<p><strong>ಯಾದಗಿರಿ</strong>: ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಮತ್ತು ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ ಬೆಂಬಲಿಗರ ನಡುವೆ ತಾಲ್ಲೂಕಿನ ಸಾವೂರ ಗ್ರಾಮದಲ್ಲಿ ಮಂಗಳವಾರ ಬ್ಯಾನರ್ ಕುರಿತು ಗಲಾಟೆಯಾಯಿತು.</p>.<p>ರಸ್ತೆ ಕಾಮಗಾರಿಗೆ ಶಾಸಕ ನಾಗನಗೌಡ ಕಂದಕೂರ ಅವರು ಚಾಲನೆ ನೀಡುವ ಗುರುಮಠಕಲ್ ಮತಕ್ಷೇತ್ರದ ಸಾವೂರ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಆದರೆ, ಬ್ಯಾನರ್ನಲ್ಲಿ ಶಾಸಕ ನಾಗನಗೌಡ ಕಂದಕೂರ ಅವರ ಚಿತ್ರ ಮಾತ್ರವಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು. ಇಬ್ಬರು ನಾಯಕರ ಸಮ್ಮುಖದಲ್ಲೇ ಕೈಯಲ್ಲಿ ಕುರ್ಚಿ ಹಿಡಿದು ಹೊಡೆದಾಡಿದರು.</p>.<p>ಇದರಿಂದ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರ್ಯಕರ್ತರನ್ನು ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ನಂತರ ಕಾರ್ಯಕ್ರಮ ಸರಾಗವಾಗಿ ನಡೆಯಿತು.</p>.<p>‘ಬ್ಯಾನರ್ನಲ್ಲಿ ಚಿತ್ರ ಹಾಕುವ ವಿಷಯ ನನ್ನದಲ್ಲ. ಅದೆಲ್ಲ ಅಧಿಕಾರಿಗಳ ಕೆಲಸ. ನನ್ನ ರಾಜಕೀಯ ಜೀವನದಲ್ಲಿ ಚಿಲ್ಲರೆ ರಾಜಕಾರಣ ಮಾಡಿಲ್ಲ’ ಎಂದು ನಾಗನಗೌಡ ಕಂದಕೂರ ತಿಳಿಸಿದರು.</p>.<p>‘ಬ್ಯಾನರ್ನಲ್ಲಿ ನನ್ನ ಚಿತ್ರ ಹಾಕದ ಕಾರಣ ಸಹಜವಾಗಿಯೇ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ಬಾಬುರಾವ ಚಿಂಚನಸೂರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ</strong>: ಗುರುಮಠಕಲ್ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ ಮತ್ತು ಬಿಜೆಪಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ ಬೆಂಬಲಿಗರ ನಡುವೆ ತಾಲ್ಲೂಕಿನ ಸಾವೂರ ಗ್ರಾಮದಲ್ಲಿ ಮಂಗಳವಾರ ಬ್ಯಾನರ್ ಕುರಿತು ಗಲಾಟೆಯಾಯಿತು.</p>.<p>ರಸ್ತೆ ಕಾಮಗಾರಿಗೆ ಶಾಸಕ ನಾಗನಗೌಡ ಕಂದಕೂರ ಅವರು ಚಾಲನೆ ನೀಡುವ ಗುರುಮಠಕಲ್ ಮತಕ್ಷೇತ್ರದ ಸಾವೂರ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಆದರೆ, ಬ್ಯಾನರ್ನಲ್ಲಿ ಶಾಸಕ ನಾಗನಗೌಡ ಕಂದಕೂರ ಅವರ ಚಿತ್ರ ಮಾತ್ರವಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದರು. ಇಬ್ಬರು ನಾಯಕರ ಸಮ್ಮುಖದಲ್ಲೇ ಕೈಯಲ್ಲಿ ಕುರ್ಚಿ ಹಿಡಿದು ಹೊಡೆದಾಡಿದರು.</p>.<p>ಇದರಿಂದ ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರ್ಯಕರ್ತರನ್ನು ಚದುರಿಸಿ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ನಂತರ ಕಾರ್ಯಕ್ರಮ ಸರಾಗವಾಗಿ ನಡೆಯಿತು.</p>.<p>‘ಬ್ಯಾನರ್ನಲ್ಲಿ ಚಿತ್ರ ಹಾಕುವ ವಿಷಯ ನನ್ನದಲ್ಲ. ಅದೆಲ್ಲ ಅಧಿಕಾರಿಗಳ ಕೆಲಸ. ನನ್ನ ರಾಜಕೀಯ ಜೀವನದಲ್ಲಿ ಚಿಲ್ಲರೆ ರಾಜಕಾರಣ ಮಾಡಿಲ್ಲ’ ಎಂದು ನಾಗನಗೌಡ ಕಂದಕೂರ ತಿಳಿಸಿದರು.</p>.<p>‘ಬ್ಯಾನರ್ನಲ್ಲಿ ನನ್ನ ಚಿತ್ರ ಹಾಕದ ಕಾರಣ ಸಹಜವಾಗಿಯೇ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದು ಬಾಬುರಾವ ಚಿಂಚನಸೂರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>