‘ಕಳೆದ ವರ್ಷದಿಂದ ಮಳೆ ಪ್ರಮಾಣ ಹೆಚ್ಚಿದ್ದರಿಂದ ಭೂಮಿಯ ತೇವಾಂಶವೂ ಹೆಚ್ಚುತ್ತಿದೆ. ಇಲ್ಲಿಗೆ ಮಳೆ ನಿಂತರೆ ಉಳಿದ ಬೆಳೆಯಾದರೂ ಕೈಸೇರುತ್ತದೆ. ಇಲ್ಲವಾದರೆ ಮುಂಗಾರು ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಬೇಕಾದೀತು. ಉದ್ದು ಮತ್ತು ಹೆಸರು ಬೆಳೆಗಳು ಕೋಯ್ಲಿಗೆ ಬಂದಾಗ ಮಳೆ ಸುರಿದು ಸಮಸ್ಯೆಯಾಗಿದೆ. ಉದ್ದಿನ ಕಾಳು ಬಿಳಿ ಬಣ್ಣಕ್ಕೆ ತಿರುಗಿ ಬೆಲೆಯಿಲ್ಲದಂತಾಗಿದೆ. ಹೆಸರು ಕಾಳಿನದ್ದೂ ಅದೇ ಕಥೆ. ಈಗ ತೊಗರಿಯೂ ಸಾಯುವ ಲಕ್ಷಣಗಳು ಕಾಣುತ್ತಿವೆ. ನಮ್ಮ ಹಣೆ ಬರಹ ಸರಿಯಿಲ್ಲ’ ಎಂದು ರೈತರಾದ ಹಣಮಂತು, ಯಲ್ಲಪ್ಪ, ಪ್ರಸಾದ ಅಲವತ್ತುಕೊಂಡರು.