ಹತ್ತಿ ಬಿತ್ತನೆ ಮಾಡಿದ್ದ ಜಮೀನುಗಳ ತಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಅಲ್ಲದೆ ಹತ್ತಿ ಕೀಳಲು ಸಿದ್ಧತೆಯನ್ನು ರೈತರು ಮಾಡಿಕೊಳ್ಳುತ್ತಿದ್ದರು. ಇನ್ನೂ ಕೆಲವು ಕಡೆ ಕಾಯಿ ಹಾಗೂ ಹೂ ಕಟ್ಟಿದ ಹತ್ತಿ ಬೆಳೆಗೆ ತೇವಾಂಶ ಅಧಿಕವಾಗಿ ಕೊಳೆಯುವ ಭೀತಿ ಎದುರಾಗಿದೆ. ಹಿಂಗಾರು ಬಿತ್ತನೆಗಾಗಿ ಸಿದ್ಧಪಡಿಸಿದ ಜಮೀನುಗಳಲ್ಲಿ ನೀರು ನಿಂತಿರುವುದರಿಂದ ಜೋಳ, ಶೇಂಗಾ, ಕಡಲೆ ಬೆಳೆ ಬಿತ್ತನೆ ವಿಳಂಬವಾಗುವ ಆತಂಕ ಶುರುವಾಗಿದೆ.