ಯಾದಗಿರಿ: ಹಲವಾರು ತಿಂಗಳಿಂದ ಖಾಲಿಯಾಗಿದ್ದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ಚಂಡರಕಿ ಅವರನ್ನು ನೇಮಕ ಮಾಡಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಆದೇಶ ಹೊರಡಿಸಿದ್ದಾರೆ.
ಪ್ರಾಧಿಕಾರದ ಸದಸ್ಯರಾಗಿ ರುದ್ರಗೌಡ ಬಸಣ್ಣಗೌಡ ಮಾಲಿಪಾಟೀಲ, ಶಿವಕಾಂತಮ್ಮ ಬಸಣ್ಣ ವಡ್ಡಳ್ಳಿ, ಶುಭಾಷ ಮೂರ್ತಪ್ಪ ಮಾಳಿಕೇರಿ ಹಾಗೂ ಮಂಜುನಾಥ ಶಿವಶರಣಪ್ಪ ಜಡಿ ಅವರನ್ನು ನೇಮಕ ಮಾಡಲಾಗಿದೆ.
ಶುಕ್ರವಾರ ಬೆಂಗಳೂರಿನ ಶಾಸಕರ ಭವನದಲ್ಲಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅವರಿಂದ ಬಸವರಾಜ ಚಂಡರಕಿ ನೇಮಕಾತಿ ಆದೇಶ ಪತ್ರ ಸ್ವೀಕರಿಸಿದರು. ಈ ವೇಳೆ ಮುಖಂಡ ಖಂಡಪ್ಪ ದಾಸನ್ ಇದ್ದರು.
ಕಾಂಗ್ರೆಸ್ ಸರ್ಕಾರದಲ್ಲಿ ರಾಮರೆಡ್ಡಿಗೌಡ ತಂಗಡಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಅಧ್ಯಕ್ಷರ ನೇಮಕಾತಿ ಆಗಿರಲಿಲ್ಲ. ಈಗ ಬಿಜೆಪಿ ಸರ್ಕಾರದಲ್ಲಿ ನೇಮಕಾತಿ ಮಾಡಲಾಗಿದೆ.