<p><strong>ಕೆಂಭಾವಿ:</strong> ‘ವೈಭವದ ಇತಿಹಾಸ ಹೊಂದಿರುವ, ಶರಣರ ಬೀಡು, ಭೋಗಣ್ಣನ ಜನ್ಮಭೂಮಿ ಕೆಂಭಾವಿಯಲ್ಲಿ ಭಾವೈಕ್ಯತೆಯ ದಸರಾ ಆಚರಣೆ ಮಾಡುತ್ತಿರುವ ಯುವಕರ ಕಾರ್ಯ ಪ್ರೇರಣಾದಾಯಕ’ ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಸುರೇಶ ಸಜ್ಜನ ಹೇಳಿದರು.</p>.<p>ಪಟ್ಟಣದ ಪುರಸಭೆ ಆವರಣದಲ್ಲಿ ದಸರಾ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ 5ನೇ ವರ್ಷದ ದಸರಾ ಉತ್ಸವ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬೆಂಭಾವಿ ಪಟ್ಟಣ ಅಣ್ಣ ಭೋಗಣ್ಣ, ಹಜರತ್ ಚಚ್ಚಾ ಮಾಸಾಬಿ, ರೇವಣಸಿದ್ದೇಶ್ವರ, ಬಜಾರ ಬಲಭೀಮಸೇನ ದೇವರು ಸೇರಿದಂತೆ ಹಲವು ಪುರಾತನ ದೇವಸ್ಥಾನಗಳು ಹಾಗೂ ವಿಶಿಷ್ಟ ಇತಿಹಾಸ ಹೆಸರುವಾಸಿಯಾಗಿದೆ ಎಂದರು.</p>.<p>ಸಾಹಿತಿ ಲಿಂಗನಗೌಡ ಮಾಲಿಪಾಟೀಲ ಮಾತನಾಡಿ, ‘ನವರಾತ್ರಿ ಮತ್ತು ಮಹಾನವಮಿ ಹಬ್ಬಗಳು ದೇಶದ ಹೆಮ್ಮೆಯ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದು. ಈ ಹಬ್ಬಕ್ಕೆ ಜಾತಿ, ಧರ್ಮ ಮತ್ತು ಲಿಂಗಭೇದಗಳಿಲ್ಲದೆ ಎಲ್ಲರೂ ಸಮಾನವಾಗಿ ಆಚರಣೆ ಮಾಡುವ ಮತ್ತು ಜಾತಿ-ಧರ್ಮಗಳ ಬಗ್ಗೆ ಭಾವೈಕ್ಯತೆ ಬೆಸೆಯುವ ಒಂದು ಹೃದಯವಂತಿಕೆಯ ಹಬ್ಬ ಇದಾಗಿದೆ’ ಎಂದರು.</p>.<p>ಉತ್ಸವ ಸಮಿತಿಯಿಂದ ವರ್ಷದ ವಿಶೇಷ ವ್ಯಕ್ತಿ, ಆದರ್ಶ ಶಿಕ್ಷಕ ರತ್ನ, ಉತ್ತಮ ಕೃಷಿಕ, ಸೇವಾ ಸರ್ವೋತ್ತಮ, ಕಲಾರತ್ನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಮುಗಿಸಿ ಬಂದ ಪಟ್ಟಣದ ಸಯ್ಯದ್ ಜಿಲಾನಿ ಹಳಿಸಗರ ಅವರನ್ನು ವಿಶೇಷ ಸನ್ಮಾನಿಸಲಾಯಿತು.</p>.<p>ಸಂಗೀತ ಶಿಕ್ಷಕ ಯಮುನೇಶ ಯಾಳಗಿ ನೇತೃತ್ವದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಪೂಜಾ ಕುಣಿತದ ಜಾನಪದ ನೃತ್ಯ ಗಮನ ಸೆಳೆಯಿತು.</p>.<p>ಸಮಿತಿ ಸದಸ್ಯ ಡಿ.ಸಿ. ಪಾಟೀಲ ಮಾತನಾಡಿದರು. ಹಿರೇಮಠದ ಚೆನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ನಾಡದೇವಿಗೆ ಪುಷ್ಪಾರ್ಚನೆ ಮಾಡಿದರು. ಸಮಿತಿ ಅಧ್ಯಕ್ಷ ಮುದಿಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು.</p>.<p>ಮುಖಂಡ ಅಪ್ಪುಗೌಡ ಪಾಟೀಲ ಯಾಳಗಿ, ಪುರಸಭೆ ಅಧ್ಯಕ್ಷ ರಹೆಮಾನ ಪಟೇಲ ಯಲಗೋಡ, ಉಪಾದ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ವಾಮನರಾವ ದೇಶಪಾಂಡೆ, ಬಾಪುಗೌಡ ಪಾಟೀಲ, ಅಬ್ದುಲ್ ರಜಾಕ್ ನಾಲತವಾಡ, ನೀಲಕಂಠಾರಾಯಗೌಡ ಪಾಟೀಲ, ಮಂಜುನಾಥ ಗುತ್ತೇದಾರ, ಮೋಹನರೆಡ್ಡಿ ಡಿಗ್ಗಾವಿ, ತೋಟಪ್ಪ ಸಾಹು, ರಾಮನಗೌಡ ಪತ್ತೇಪುರ ಇದ್ದರು.</p>.<p>ಬಂದೇನವಾಜ ನಾಲತವಾಡ ನಿರೂಪಣೆ ಮಾಡಿದರು, ಸೂಗೂರಯ್ಯ ಇಂಡಿ ಸ್ವಾಗತಿಸಿದರು, ಸಮಿತಿ ಅಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ ವಂದಿಸಿದರು.</p>.<p><strong>ಸಾಧಕರಿಗೆ ಪ್ರಶಸ್ತಿ</strong> </p><p>ಪ್ರಧಾನ ಸಂಗಣ್ಣ ಸಿದ್ರಾಮಪ್ಪ ತುಂಬಗಿ (ಸಮಾಜಸೇವೆ) ರಾಜಹ್ಮದ ಬಡಿಗೇರ ನಾಗರತ್ನಾ ಕುಲಕರ್ಣಿ ರಮಾಬಾಯಿ ಕುಲಕರ್ಣಿ ರಾಮಕೃಷ್ಣ ಹುಜರತ್ತಿ (ಶಿಕ್ಷಣ ಕ್ಷೇತ್ರ) ಶಿವಶರಣರೆಡ್ಡಿ ಡಿಗ್ಗಾವಿ (ಕೃಷಿ ಕ್ಷೇತ್ರ) ಅರುಣ ಲಕ್ಷ್ಮಣ ಚವ್ಹಾಣ ( ಸರ್ಕಾರಿ ಸೇವೆ) ಪರಶುರಾಮ ಎಂಟಮಾನ (ಕಲೆ) ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಂಭಾವಿ:</strong> ‘ವೈಭವದ ಇತಿಹಾಸ ಹೊಂದಿರುವ, ಶರಣರ ಬೀಡು, ಭೋಗಣ್ಣನ ಜನ್ಮಭೂಮಿ ಕೆಂಭಾವಿಯಲ್ಲಿ ಭಾವೈಕ್ಯತೆಯ ದಸರಾ ಆಚರಣೆ ಮಾಡುತ್ತಿರುವ ಯುವಕರ ಕಾರ್ಯ ಪ್ರೇರಣಾದಾಯಕ’ ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಸುರೇಶ ಸಜ್ಜನ ಹೇಳಿದರು.</p>.<p>ಪಟ್ಟಣದ ಪುರಸಭೆ ಆವರಣದಲ್ಲಿ ದಸರಾ ಉತ್ಸವ ಸಮಿತಿಯಿಂದ ಹಮ್ಮಿಕೊಂಡಿದ್ದ 5ನೇ ವರ್ಷದ ದಸರಾ ಉತ್ಸವ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಬೆಂಭಾವಿ ಪಟ್ಟಣ ಅಣ್ಣ ಭೋಗಣ್ಣ, ಹಜರತ್ ಚಚ್ಚಾ ಮಾಸಾಬಿ, ರೇವಣಸಿದ್ದೇಶ್ವರ, ಬಜಾರ ಬಲಭೀಮಸೇನ ದೇವರು ಸೇರಿದಂತೆ ಹಲವು ಪುರಾತನ ದೇವಸ್ಥಾನಗಳು ಹಾಗೂ ವಿಶಿಷ್ಟ ಇತಿಹಾಸ ಹೆಸರುವಾಸಿಯಾಗಿದೆ ಎಂದರು.</p>.<p>ಸಾಹಿತಿ ಲಿಂಗನಗೌಡ ಮಾಲಿಪಾಟೀಲ ಮಾತನಾಡಿ, ‘ನವರಾತ್ರಿ ಮತ್ತು ಮಹಾನವಮಿ ಹಬ್ಬಗಳು ದೇಶದ ಹೆಮ್ಮೆಯ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದು. ಈ ಹಬ್ಬಕ್ಕೆ ಜಾತಿ, ಧರ್ಮ ಮತ್ತು ಲಿಂಗಭೇದಗಳಿಲ್ಲದೆ ಎಲ್ಲರೂ ಸಮಾನವಾಗಿ ಆಚರಣೆ ಮಾಡುವ ಮತ್ತು ಜಾತಿ-ಧರ್ಮಗಳ ಬಗ್ಗೆ ಭಾವೈಕ್ಯತೆ ಬೆಸೆಯುವ ಒಂದು ಹೃದಯವಂತಿಕೆಯ ಹಬ್ಬ ಇದಾಗಿದೆ’ ಎಂದರು.</p>.<p>ಉತ್ಸವ ಸಮಿತಿಯಿಂದ ವರ್ಷದ ವಿಶೇಷ ವ್ಯಕ್ತಿ, ಆದರ್ಶ ಶಿಕ್ಷಕ ರತ್ನ, ಉತ್ತಮ ಕೃಷಿಕ, ಸೇವಾ ಸರ್ವೋತ್ತಮ, ಕಲಾರತ್ನ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು. ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಮುಗಿಸಿ ಬಂದ ಪಟ್ಟಣದ ಸಯ್ಯದ್ ಜಿಲಾನಿ ಹಳಿಸಗರ ಅವರನ್ನು ವಿಶೇಷ ಸನ್ಮಾನಿಸಲಾಯಿತು.</p>.<p>ಸಂಗೀತ ಶಿಕ್ಷಕ ಯಮುನೇಶ ಯಾಳಗಿ ನೇತೃತ್ವದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಪೂಜಾ ಕುಣಿತದ ಜಾನಪದ ನೃತ್ಯ ಗಮನ ಸೆಳೆಯಿತು.</p>.<p>ಸಮಿತಿ ಸದಸ್ಯ ಡಿ.ಸಿ. ಪಾಟೀಲ ಮಾತನಾಡಿದರು. ಹಿರೇಮಠದ ಚೆನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ ನಾಡದೇವಿಗೆ ಪುಷ್ಪಾರ್ಚನೆ ಮಾಡಿದರು. ಸಮಿತಿ ಅಧ್ಯಕ್ಷ ಮುದಿಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು.</p>.<p>ಮುಖಂಡ ಅಪ್ಪುಗೌಡ ಪಾಟೀಲ ಯಾಳಗಿ, ಪುರಸಭೆ ಅಧ್ಯಕ್ಷ ರಹೆಮಾನ ಪಟೇಲ ಯಲಗೋಡ, ಉಪಾದ್ಯಕ್ಷೆ ಲಕ್ಷ್ಮೀಬಾಯಿ ಕಂಬಾರ, ವಾಮನರಾವ ದೇಶಪಾಂಡೆ, ಬಾಪುಗೌಡ ಪಾಟೀಲ, ಅಬ್ದುಲ್ ರಜಾಕ್ ನಾಲತವಾಡ, ನೀಲಕಂಠಾರಾಯಗೌಡ ಪಾಟೀಲ, ಮಂಜುನಾಥ ಗುತ್ತೇದಾರ, ಮೋಹನರೆಡ್ಡಿ ಡಿಗ್ಗಾವಿ, ತೋಟಪ್ಪ ಸಾಹು, ರಾಮನಗೌಡ ಪತ್ತೇಪುರ ಇದ್ದರು.</p>.<p>ಬಂದೇನವಾಜ ನಾಲತವಾಡ ನಿರೂಪಣೆ ಮಾಡಿದರು, ಸೂಗೂರಯ್ಯ ಇಂಡಿ ಸ್ವಾಗತಿಸಿದರು, ಸಮಿತಿ ಅಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ ವಂದಿಸಿದರು.</p>.<p><strong>ಸಾಧಕರಿಗೆ ಪ್ರಶಸ್ತಿ</strong> </p><p>ಪ್ರಧಾನ ಸಂಗಣ್ಣ ಸಿದ್ರಾಮಪ್ಪ ತುಂಬಗಿ (ಸಮಾಜಸೇವೆ) ರಾಜಹ್ಮದ ಬಡಿಗೇರ ನಾಗರತ್ನಾ ಕುಲಕರ್ಣಿ ರಮಾಬಾಯಿ ಕುಲಕರ್ಣಿ ರಾಮಕೃಷ್ಣ ಹುಜರತ್ತಿ (ಶಿಕ್ಷಣ ಕ್ಷೇತ್ರ) ಶಿವಶರಣರೆಡ್ಡಿ ಡಿಗ್ಗಾವಿ (ಕೃಷಿ ಕ್ಷೇತ್ರ) ಅರುಣ ಲಕ್ಷ್ಮಣ ಚವ್ಹಾಣ ( ಸರ್ಕಾರಿ ಸೇವೆ) ಪರಶುರಾಮ ಎಂಟಮಾನ (ಕಲೆ) ಪ್ರಶಸ್ತಿ ನೀಡಿ ಗೌರವಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>