<p>ಸುರಪುರ: ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ಅಂತರದಲ್ಲಿರುವ ಚಂದಲಾಪುರದ ಗ್ರಾಮಸ್ಥರು ಮೂಲ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಒಂದು ಕಾಲದಲ್ಲಿ ಸ್ವಚ್ಛತೆಗೆ ಹೆಸರಾಗಿದ್ದ ಕಾರಣ ಈ ಊರಿಗೆ ಚಂದದ ಊರು ಚಂದಲಾಪುರ ಎಂಬ ಹೆಸರು ಬಂತು. 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. 4 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಇನ್ನೂ 25 ಕುಟುಂಬಗಳು ಗುಡಿಸಲಿನಲ್ಲೇ ವಾಸಿಸುತ್ತಿವೆ.</p>.<p>ಗ್ರಾಮ ಪ್ರವೇಶಿಸುತ್ತಿದ್ದಂತೆ ತಿಪ್ಪೆ ಗುಂಡಿಗಳದ್ದೇ ಸಾಮ್ರಾಜ್ಯ ಗೋಚರಿಸುತ್ತದೆ. ಗ್ರಾಮಸ್ಥರು ಅಲ್ಲಲ್ಲಿ ತಮ್ಮ ತಿಪ್ಪೆಗಳನ್ನು ಮಾಡಿಕೊಂಡಿದ್ದು ಅಲ್ಲಿ ಸೆಗಣಿ, ಕಸ ಹಾಕುತ್ತಾರೆ. ಅದನ್ನು ಗೊಬ್ಬರವಾಗಿ ಹೊಲಕ್ಕೆ ಬಳಸುತ್ತಾರೆ. ಗ್ರಾಮಕ್ಕೆ ಈ ತಿಪ್ಪೆಗಳೇ ಈಗ ಸಮಸ್ಯೆಗಳಾಗಿವೆ. ಅರ್ಧ ಎಕರೆ ಪ್ರದೇಶವನ್ನು ಈ ತಿಪ್ಪೆಗಳು ವ್ಯಾಪಿಸಿಕೊಂಡಿವೆ. 60 ರಿಂದ 70 ತಿಪ್ಪೆಗಳಿವೆ.</p>.<p>ಮಳೆ ಬಂದ ಕಾರಣ ಈ ತಿಪ್ಪೆಗಳ ಆಜುಬಾಜು ನೀರು ನಿಂತಿದೆ. ಸೊಳ್ಳೆಗಳ ಕಾಟ ಅಧಿಕವಾಗಿದೆ. ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮದ ನೀರೆಲ್ಲ ಈ ತಿಪ್ಪೆಗಳ ಮಧ್ಯೆ ಸಂಗ್ರಹವಾಗಿದೆ.</p>.<p>ಈ ತಿಪ್ಪೆಗಳ ಮಧ್ಯೆಯೇ ಸಾರ್ವಜನಿಕ ಶೌಚಾಲಯ ಇದೆ. ಶೌಚಾಲಯ ಕಟ್ಟಡ ಕೆಲಸ ಅರ್ಧಕ್ಕೆ ನಿಂತಿದ್ದು ಮಹಿಳೆಯರಿಗೆ ಬಯಲು ಶೌಚ ಅನಿವಾರ್ಯ ಎಂಬಂತಾಗಿದೆ. ರಾತ್ರಿ ಸಮಯದಲ್ಲಿ ಅಥವಾ ಮುಳ್ಳು ಕಂಟೆಗಳ ಮರೆಯಲ್ಲಿ ಶೌಚಕ್ಕೆ ಹೋಗುವ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.</p>.<p>ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಳೆಯದಾ ಗಿರುವುದರಿಂದ ಅದನ್ನು ಭಾಗಶಃ ನೆಲಸಮ ಮಾಡಿದ್ದಾರೆ. ಈಗ ಎರಡೇ ಕೋಣೆಗಳು ಉಳಿದಿವೆ. 1 ರಿಂದ 7 ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಕರ ಕೊರತೆ ಇದೆ.</p>.<p>ಉಪ ಪಶು ಚಿಕಿತ್ಸಾ ಕೇಂದ್ರ ಕಟ್ಟಲಾಗಿತ್ತು. ಉದ್ಘಾಟನೆ ಭಾಗ್ಯ ದೊರೆಯಲಿಲ್ಲ. ಈ ಕಟ್ಟಡ ಈಗ ಬಿದ್ದು ಹೋಗಿದೆ. ರೈತರು ತಮ್ಮ ಜಾನುವಾರುಗಳನ್ನು ತೆಗೆದುಕೊಂಡು 5 ಕಿ.ಮೀ ದೂರದ ಸೂಗೂರಿಗೆ ಹೋಗಬೇಕು. ಕೊರೊನಾ ಕಾರಣ ಕಳೆದ 3 ತಿಂಗಳಿಂದ ಗ್ರಾಮಕ್ಕೆ ಬಸ್ ಬಂದಿಲ್ಲ. ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಿದೆ.</p>.<p>ಸಿ.ಸಿ. ರಸ್ತೆ ಸಮರ್ಪಕವಾಗಿಲ್ಲ. ಚರಂಡಿ ಇಲ್ಲವೇ ಇಲ್ಲ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಮ್ಮ ಗ್ರಾಮವನ್ನು ನಿರ್ಲಕ್ಷಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುರಪುರ: ತಾಲ್ಲೂಕು ಕೇಂದ್ರದಿಂದ 15 ಕಿ.ಮೀ ಅಂತರದಲ್ಲಿರುವ ಚಂದಲಾಪುರದ ಗ್ರಾಮಸ್ಥರು ಮೂಲ ಸೌಕರ್ಯಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ.</p>.<p>ಒಂದು ಕಾಲದಲ್ಲಿ ಸ್ವಚ್ಛತೆಗೆ ಹೆಸರಾಗಿದ್ದ ಕಾರಣ ಈ ಊರಿಗೆ ಚಂದದ ಊರು ಚಂದಲಾಪುರ ಎಂಬ ಹೆಸರು ಬಂತು. 2 ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. 4 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಇನ್ನೂ 25 ಕುಟುಂಬಗಳು ಗುಡಿಸಲಿನಲ್ಲೇ ವಾಸಿಸುತ್ತಿವೆ.</p>.<p>ಗ್ರಾಮ ಪ್ರವೇಶಿಸುತ್ತಿದ್ದಂತೆ ತಿಪ್ಪೆ ಗುಂಡಿಗಳದ್ದೇ ಸಾಮ್ರಾಜ್ಯ ಗೋಚರಿಸುತ್ತದೆ. ಗ್ರಾಮಸ್ಥರು ಅಲ್ಲಲ್ಲಿ ತಮ್ಮ ತಿಪ್ಪೆಗಳನ್ನು ಮಾಡಿಕೊಂಡಿದ್ದು ಅಲ್ಲಿ ಸೆಗಣಿ, ಕಸ ಹಾಕುತ್ತಾರೆ. ಅದನ್ನು ಗೊಬ್ಬರವಾಗಿ ಹೊಲಕ್ಕೆ ಬಳಸುತ್ತಾರೆ. ಗ್ರಾಮಕ್ಕೆ ಈ ತಿಪ್ಪೆಗಳೇ ಈಗ ಸಮಸ್ಯೆಗಳಾಗಿವೆ. ಅರ್ಧ ಎಕರೆ ಪ್ರದೇಶವನ್ನು ಈ ತಿಪ್ಪೆಗಳು ವ್ಯಾಪಿಸಿಕೊಂಡಿವೆ. 60 ರಿಂದ 70 ತಿಪ್ಪೆಗಳಿವೆ.</p>.<p>ಮಳೆ ಬಂದ ಕಾರಣ ಈ ತಿಪ್ಪೆಗಳ ಆಜುಬಾಜು ನೀರು ನಿಂತಿದೆ. ಸೊಳ್ಳೆಗಳ ಕಾಟ ಅಧಿಕವಾಗಿದೆ. ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಗ್ರಾಮದ ನೀರೆಲ್ಲ ಈ ತಿಪ್ಪೆಗಳ ಮಧ್ಯೆ ಸಂಗ್ರಹವಾಗಿದೆ.</p>.<p>ಈ ತಿಪ್ಪೆಗಳ ಮಧ್ಯೆಯೇ ಸಾರ್ವಜನಿಕ ಶೌಚಾಲಯ ಇದೆ. ಶೌಚಾಲಯ ಕಟ್ಟಡ ಕೆಲಸ ಅರ್ಧಕ್ಕೆ ನಿಂತಿದ್ದು ಮಹಿಳೆಯರಿಗೆ ಬಯಲು ಶೌಚ ಅನಿವಾರ್ಯ ಎಂಬಂತಾಗಿದೆ. ರಾತ್ರಿ ಸಮಯದಲ್ಲಿ ಅಥವಾ ಮುಳ್ಳು ಕಂಟೆಗಳ ಮರೆಯಲ್ಲಿ ಶೌಚಕ್ಕೆ ಹೋಗುವ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.</p>.<p>ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಹಳೆಯದಾ ಗಿರುವುದರಿಂದ ಅದನ್ನು ಭಾಗಶಃ ನೆಲಸಮ ಮಾಡಿದ್ದಾರೆ. ಈಗ ಎರಡೇ ಕೋಣೆಗಳು ಉಳಿದಿವೆ. 1 ರಿಂದ 7 ನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಶಿಕ್ಷಕರ ಕೊರತೆ ಇದೆ.</p>.<p>ಉಪ ಪಶು ಚಿಕಿತ್ಸಾ ಕೇಂದ್ರ ಕಟ್ಟಲಾಗಿತ್ತು. ಉದ್ಘಾಟನೆ ಭಾಗ್ಯ ದೊರೆಯಲಿಲ್ಲ. ಈ ಕಟ್ಟಡ ಈಗ ಬಿದ್ದು ಹೋಗಿದೆ. ರೈತರು ತಮ್ಮ ಜಾನುವಾರುಗಳನ್ನು ತೆಗೆದುಕೊಂಡು 5 ಕಿ.ಮೀ ದೂರದ ಸೂಗೂರಿಗೆ ಹೋಗಬೇಕು. ಕೊರೊನಾ ಕಾರಣ ಕಳೆದ 3 ತಿಂಗಳಿಂದ ಗ್ರಾಮಕ್ಕೆ ಬಸ್ ಬಂದಿಲ್ಲ. ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಿದೆ.</p>.<p>ಸಿ.ಸಿ. ರಸ್ತೆ ಸಮರ್ಪಕವಾಗಿಲ್ಲ. ಚರಂಡಿ ಇಲ್ಲವೇ ಇಲ್ಲ. ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಮ್ಮ ಗ್ರಾಮವನ್ನು ನಿರ್ಲಕ್ಷಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>