<p><strong>ಹುಣಸಗಿ:</strong> ಸಮೀಪದ ದೇವತಕಲ್ಲ ಗ್ರಾಮದ ಹೊರವಲಯದಲ್ಲಿ ಮೊಸಳೆ ಮರಿಯೊಂದು ಬುಧವಾರ ಕಾಣಿಸಿಕೊಂಡಿತ್ತು. ಅದನ್ನು ಹಿಡಿದು ರಾತ್ರಿ ಸುರಕ್ಷಿತವಾಗಿ ಬಸವಸಾಗರ ಜಲಾಶಯದಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ದೇವತಕಲ್ಲ ಗ್ರಾದಮಲ್ಲಿ ಮೀನು ಮರಿ ಸಾಕಾಣಿಕೆ ಮಾಡಲಾಗುತ್ತಿದೆ. ಆದರೆ ಆ ಹೊಂಡದ ಪಕ್ಕದಲ್ಲಿರುವ ಹೊಂಡದಲ್ಲಿ ಮೊಸಳೆ ಕಂಡಿದೆ. ಅದನ್ನು ರೈತರು ನೋಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.</p>.<p>ಅರಣ್ಯ ಇಲಾಖೆಯ ಅಧಿಕಾರಿ ಎಚ್.ಬಿ ಬಿರಾದಾರ ಸ್ಥಳಕ್ಕೆ ಆಗಮಿಸಿ ನುರಿತ ಮೀನುಗಾರ ದೌಲತ್ ಅವರ ಸಹಾಯದಿಂದ ಮೊಸಳೆಯನ್ನು ರಕ್ಷಿಸಲಾಗಿದೆ. ಒಂದು ವರ್ಷದ ಮೊಸಳೆ ಎಂದು ಹೇಳಲಾಗಿದೆ.</p>.<p>ಅರಣ್ಯ ರಕ್ಷಕ ಸಿದ್ದಲಿಂಗಯ್ಯ, ಸೈಯದ್ ಪಟೇಲ್, ಶರಣಗೌಡ, ಹನುಮಂತ, ಶರಣು ಪ್ರಜ್ವಲ್ ಇತರರು ಇದ್ದರು.</p>
<p><strong>ಹುಣಸಗಿ:</strong> ಸಮೀಪದ ದೇವತಕಲ್ಲ ಗ್ರಾಮದ ಹೊರವಲಯದಲ್ಲಿ ಮೊಸಳೆ ಮರಿಯೊಂದು ಬುಧವಾರ ಕಾಣಿಸಿಕೊಂಡಿತ್ತು. ಅದನ್ನು ಹಿಡಿದು ರಾತ್ರಿ ಸುರಕ್ಷಿತವಾಗಿ ಬಸವಸಾಗರ ಜಲಾಶಯದಲ್ಲಿ ಬಿಡಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ದೇವತಕಲ್ಲ ಗ್ರಾದಮಲ್ಲಿ ಮೀನು ಮರಿ ಸಾಕಾಣಿಕೆ ಮಾಡಲಾಗುತ್ತಿದೆ. ಆದರೆ ಆ ಹೊಂಡದ ಪಕ್ಕದಲ್ಲಿರುವ ಹೊಂಡದಲ್ಲಿ ಮೊಸಳೆ ಕಂಡಿದೆ. ಅದನ್ನು ರೈತರು ನೋಡಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.</p>.<p>ಅರಣ್ಯ ಇಲಾಖೆಯ ಅಧಿಕಾರಿ ಎಚ್.ಬಿ ಬಿರಾದಾರ ಸ್ಥಳಕ್ಕೆ ಆಗಮಿಸಿ ನುರಿತ ಮೀನುಗಾರ ದೌಲತ್ ಅವರ ಸಹಾಯದಿಂದ ಮೊಸಳೆಯನ್ನು ರಕ್ಷಿಸಲಾಗಿದೆ. ಒಂದು ವರ್ಷದ ಮೊಸಳೆ ಎಂದು ಹೇಳಲಾಗಿದೆ.</p>.<p>ಅರಣ್ಯ ರಕ್ಷಕ ಸಿದ್ದಲಿಂಗಯ್ಯ, ಸೈಯದ್ ಪಟೇಲ್, ಶರಣಗೌಡ, ಹನುಮಂತ, ಶರಣು ಪ್ರಜ್ವಲ್ ಇತರರು ಇದ್ದರು.</p>