏಕತೆ ಮೂಡಲು ಎಲ್ಲರೂ ಒಂದಾಗಿ ನಡೆಯಬೇಕು. ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಬಿತ್ತುವ ಕೆಲಸವನ್ನು ಈ ಸಂಸ್ಥೆ ಮಾಡಿದೆ’ ಎಂದರು.</p>.<p>ಪ್ರಶಸ್ತಿಯನ್ನು ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಹೋರಾಟಗಾರ ಮರೆಪ್ಪ ಚಟ್ಟರಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಎಸ್ ಚನ್ನಬಸಪ್ಪ (ಡಿಎಚ್ಒ ಡಾ. ಮಹೇಶ ಬಿರಾದಾರ, ಬಾಬು ಗಂಗೂ ಚವ್ಹಾಣ್ ಗೈರು) ಅವರಿಗೆ ಪ್ರದಾನ ಮಾಡಲಾಯಿತು.</p>.<p>ವಿಜಯನಗರದ ತುಂಗಭದ್ರ ತಂಡ ‘ನಮ್ಮ ಸಂವಿಧಾನ’ ನಾಟಕ ಪ್ರದರ್ಶನ ಮಾಡಿದರು.</p>.<p>ಕಾರ್ಯಕ್ರಮದಲ್ಲಿ ಡಿಡಿಪಿಐ ಚನ್ನಬಸಪ್ಪ ಮುಧೋಳ, ಉದ್ಯಮಿ ಮಲ್ಲಿಕಾರ್ಜುನ್ ಶಿರಗೋಳ, ಸಂಸ್ಥೆ ಅಧ್ಯಕ್ಷ ಭೀಮಶಂಕರ್ ಎಂ ಯರಗೋಳ, ಕಾಲೇಜಿನ ಪ್ರಾಂಶುಪಾಲ ಸುಭಾಷಚಂದ್ರ ಕೌಲಗಿ, ಪ್ರಮುಖರಾದ ಸಾಯಿಬಣ್ಣ ಕುರಕುಂದಿ, ಶ್ರೀಶೈಲ ಹೊಸಮನಿ, ಮಲ್ಲಿಕಾರ್ಜುನ್ ಗೋಸಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ನಾಡಿಗೆ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳ ಅವಶ್ಯವಿದೆ’ ಎಂದು ಗುರುಮಠಕಲ್ ಖಾಸಾ ಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.</p>.<p>ನಗರದ ದಿ.ವಿಶ್ವನಾಥರೆಡ್ಡಿ ಗೌಡ ಮುದ್ನಾಳ ಸಭಾಂಗಣದಲ್ಲಿ ಭೀಮ ಜ್ಯೋತಿ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಕುರಿತ ನಾಟಕ ಪ್ರದರ್ಶನ ಡಾ.ಬಿ.ಆರ್. ಅಂಬೇಡ್ಕರ್ ಸೇವರತ್ನ ಪ್ರಶಸ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಸಮಾಜದಲ್ಲಿ ಉತ್ತಮ ನಡೆ, ರಾಷ್ಟ್ರೀಯ ಏಕತೆ ಮೂಡಲು ಎಲ್ಲರೂ ಒಂದಾಗಿ ನಡೆಯಬೇಕು. ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ನಾಯಕರ ಜೀವನ ಚರಿತ್ರೆಯನ್ನು ಬಿತ್ತುವ ಕೆಲಸವನ್ನು ಈ ಸಂಸ್ಥೆ ಮಾಡಿದೆ’ ಎಂದರು.</p>.<p>ಪ್ರಶಸ್ತಿಯನ್ನು ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಹೋರಾಟಗಾರ ಮರೆಪ್ಪ ಚಟ್ಟರಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಎಸ್ ಚನ್ನಬಸಪ್ಪ (ಡಿಎಚ್ಒ ಡಾ. ಮಹೇಶ ಬಿರಾದಾರ, ಬಾಬು ಗಂಗೂ ಚವ್ಹಾಣ್ ಗೈರು) ಅವರಿಗೆ ಪ್ರದಾನ ಮಾಡಲಾಯಿತು.</p>.<p>ವಿಜಯನಗರದ ತುಂಗಭದ್ರ ತಂಡ ‘ನಮ್ಮ ಸಂವಿಧಾನ’ ನಾಟಕ ಪ್ರದರ್ಶನ ಮಾಡಿದರು.</p>.<p>ಕಾರ್ಯಕ್ರಮದಲ್ಲಿ ಡಿಡಿಪಿಐ ಚನ್ನಬಸಪ್ಪ ಮುಧೋಳ, ಉದ್ಯಮಿ ಮಲ್ಲಿಕಾರ್ಜುನ್ ಶಿರಗೋಳ, ಸಂಸ್ಥೆ ಅಧ್ಯಕ್ಷ ಭೀಮಶಂಕರ್ ಎಂ ಯರಗೋಳ, ಕಾಲೇಜಿನ ಪ್ರಾಂಶುಪಾಲ ಸುಭಾಷಚಂದ್ರ ಕೌಲಗಿ, ಪ್ರಮುಖರಾದ ಸಾಯಿಬಣ್ಣ ಕುರಕುಂದಿ, ಶ್ರೀಶೈಲ ಹೊಸಮನಿ, ಮಲ್ಲಿಕಾರ್ಜುನ್ ಗೋಸಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>