<p><strong>ಶಹಾಪುರ:</strong> ‘ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಮೊಗಳ್ಳಿ ಗಣೇಶ ಕೂಡ ಒಬ್ಬರು. ಕಥಾ ಲೋಕಕ್ಕೆ ಹೊಸ ದಾರಿ ತೆರೆದವರು. ಅವರ ನಿರೂಪಣೆಯ ಶೈಲಿಯು ಅದ್ಭುತವಾಗಿತ್ತು’ ಎಂದು ಸಾಹಿತಿ ದೇವು ಪತ್ತಾರ ತಿಳಿಸಿದರು.</p>.<p>ನಗರದ ಕಸಾಪ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೊಗಳ್ಳಿ ಗಣೇಶ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಾಹಿತಿ ದೇವನೂರು ಮಹದೇವ ಅವರನ್ನು ಬಿಟ್ಟರೆ ದಲಿತ ಬದುಕಿನ ಸಂಕಟದ ಅನುಭವ ಲೋಕವನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಕಲಾತ್ಮಕವಾಗಿ ತಮ್ಮ ಕಥೆಗಳಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ’ ಎಂದರು.</p>.<p>‘ತಕರಾರಿನಿಂದ ಆರಂಭವಾದ ಅವರ ವಿಮರ್ಶಾಪ್ರಜ್ಞೆ ಅಂದಿನ ಕಾಲದಲ್ಲಿ ಜಡಗೊಂಡಂತಿದ್ದ ಕನ್ನಡ ವಿಮರ್ಶೆಗೆ ಶಾಕ್ ನೀಡಿತ್ತು. ಮೊಗಳ್ಳಿ ಅವರ ನಿರ್ಗಮನ ನಿಜವಾಗಿಯೂ ಕನ್ನಡ ಭಾಷೆ, ಸಂಸ್ಕೃತಿಗೆ ದೊಡ್ಡ ನಷ್ಟ’ ಎಂದರು.</p>.<p>ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಮಾತನಾಡಿದರು.</p>.<p>ಉಪನ್ಯಾಸಕಿ ನಿರ್ಮಲಾ ತುಂಬುಗಿ, ಅಂಬ್ಲಯ್ಯ ಸೈದಾಪೂರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಬಸವರಾಜ ಹಿರೇಮಠ, ಶರಣಬಸವ ಪೊಲೀಸ್ ಬಿರಾದಾರ, ಸುರೇಶ ಅರುಣಿ, ಶಂಕರ ಹುಲಕಲ್, ದೇವಿಂದ್ರಪ್ಪ ವಿಶ್ವಕರ್ಮ, ಸಾಯಬಣ್ಣ ಪುರ್ಲೆ, ಭೀಮಪ್ಪ ಭಂಡಾರಿ, ರಾಘವೇಂದ್ರ ಹಾರಣಗೇರಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ:</strong> ‘ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಮೊಗಳ್ಳಿ ಗಣೇಶ ಕೂಡ ಒಬ್ಬರು. ಕಥಾ ಲೋಕಕ್ಕೆ ಹೊಸ ದಾರಿ ತೆರೆದವರು. ಅವರ ನಿರೂಪಣೆಯ ಶೈಲಿಯು ಅದ್ಭುತವಾಗಿತ್ತು’ ಎಂದು ಸಾಹಿತಿ ದೇವು ಪತ್ತಾರ ತಿಳಿಸಿದರು.</p>.<p>ನಗರದ ಕಸಾಪ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮೊಗಳ್ಳಿ ಗಣೇಶ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಾಹಿತಿ ದೇವನೂರು ಮಹದೇವ ಅವರನ್ನು ಬಿಟ್ಟರೆ ದಲಿತ ಬದುಕಿನ ಸಂಕಟದ ಅನುಭವ ಲೋಕವನ್ನು ಅತ್ಯಂತ ಸೂಕ್ಷ್ಮವಾಗಿ ಹಾಗೂ ಕಲಾತ್ಮಕವಾಗಿ ತಮ್ಮ ಕಥೆಗಳಲ್ಲಿ ಅಭಿವ್ಯಕ್ತ ಪಡಿಸಿದ್ದಾರೆ’ ಎಂದರು.</p>.<p>‘ತಕರಾರಿನಿಂದ ಆರಂಭವಾದ ಅವರ ವಿಮರ್ಶಾಪ್ರಜ್ಞೆ ಅಂದಿನ ಕಾಲದಲ್ಲಿ ಜಡಗೊಂಡಂತಿದ್ದ ಕನ್ನಡ ವಿಮರ್ಶೆಗೆ ಶಾಕ್ ನೀಡಿತ್ತು. ಮೊಗಳ್ಳಿ ಅವರ ನಿರ್ಗಮನ ನಿಜವಾಗಿಯೂ ಕನ್ನಡ ಭಾಷೆ, ಸಂಸ್ಕೃತಿಗೆ ದೊಡ್ಡ ನಷ್ಟ’ ಎಂದರು.</p>.<p>ಹಿರಿಯ ಸಾಹಿತಿ ಸಿದ್ಧರಾಮ ಹೊನ್ಕಲ್ ಮಾತನಾಡಿದರು.</p>.<p>ಉಪನ್ಯಾಸಕಿ ನಿರ್ಮಲಾ ತುಂಬುಗಿ, ಅಂಬ್ಲಯ್ಯ ಸೈದಾಪೂರ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಬಸವರಾಜ ಹಿರೇಮಠ, ಶರಣಬಸವ ಪೊಲೀಸ್ ಬಿರಾದಾರ, ಸುರೇಶ ಅರುಣಿ, ಶಂಕರ ಹುಲಕಲ್, ದೇವಿಂದ್ರಪ್ಪ ವಿಶ್ವಕರ್ಮ, ಸಾಯಬಣ್ಣ ಪುರ್ಲೆ, ಭೀಮಪ್ಪ ಭಂಡಾರಿ, ರಾಘವೇಂದ್ರ ಹಾರಣಗೇರಾ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>