ಹಾಲು, ತರಕಾರಿ, ಅಗತ್ಯ ಸೇವೆ ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಬಸ್ ಸಂಚಾರ ಸ್ಥಗಿತಗೊಂಡಿತ್ತು.ನಗರದ ಪ್ರಮುಖ ರಸ್ತೆಗಳಲ್ಲಿ ಅಂತರ ಮರೆತು, ಮಾಸ್ಕ್ ಧರಿಸದೆ ಅನಾವಶ್ಯಕವಾಗಿ ಸಾರ್ವಜನಿಕರು ಓಡಾಟ ನಡೆಸಿದ್ದರು. ಸುಭಾಷ್, ಶಾಸ್ತ್ರಿ ವೃತ್ತ, ಹೈದರಾಬಾದ್ ರಸ್ತೆ ಸೇರಿದಂತೆ ವಿವಿಧೆಡೆ ಹಣ್ಣಿನ ವ್ಯಾಪಾರ ನಡೆಯಿತು. ಸಂಜೆ ವೇಳೆಗೆ ಆಟೊಗಳು ಎಲ್ಲ ಕಡೆ ಓಡಾಟ ನಡೆಸಿದವು.