<p><strong>ಕಕ್ಕೇರಾ:</strong> ಪಟ್ಟಣ ಸೇರಿದಂತೆ ವಲಯದ ತಿಂಥಣಿ, ದೇವಾಪುರ, ದೇವತ್ಕಲ್, ಆಲ್ದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಲ್ಲಿ ಕಳೆದ ವಾರ ಬಿತ್ತಿದ್ದ ಸಜ್ಜೆ, ಶೇಂಗಾ, ಹತ್ತಿ, ಸಜ್ಜೆ ಬೆಳೆಗಳು ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋದರೆ, ಹಲವು ಕಡೆಗಳಲ್ಲಿ ನೆಲಕ್ಕಚ್ಚಿವೆ.</p>.<p>ಬುಧವಾರ ಮಧ್ಯರಾತ್ರಿಯಿಂದ ಮತ್ತು ಗುರುವಾರ ಬೆಳಗಿನ ಜಾವದವರೆಗೆ 95.4 ಎಂಎಂ ಸುರಿದ ಭಾರೀ ಮಳೆಗೆ ಬೆಳೆಗಳ ಸಮೇತ ಜಮೀನುಗಳ ಬದುಗಳು, ಮನೆಗಳು ಬಿದ್ದು ಹೋಗಿವೆ. ಅಪಾರ ಹಾನಿಯಾಗಿದೆ. ಪೀರಗಾರದೊಡ್ಡಿ, ನಿಂಗಾಪುರ, ಮಂಜಲಾಪುರ, ರಾಯಗೇರಾ, ಜಮೀನುಗಳಲ್ಲಿನ ಒಡ್ಡು(ಬದು)ಗಳಲ್ಲಿ ನೀರು ನಿಂತಿದೆ.</p>.<p>ಸಮೀಪದ ಹುಣಸಿಹೊಳೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ಮತ್ತು ಗ್ರಾಮದ ಚರಂಡಿಯ ನೀರು ಶಾಲಾ ಆವರಣದೊಳಗೆ ನುಗ್ಗಿದ್ದರಿಂದ ಶಾಲಾ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ಪಟ್ಟಣದಿಂದ ಶಾಂತಪುರ ಕ್ರಾಸ್ ಮಾರ್ಗದ ಹಾಳಾದ ರಸ್ತೆಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ.</p>.<p>ನಿಂಗಾಪುರದಲ್ಲಿ 3 ಮನೆಗಳು ಧರೆಗೆ ಉರುಳಿದ್ದು, ಹುಣಸಿಹೊಳೆ ಗ್ರಾಮದಲ್ಲಿ 2 ಮನೆಗಳು ಬಿದ್ದು, 3 ಮನೆಗಳ ಗೋಡೆಗಳ ಮೇಲ್ಛಾವಣಿ ನೆಲಕ್ಕೆ ಅಪ್ಪಳಿಸಿವೆ.</p>.<p>ಹುಣಸಿಹೊಳೆ ಕಣ್ವ ಮಠ ಸಮೀಪದ ನಮ್ಮ ಜಮೀನುಗಳಲ್ಲಿ ಭತ್ತದ ಗದ್ದೆಯ ಜಮೀನುಗಳ ಬದುವು 4 ಎಕರೆ ಸಂಪೂರ್ಣ ಕಿತ್ತುಹೋಗಿದೆ ಎಂದು ರೈತ ನಿಂಗಪ್ಪ ಕಾಂಬಳೆ ತಿಳಿಸಿದರು.</p>.<p>ಸಮೀಪದ ಪೀರಗಾರದೊಡ್ಡಿ ಹಳ್ಳವು ತುಂಬಿ ಹರಿಯುತ್ತಿದೆ.</p>.<p>ಪಟ್ಟಣ ಸೇರಿದಂತೆ ವಿವಿಧ ಕಡೆ 95.4 ಎಂಎಂ ಮಳೆಯಾಗಿದ್ದು, ರೈತರ ಬೆಳೆಹಾನಿ ಹಾಗೂ ಮನೆಹಾನಿಯಾಗಿದ್ದು, ಸಮೀಕ್ಷೆ ಕಾರ್ಯ ಮುಗಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಗ್ರಾಮಲೆಕ್ಕಾಧಿಕಾರಿ ಸಂತೋಷ ರೆಡ್ಡಿ ತಿಳಿಸಿದರು.</p>.<p>ಹೊಲದಲ್ಲಿನ ಬೆಳೆ ಹಾಳಾಗಿದೆ. ಹೊಲದ ಬದುವು ಕಿತ್ತುಕೊಂಡು ಹೋಗಿದೆ. ಸರ್ಕಾರ ಪರಿಹಾರ ನೀಡಲಿ ಎಂದು ಹುಣಸಿಹೊಳೆ ರೈತ ಗಂಗಣ್ಣ ಕಾಂಬಳೆ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ:</strong> ಪಟ್ಟಣ ಸೇರಿದಂತೆ ವಲಯದ ತಿಂಥಣಿ, ದೇವಾಪುರ, ದೇವತ್ಕಲ್, ಆಲ್ದಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಮೀನುಗಳಲ್ಲಿ ಕಳೆದ ವಾರ ಬಿತ್ತಿದ್ದ ಸಜ್ಜೆ, ಶೇಂಗಾ, ಹತ್ತಿ, ಸಜ್ಜೆ ಬೆಳೆಗಳು ಮಳೆಯ ರಭಸಕ್ಕೆ ಕೊಚ್ಚಿಕೊಂಡು ಹೋದರೆ, ಹಲವು ಕಡೆಗಳಲ್ಲಿ ನೆಲಕ್ಕಚ್ಚಿವೆ.</p>.<p>ಬುಧವಾರ ಮಧ್ಯರಾತ್ರಿಯಿಂದ ಮತ್ತು ಗುರುವಾರ ಬೆಳಗಿನ ಜಾವದವರೆಗೆ 95.4 ಎಂಎಂ ಸುರಿದ ಭಾರೀ ಮಳೆಗೆ ಬೆಳೆಗಳ ಸಮೇತ ಜಮೀನುಗಳ ಬದುಗಳು, ಮನೆಗಳು ಬಿದ್ದು ಹೋಗಿವೆ. ಅಪಾರ ಹಾನಿಯಾಗಿದೆ. ಪೀರಗಾರದೊಡ್ಡಿ, ನಿಂಗಾಪುರ, ಮಂಜಲಾಪುರ, ರಾಯಗೇರಾ, ಜಮೀನುಗಳಲ್ಲಿನ ಒಡ್ಡು(ಬದು)ಗಳಲ್ಲಿ ನೀರು ನಿಂತಿದೆ.</p>.<p>ಸಮೀಪದ ಹುಣಸಿಹೊಳೆಯ ಸರ್ಕಾರಿ ಪ್ರಾಥಮಿಕ ಶಾಲೆಗೆ ಮಳೆ ನೀರು ಮತ್ತು ಗ್ರಾಮದ ಚರಂಡಿಯ ನೀರು ಶಾಲಾ ಆವರಣದೊಳಗೆ ನುಗ್ಗಿದ್ದರಿಂದ ಶಾಲಾ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ಪಟ್ಟಣದಿಂದ ಶಾಂತಪುರ ಕ್ರಾಸ್ ಮಾರ್ಗದ ಹಾಳಾದ ರಸ್ತೆಗುಂಡಿಗಳಲ್ಲಿ ಮಳೆ ನೀರು ಸಂಗ್ರಹವಾಗಿದೆ.</p>.<p>ನಿಂಗಾಪುರದಲ್ಲಿ 3 ಮನೆಗಳು ಧರೆಗೆ ಉರುಳಿದ್ದು, ಹುಣಸಿಹೊಳೆ ಗ್ರಾಮದಲ್ಲಿ 2 ಮನೆಗಳು ಬಿದ್ದು, 3 ಮನೆಗಳ ಗೋಡೆಗಳ ಮೇಲ್ಛಾವಣಿ ನೆಲಕ್ಕೆ ಅಪ್ಪಳಿಸಿವೆ.</p>.<p>ಹುಣಸಿಹೊಳೆ ಕಣ್ವ ಮಠ ಸಮೀಪದ ನಮ್ಮ ಜಮೀನುಗಳಲ್ಲಿ ಭತ್ತದ ಗದ್ದೆಯ ಜಮೀನುಗಳ ಬದುವು 4 ಎಕರೆ ಸಂಪೂರ್ಣ ಕಿತ್ತುಹೋಗಿದೆ ಎಂದು ರೈತ ನಿಂಗಪ್ಪ ಕಾಂಬಳೆ ತಿಳಿಸಿದರು.</p>.<p>ಸಮೀಪದ ಪೀರಗಾರದೊಡ್ಡಿ ಹಳ್ಳವು ತುಂಬಿ ಹರಿಯುತ್ತಿದೆ.</p>.<p>ಪಟ್ಟಣ ಸೇರಿದಂತೆ ವಿವಿಧ ಕಡೆ 95.4 ಎಂಎಂ ಮಳೆಯಾಗಿದ್ದು, ರೈತರ ಬೆಳೆಹಾನಿ ಹಾಗೂ ಮನೆಹಾನಿಯಾಗಿದ್ದು, ಸಮೀಕ್ಷೆ ಕಾರ್ಯ ಮುಗಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಗ್ರಾಮಲೆಕ್ಕಾಧಿಕಾರಿ ಸಂತೋಷ ರೆಡ್ಡಿ ತಿಳಿಸಿದರು.</p>.<p>ಹೊಲದಲ್ಲಿನ ಬೆಳೆ ಹಾಳಾಗಿದೆ. ಹೊಲದ ಬದುವು ಕಿತ್ತುಕೊಂಡು ಹೋಗಿದೆ. ಸರ್ಕಾರ ಪರಿಹಾರ ನೀಡಲಿ ಎಂದು ಹುಣಸಿಹೊಳೆ ರೈತ ಗಂಗಣ್ಣ ಕಾಂಬಳೆ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>