ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಕ್ತರ ಮನವೊಲಿಸಿ–ಜಿಲ್ಲೆಯ ವಿವಿಧ ಮಠಾಧೀಶರಿಗೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ

Last Updated 5 ಅಕ್ಟೋಬರ್ 2021, 2:46 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್-19 ನಿಯಂತ್ರಿಸುವ ಲಸಿಕಾಕರಣ ಅಭಿಯಾನಕ್ಕೆ ಮಠಾಧೀಶರು ಮತ್ತು ದೇವಸ್ಥಾನದ ಆಡಳಿತ ಮಂಡಳಿಯವರು ಭಕ್ತರ ಮನವೊಲಿಸಿ ಕೋವಿಡ್ ಮುಕ್ತ ಜಿಲ್ಲೆಯಾಗಿಸುವ ಗುರಿಗೆ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೋವಿಡ್ ಲಸಿಕಾಕರಣದಲ್ಲಿ ಶೇ 100 ರಷ್ಟು ಪ್ರಗತಿ ಸಾಧಿಸುವಲ್ಲಿ ಮಠಾಧೀಶರು, ದೇವಸ್ಥಾನಗಳ ಆಡಳಿತ ಮಂಡಳಿಯವರು ಅವರ ಧಾರ್ಮಿಕ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಮಿಸುವ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಲಸಿಕೆ ಪಡೆಯುವಂತೆ ಮನವೊಲಿಸಬೇಕು ಎಂದು ಅವರು ಮನವಿ ಮಾಡಿದರು.

ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸತತವಾಗಿ ಶ್ರಮಿಸುತ್ತಿದೆ. ಲಸಿಕಾಕರಣದ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆ ಹೋಗಲಾಡಿಸಬೇಕಾಗಿದೆ. ಅವರು ಸಹಕಾರ ಕೊಟ್ಟರೆ ಮಾತ್ರ 3ನೇ ಅಲೆ ತಡೆಯಲು ಸಾಧ್ಯ. ಈಗಾಗಲೇ ಜಿಲ್ಲೆಯಲ್ಲಿ ಲಸಿಕಾಕರಣ ತೀವ್ರಗತಿಯಲ್ಲಿ ನಡೆಯುತ್ತಿದೆ. ಆದರೂ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಲಸಿಕಾಕರಣಕ್ಕೆ ಮನವೊಲಿಸಿರುಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಸ್ವಾಮೀಜಿಯವರ ಮಾತನ್ನು ಮಠಕ್ಕೆ ಬರುವ ಭಕ್ತರು ಶ್ರದ್ಧೆಯಿಂದ ಪಾಲಿಸುತ್ತಾರೆ. ಜನರಲ್ಲಿ ಇರುವ ಅವೈಜ್ಞಾನಿಕ ವಿಚಾರವನ್ನು ತೊಲಗಿಸಲು ಮಠಾಧೀಶರಿಂದ ಮಾತ್ರ ಸಾಧ್ಯ ಎಂದರು. ಲಾಕ್ ಡೌನ್ ಕಠಿಣ ಸಂದರ್ಭದಲ್ಲಿ ಅನೇಕ ಮಠಾಧೀಶರು ಮಾಡಿದ ಸಾಮಾಜಿಕ ಕಾರ್ಯಗಳನ್ನುಜಿಲ್ಲಾಧಿಕಾರಿ ಶ್ಲಾಘಿಸಿದರು.

ಮದ್ಯಪಾನ ಸೇವಿಸುವವರಿಂದ ಹಿಂದೇಟು: ಕೆಲವರಿಗೆ ಲಸಿಕಾಕರಣ ನಂತರ ಮೈ, ಕೈ ನೋವು ಸಹಜವಾಗಿ ಕಾಣುತ್ತದೆ. ಮದ್ಯಪಾನ ಸೇವಿಸುವವರು ಅಡ್ಡ ಪರಿಣಾಮಗಳು ಆಗಬಹುದೆಂದುಲಸಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಖಂಡಿತವಾಗಿಯೂ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಇಲ್ಲಿಯವರೆಗೆ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮಗಳು ಆಗಿಲ್ಲ. ಮೊದಲನೇ ಡೋಸ್ ಶೇ 70 ರಷ್ಟು ಮತ್ತು 2 ನೇ ಡೋಸ್ ಶೇ 30 ರಷ್ಟು ಸುರಕ್ಷಿತ. ಹಾಗಾಗಿ ಇಲ್ಲಿಯವರೆಗೆ ಇವೆರಡೂ ಡೋಸ್ ಪಡೆದವರು ಕೊರೊನಾ ಬಂದರೂ ಮರಣಹೊಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ವಿಶ್ವರಾಧ್ಯ ಸಿದ್ದ ಸಂಸ್ಥಾನ ಅಬ್ಬೆತುಮಕೂರಿನ ಡಾ.ಗಂಗಾಧರ ಸ್ವಾಮೀಜಿ, ಪಶ್ಚಿಮಾದ್ರಿ ಸಂಸ್ಥಾನಮಠ ನೆರಡಗಂ ಶಾಖೆಯ ಪಂಚಮ ಸಿದ್ದಲಿಂಗ ಸ್ವಾಮೀಜಿ, ಹೆಡಗಿಮದ್ರಾ ಶಾಂತ ಮಲ್ಲಿಕಾರ್ಜುನ
ಶಿವಾಚಾರ್ಯ ಸ್ವಾಮೀಜಿ, ಸಿದ್ದಲಿಂಗೇಶ್ವರ ವಿರಕ್ತಮಠ ಕೋಡಾಲ್ ಪಂಚಮ ಸಿದ್ದಲಿಂಗಸ್ವಾಮಿ, ಚೆನ್ನಬಸವ ಶಿವಾಚಾರ್ಯ ಸ್ವಾಮಿ ಕೆಂಭಾವಿ, ಯಾದಗಿರಿ ಭೀಮಾಸ್ವಾಮಿಶಿವಪಾರ್ವತಿ ಮಠದ ಶರಣರು ನಗನೂರ, ಶಹಾಪುರ ಫಕೀರೇಶ್ವರ ಮಠದ ಗುರುಪಾದ ಸ್ವಾಮಿ, ಯಾದಗಿರಿ ಸೊಪ್ಪಿ ಮಠದ ಚೆನ್ನವೀರಸ್ವಾಮಿ, ಗುರುಮಠಕಲ್ ಸಣ್ಣ ಮಠದ ವೈಜನಾಥ ಹಿರೇಮಠ, ಶರಣು ಗದ್ದಿಗಿ,ಶಹಾಪುರ ಸೂಗುರೇಶ್ವರ ಶಿವಾಚಾರ್ಯ ಹಿರೇಮಠ, ತಿಂಥಿಣಿ ಮೌನೇಶ್ವರ ದೇವಸ್ಥಾನದ ಗಂಗಾಧರ ಸ್ವಾಮಿ, ಯಾದಗಿರಿ ಶಂಕರಲಿಂಗೇಶ್ವರ ದೇವಸ್ಥಾನದ ತಾಯಪ್ಪ, ಮೈಲಾಪುರದ ಶರಣಪ್ಪ ಪೂಜಾರಿ, ಗಿರಿಮಲ್ಲಪ್ಪ ಪೂಜಾರಿ ಇನ್ನಿತರ ಮಠದ ಸ್ವಾಮೀಜಿಯವರು
ಮತ್ತು ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

***

ಜಿಲ್ಲೆಯಲ್ಲಿ ಇಲ್ಲಿಯವರೆಗೆ ಶೇ 65 ರಷ್ಟು ಮೊದಲ ಡೋಸ್ ಹಾಗೂ ಶೇಕಡಾ 30 ರಷ್ಟು 2 ನೇ ಡೋಸ್ ಪೂರ್ಣಗೊಂಡಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಸಾಧಿಸಬೇಕು

- ಡಾ.ರಾಗಪ್ರಿಯಾ ಆರ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT