<p><strong>ಯಾದಗಿರಿ: </strong>ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಹೊರವಲಯದ 4 ಎಕರೆ ಜಮೀನಿನಲ್ಲಿ ತಂದೆಯ ಜೊತೆಗೂಡಿ ಯುವ ರೈತರೊಬ್ಬರು ಸಮ್ಮಿಶ್ರ ಬೆಳೆ ಬೆಳೆದಿದ್ದಾರೆ.</p>.<p>ತಂದೆ ಸೋಮಲಿಂಗಪ್ಪ ಗುಂಟನೂರು ಅವರಿಗೆ ಸೇರಿದ 4 ಎಕರೆ ಜಮೀನಿನಲ್ಲಿ ಮಗ ಶರಣಕುಮಾರ ಗುಂಟನೂರು 30 ಗುಂಟೆ ಈರುಳ್ಳಿ, 10 ಗುಂಟೆ ಬದನೆಕಾಯಿ, ಅರ್ಧ ಗುಂಟೆ ಟೊಮೆಟೊ, 2 ಎಕರೆಯಲ್ಲಿ ಬಿಳಿ ಜೋಳ ಬೆಳೆದು ಸಣ್ಣ ಹಿಡುವಳಿದಾರರಿಗೆ ಮಾದರಿಯಾಗಿದ್ದಾರೆ.</p>.<p class="Subhead"><strong>ಈರುಳ್ಳಿಯಲ್ಲಿ ನಷ್ಟ; ಬದನೆಯಲ್ಲಿ ಲಾಭ</strong></p>.<p class="Subhead">30 ಗುಂಟೆಯಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇದಕ್ಕಾಗಿ ಸುಮಾರು ₹10 ಸಾವಿರ ಖರ್ಚು ಮಾಡಲಾಗಿದೆ. ಆದರೆ, ಖರ್ಚು ಮಾಡಿದ್ದಕ್ಕಿಂತ ಕಡಿಮೆದರ ಸಿಗುತ್ತದೆ ಎನ್ನುವುದು ಯುವ ರೈತ ಶರಣಕುಮಾರ ಮಾತಾಗಿದೆ.</p>.<p>ಈಗಾಗಲೇ ಈರುಳ್ಳಿಗೆ ಬೆಲೆ ಕಡಿಮೆ ಇದ್ದು, ಕ್ವಿಂಟಲ್ಗೆ ₹1,000ರಿಂದ 1,200 ರವರೆಗೆ ಬೆಲೆ ಇದೆ. ಹೀಗಾಗಿ ಹಾಕಿದ್ದ ಬಂಡವಾಳವೂ ಈ ಬಾರಿ ಬರುವುದು ಅನುಮಾನವಾಗಿದೆ. ಇದೇ ಮೊದಲ ಬಾರಿಗೆ ಈರುಳ್ಳಿ ಹಾಕಿದ್ದು, ನಷ್ಟವಾದಂತೆ ಆಗಿದೆ ಎಂದು ಯುವ ರೈತ ಹೇಳುತ್ತಾರೆ.</p>.<p>ಈರುಳ್ಳಿ ಬೆಳೆ ನಷ್ಟವಾದರೂಬದನೆಕಾಯಿಗೆ ಉತ್ತಮ ಬೆಲೆ ಸಿಕ್ಕಿದೆ ಎನ್ನುತ್ತಾರೆ ಅವರು. ಬದನೆಕಾಯಿ ಬೆಳೆಗೆ ₹20,000 ಸಾವಿರ ಖರ್ಚು ಮಾಡಲಾಗಿದೆ. ಒಂದೂವರೆ ಪಟ್ಟು ಲಾಭ ಬಂದಿದೆ. ಸುಮಾರು ₹45 ಸಾವಿರ ಲಾಭ ಬಂದಿದೆ. ಇದು ನಮ್ಮ ಕೈ ಹಿಡಿದಿದೆ ಎನ್ನುತ್ತಾರೆ ಅವರು. ಮನೆ ಬಳಕೆಗಾಗಿ ಅರ್ಧ ಗುಂಟೆಯಲ್ಲಿ ಟೊಮೆಟೊ ಬೆಳೆಸಿದ್ದಾರೆ. ಈಗ ಅಂತಿಮ ಹಂತಕ್ಕೆ ಬಂದಿದೆ.</p>.<p>8 ವರ್ಷದಿಂದ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದರೂ ಸರ್ಕಾರದ ಸೌಲಭ್ಯದಿಂದ ದೂರವೇ ಉಳಿದಿದ್ದಾರೆ. ಸರ್ಕಾರವೂ ಇವರಿಗೆ ಯಾವುದೇ ಸಬ್ಸಿಡಿ ಕೊಟ್ಟಿಲ್ಲ. ನಮಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ ಎನ್ನುತ್ತಾರೆ ಶರಣಕುಮಾರ.</p>.<p class="Subhead"><strong>ಜಮೀನಿನಲ್ಲಿ ಮನೆ ನಿರ್ಮಾಣ</strong></p>.<p class="Subhead">ಶರಣಕುಮಾರ ಕುಟುಂಬದವರು ಸದ್ಯ ಜಮೀನಿನಲ್ಲಿಯೇ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಟ್ಟಡ ಕಾಮಗಾರಿ ಅರ್ಧವಾಗಿದ್ದು, ಅಲ್ಲಿಯೇ ಕುಟುಂಬಸ್ಥರು ಜೀವನ ಸಾಗಿಸುತ್ತಿದ್ದಾರೆ. ರಾತ್ರಿಯಲ್ಲಿ ಸೋಲಾರ್ ವಿದ್ಯುತ್ ಮೂಲಕ ದೀಪ, ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ.</p>.<p class="Subhead"><strong>ಕೊಳವೆ ಬಾವಿ ಮೂಲಕ ನೀರು</strong></p>.<p class="Subhead">ತೋಟಗಾರಿಕೆ ಬೆಳೆಗೆ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಳೆಯನ್ನೇಆಶ್ರಯಿಸಿ ಬೆಳೆಯುವುದಿಲ್ಲ. ಈರುಳ್ಳಿಯನ್ನು ಕೊಯ್ಲು ಮಾಡಲಾಗಿದೆ. ಮುಂದೆ ಯಾವ ಬೆಳೆ ಸೂಕ್ತ ಎನ್ನುವುದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಶರಣಕುಮಾರ ತಿಳಿಸುತ್ತಾರೆ.</p>.<p>‘ರೈತರು ಯಾವ ಬೆಳೆಗೆ ರೋಗ ಬರುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಅದರ ನಿಯಂತ್ರಣ ಮಾಡಲು ಸುಲಭ. ಅನುಭವವೇ ನಮಗೆ ಪಾಠ ಕಲಿಸಿಕೊಡುತ್ತದೆ. ಈ ಮೂಲಕ ಕೃಷಿ ಚಟುವಟಿಕೆಯಲ್ಲಿ ಯಶಸ್ಸು ಸಾಧ್ಯ ಎಂದು’ ಯುವ ರೈತರು ಹೇಳುವ ಮಾತಾಗಿದೆ.</p>.<p>***</p>.<p>ಇದ್ದ ಜಮೀನಿನಲ್ಲೇ ವಿವಿಧ ಬೆಳೆ ಬೆಳೆದಿದ್ದರಿಂದ ಒಂದು ನಷ್ಟವಾದರೂ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಹೀಗಾಗಿ ರೈತರುಎರಡ್ಮೂರು ಬೆಳೆ ಬೆಳೆಯಬೇಕು<br /><strong>ಶರಣಕುಮಾರ ಗುಂಟನೂರು, ಯುವ ರೈತ</strong></p>.<p>***</p>.<p>ಶರಣಕುಮಾರ ನಾನು ಇಬ್ಬರು ಜೊತೆಗೂಡಿ ತೋಟಗಾರಿಕೆ ಮಾಡುತ್ತಿದ್ದೇವೆ. ಈರುಳ್ಳಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಇಲ್ಲದಿದ್ದರಿಂದ ಈ ಬಾರಿ ನಷ್ಟಕ್ಕೊಳಗಾಗಿದ್ದೇವೆ<br /><strong>ಸುನಿಲ್ ಗೋಪಾಲ ರಾಠೋಡ, ರೈತ ದೋರಹಳ್ಳಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಹೊರವಲಯದ 4 ಎಕರೆ ಜಮೀನಿನಲ್ಲಿ ತಂದೆಯ ಜೊತೆಗೂಡಿ ಯುವ ರೈತರೊಬ್ಬರು ಸಮ್ಮಿಶ್ರ ಬೆಳೆ ಬೆಳೆದಿದ್ದಾರೆ.</p>.<p>ತಂದೆ ಸೋಮಲಿಂಗಪ್ಪ ಗುಂಟನೂರು ಅವರಿಗೆ ಸೇರಿದ 4 ಎಕರೆ ಜಮೀನಿನಲ್ಲಿ ಮಗ ಶರಣಕುಮಾರ ಗುಂಟನೂರು 30 ಗುಂಟೆ ಈರುಳ್ಳಿ, 10 ಗುಂಟೆ ಬದನೆಕಾಯಿ, ಅರ್ಧ ಗುಂಟೆ ಟೊಮೆಟೊ, 2 ಎಕರೆಯಲ್ಲಿ ಬಿಳಿ ಜೋಳ ಬೆಳೆದು ಸಣ್ಣ ಹಿಡುವಳಿದಾರರಿಗೆ ಮಾದರಿಯಾಗಿದ್ದಾರೆ.</p>.<p class="Subhead"><strong>ಈರುಳ್ಳಿಯಲ್ಲಿ ನಷ್ಟ; ಬದನೆಯಲ್ಲಿ ಲಾಭ</strong></p>.<p class="Subhead">30 ಗುಂಟೆಯಲ್ಲಿ ಈರುಳ್ಳಿ ಬೆಳೆಯಲಾಗಿದೆ. ಇದಕ್ಕಾಗಿ ಸುಮಾರು ₹10 ಸಾವಿರ ಖರ್ಚು ಮಾಡಲಾಗಿದೆ. ಆದರೆ, ಖರ್ಚು ಮಾಡಿದ್ದಕ್ಕಿಂತ ಕಡಿಮೆದರ ಸಿಗುತ್ತದೆ ಎನ್ನುವುದು ಯುವ ರೈತ ಶರಣಕುಮಾರ ಮಾತಾಗಿದೆ.</p>.<p>ಈಗಾಗಲೇ ಈರುಳ್ಳಿಗೆ ಬೆಲೆ ಕಡಿಮೆ ಇದ್ದು, ಕ್ವಿಂಟಲ್ಗೆ ₹1,000ರಿಂದ 1,200 ರವರೆಗೆ ಬೆಲೆ ಇದೆ. ಹೀಗಾಗಿ ಹಾಕಿದ್ದ ಬಂಡವಾಳವೂ ಈ ಬಾರಿ ಬರುವುದು ಅನುಮಾನವಾಗಿದೆ. ಇದೇ ಮೊದಲ ಬಾರಿಗೆ ಈರುಳ್ಳಿ ಹಾಕಿದ್ದು, ನಷ್ಟವಾದಂತೆ ಆಗಿದೆ ಎಂದು ಯುವ ರೈತ ಹೇಳುತ್ತಾರೆ.</p>.<p>ಈರುಳ್ಳಿ ಬೆಳೆ ನಷ್ಟವಾದರೂಬದನೆಕಾಯಿಗೆ ಉತ್ತಮ ಬೆಲೆ ಸಿಕ್ಕಿದೆ ಎನ್ನುತ್ತಾರೆ ಅವರು. ಬದನೆಕಾಯಿ ಬೆಳೆಗೆ ₹20,000 ಸಾವಿರ ಖರ್ಚು ಮಾಡಲಾಗಿದೆ. ಒಂದೂವರೆ ಪಟ್ಟು ಲಾಭ ಬಂದಿದೆ. ಸುಮಾರು ₹45 ಸಾವಿರ ಲಾಭ ಬಂದಿದೆ. ಇದು ನಮ್ಮ ಕೈ ಹಿಡಿದಿದೆ ಎನ್ನುತ್ತಾರೆ ಅವರು. ಮನೆ ಬಳಕೆಗಾಗಿ ಅರ್ಧ ಗುಂಟೆಯಲ್ಲಿ ಟೊಮೆಟೊ ಬೆಳೆಸಿದ್ದಾರೆ. ಈಗ ಅಂತಿಮ ಹಂತಕ್ಕೆ ಬಂದಿದೆ.</p>.<p>8 ವರ್ಷದಿಂದ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದರೂ ಸರ್ಕಾರದ ಸೌಲಭ್ಯದಿಂದ ದೂರವೇ ಉಳಿದಿದ್ದಾರೆ. ಸರ್ಕಾರವೂ ಇವರಿಗೆ ಯಾವುದೇ ಸಬ್ಸಿಡಿ ಕೊಟ್ಟಿಲ್ಲ. ನಮಗೆ ಇದರ ಬಗ್ಗೆ ತಿಳಿವಳಿಕೆ ಇಲ್ಲ ಎನ್ನುತ್ತಾರೆ ಶರಣಕುಮಾರ.</p>.<p class="Subhead"><strong>ಜಮೀನಿನಲ್ಲಿ ಮನೆ ನಿರ್ಮಾಣ</strong></p>.<p class="Subhead">ಶರಣಕುಮಾರ ಕುಟುಂಬದವರು ಸದ್ಯ ಜಮೀನಿನಲ್ಲಿಯೇ ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಟ್ಟಡ ಕಾಮಗಾರಿ ಅರ್ಧವಾಗಿದ್ದು, ಅಲ್ಲಿಯೇ ಕುಟುಂಬಸ್ಥರು ಜೀವನ ಸಾಗಿಸುತ್ತಿದ್ದಾರೆ. ರಾತ್ರಿಯಲ್ಲಿ ಸೋಲಾರ್ ವಿದ್ಯುತ್ ಮೂಲಕ ದೀಪ, ಮೊಬೈಲ್ ಚಾರ್ಜ್ ಮಾಡಿಕೊಳ್ಳುತ್ತಿದ್ದಾರೆ.</p>.<p class="Subhead"><strong>ಕೊಳವೆ ಬಾವಿ ಮೂಲಕ ನೀರು</strong></p>.<p class="Subhead">ತೋಟಗಾರಿಕೆ ಬೆಳೆಗೆ ಕೊಳವೆಬಾವಿ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಮಳೆಯನ್ನೇಆಶ್ರಯಿಸಿ ಬೆಳೆಯುವುದಿಲ್ಲ. ಈರುಳ್ಳಿಯನ್ನು ಕೊಯ್ಲು ಮಾಡಲಾಗಿದೆ. ಮುಂದೆ ಯಾವ ಬೆಳೆ ಸೂಕ್ತ ಎನ್ನುವುದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಶರಣಕುಮಾರ ತಿಳಿಸುತ್ತಾರೆ.</p>.<p>‘ರೈತರು ಯಾವ ಬೆಳೆಗೆ ರೋಗ ಬರುತ್ತದೆ ಎನ್ನುವುದನ್ನು ತಿಳಿದುಕೊಂಡರೆ ಅದರ ನಿಯಂತ್ರಣ ಮಾಡಲು ಸುಲಭ. ಅನುಭವವೇ ನಮಗೆ ಪಾಠ ಕಲಿಸಿಕೊಡುತ್ತದೆ. ಈ ಮೂಲಕ ಕೃಷಿ ಚಟುವಟಿಕೆಯಲ್ಲಿ ಯಶಸ್ಸು ಸಾಧ್ಯ ಎಂದು’ ಯುವ ರೈತರು ಹೇಳುವ ಮಾತಾಗಿದೆ.</p>.<p>***</p>.<p>ಇದ್ದ ಜಮೀನಿನಲ್ಲೇ ವಿವಿಧ ಬೆಳೆ ಬೆಳೆದಿದ್ದರಿಂದ ಒಂದು ನಷ್ಟವಾದರೂ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಹೀಗಾಗಿ ರೈತರುಎರಡ್ಮೂರು ಬೆಳೆ ಬೆಳೆಯಬೇಕು<br /><strong>ಶರಣಕುಮಾರ ಗುಂಟನೂರು, ಯುವ ರೈತ</strong></p>.<p>***</p>.<p>ಶರಣಕುಮಾರ ನಾನು ಇಬ್ಬರು ಜೊತೆಗೂಡಿ ತೋಟಗಾರಿಕೆ ಮಾಡುತ್ತಿದ್ದೇವೆ. ಈರುಳ್ಳಿಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಇಲ್ಲದಿದ್ದರಿಂದ ಈ ಬಾರಿ ನಷ್ಟಕ್ಕೊಳಗಾಗಿದ್ದೇವೆ<br /><strong>ಸುನಿಲ್ ಗೋಪಾಲ ರಾಠೋಡ, ರೈತ ದೋರಹಳ್ಳಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>