‘ರಾಜ್ಯ ರೈತ ಸಂಘದ ಮುಖಂಡರು ಆಗಮಿಸಿ ರೈತರ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದರು. ಅಲ್ಲದೆ ನೇರವಾಗಿ ನಾವೆಲ್ಲರೂ ಕೂಡಿ ಗ್ರಾಮಕ್ಕೆ ತೆರಳಿ ಅಲ್ಲಿ ಸಂಗ್ರಹಿಸಿ ಇಟ್ಟ ಹತ್ತಿಯನ್ನು ಗಮನಿಸಿದೆವು. ಮಳೆಗೆ ಹಾನಿಯಾದರೆ ರೈತರು ಸಂಕಷ್ಟ ಎದುರಿಸುತ್ತಾರೆ ಎಂಬುದು ಮನವರಿಕೆಯಾದ ಬಳಿಕ ಹಬ್ಬಳ್ಳಿ ಹಾಗೂ ಇಬ್ರಾಹಿಂಪೂರ ಗ್ರಾಮದ 43 ರೈತರಿಂದ 3,459 ಕ್ವಿಂಟಲ್ ಹತ್ತಿಯನ್ನು ಖರೀದಿಸುವುದರ ಜೊತೆಗೆ ₹2.50 ಕೋಟಿ ಹಣ ಪಾವತಿಸಲು ಸೂಚಿಸಲಾಯಿತು’ ಎಂದರು.