<p><strong>ವಡಗೇರಾ:</strong> ಕಾರ್ತಿಕ ದೀಪೋತ್ಸವದಲ್ಲಿ ದೀಪ ಹಚ್ಚುವುದರಿಂದ ಮನುಷ್ಯನಲ್ಲಿ ಅಡಗಿರುವ ಅಜ್ಞಾನ ಹಾಗೂ ಕಷ್ಟಗಳು ದೂರವಾಗುತ್ತವೆ ಎಂದು ಸಂಗಮೇಶ್ವರ ಪೀಠಾಧಿಪತಿ ಸಂಗಮೇಶ್ವರ ಸ್ವಾಮೀಜಿ ನುಡಿದರು.</p>.<p>ತಾಲ್ಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಮಠದಿಂದ ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಶಿವ ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಕಾರ್ತಿಕ ಮಾಸವು ಹಿಂದೂಗಳಿಗೆ ಪವಿತ್ರ ಮಾಸಗಳಲ್ಲೊಂದು. ಈ ಮಾಸದಲ್ಲಿ ನಾವು ಬೆಳಗಿಸಿದ ಜ್ಯೋತಿ ಮನೆ–ಮನವನ್ನು ಬೆಳಗುತ್ತದೆ ಎಂಬ ಪ್ರತೀತಿಯಿದೆ. ಆತ್ಮದ ಶುದ್ಧೀಕರಣ ಮತ್ತು ಪರಮಾತ್ಮನೊಂದಿಗೆ ಒಂದಾಗಲು ಪವಿತ್ರ ಕಾರ್ತಿಕ ಮಾಸದಲ್ಲಿ ಪ್ರತಿಯೊಬ್ಬರು ದೀಪಾರಾಧನೆ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>ಈ ಕಾರ್ಯಕ್ರಮದಲ್ಲಿ ಮಾಜಿ– ಹಾಲಿ ಶಾಸಕರು ಹಾಗೂ ವಡಗೇರಾ ತಾಲ್ಲೂಕಿನ ಹಾಲಿ–ಮಾಜಿ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳನ್ನು ಸನ್ಮಾನಿಸಲಾಯಿತು.</p>.<p>ಈ ಸಂದರ್ಭದಲ್ಲಿ ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ಪತ್ನಿ ಸಂತೋಷಿರಾಣಿ, ವಡಗೇರಾ ತಹಶೀಲ್ದಾರ್ ಶ್ರೀನಿವಾಸ್ ಚಾಪಲ್, ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಸಂಗ್ವಾರ, ಶಹಾಪುರ ಕೃಷಿ ಮಾರುಕಟ್ಟೆ ತಾಲ್ಲೂಕು ಅಧ್ಯಕ್ಷ ಅಯ್ಯಣ್ಣ ಹಾಲಗೇರಾ, ವೀರಭದ್ರಯ್ಯ ಸ್ವಾಮಿ ದೇವಸೂಗೂರ, ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪಗೌಡ ಕಾರಡ್ಡಿ ಮಲ್ಹಾರ, ಸಿದ್ದರಾಮಪ್ಪಗೌಡ ಬೆಳಗುಂದಿ, ಚಂದ್ರಶೇಖರಗೌಡ ಗೋನಾಲ, ರವಿಪಾಟೀಲ ಮನಗೂಳಿ, ವಿಶ್ವನಾಥ್ ರೆಡ್ಡಿ ಗೌಡ ಬಿಳ್ಹಾರ, ಶ್ರೀನಿವಾಸ ರೆಡ್ಡಿಗೌಡ ಚೆನ್ನೂರು, ಮರಿಲಿಂಗಪ್ಪ ಸಾಹುಕಾರ ಕುಮನೂರು, ಮೋಹನ್ ರಾವ್ ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಜನಪ್ರತಿನಿಧಿಗಳು, ಮಾಜಿ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸುತ್ತಲಿನ ಗ್ರಾಮದ ಭಕ್ತರು, ಮಹಿಳೆಯರು ಮಠದ ಸಮಿತಿ ಸದಸ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡಗೇರಾ:</strong> ಕಾರ್ತಿಕ ದೀಪೋತ್ಸವದಲ್ಲಿ ದೀಪ ಹಚ್ಚುವುದರಿಂದ ಮನುಷ್ಯನಲ್ಲಿ ಅಡಗಿರುವ ಅಜ್ಞಾನ ಹಾಗೂ ಕಷ್ಟಗಳು ದೂರವಾಗುತ್ತವೆ ಎಂದು ಸಂಗಮೇಶ್ವರ ಪೀಠಾಧಿಪತಿ ಸಂಗಮೇಶ್ವರ ಸ್ವಾಮೀಜಿ ನುಡಿದರು.</p>.<p>ತಾಲ್ಲೂಕಿನ ಕೃಷ್ಣವೇಣಿ ಭೀಮಾ ಸಂಗಮದ ಸಂಗಮೇಶ್ವರ ಮಠದಿಂದ ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಶಿವ ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ಕಾರ್ತಿಕ ಮಾಸವು ಹಿಂದೂಗಳಿಗೆ ಪವಿತ್ರ ಮಾಸಗಳಲ್ಲೊಂದು. ಈ ಮಾಸದಲ್ಲಿ ನಾವು ಬೆಳಗಿಸಿದ ಜ್ಯೋತಿ ಮನೆ–ಮನವನ್ನು ಬೆಳಗುತ್ತದೆ ಎಂಬ ಪ್ರತೀತಿಯಿದೆ. ಆತ್ಮದ ಶುದ್ಧೀಕರಣ ಮತ್ತು ಪರಮಾತ್ಮನೊಂದಿಗೆ ಒಂದಾಗಲು ಪವಿತ್ರ ಕಾರ್ತಿಕ ಮಾಸದಲ್ಲಿ ಪ್ರತಿಯೊಬ್ಬರು ದೀಪಾರಾಧನೆ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>ಈ ಕಾರ್ಯಕ್ರಮದಲ್ಲಿ ಮಾಜಿ– ಹಾಲಿ ಶಾಸಕರು ಹಾಗೂ ವಡಗೇರಾ ತಾಲ್ಲೂಕಿನ ಹಾಲಿ–ಮಾಜಿ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒಗಳನ್ನು ಸನ್ಮಾನಿಸಲಾಯಿತು.</p>.<p>ಈ ಸಂದರ್ಭದಲ್ಲಿ ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ಪತ್ನಿ ಸಂತೋಷಿರಾಣಿ, ವಡಗೇರಾ ತಹಶೀಲ್ದಾರ್ ಶ್ರೀನಿವಾಸ್ ಚಾಪಲ್, ತಾಲ್ಲೂಕು ಪಂಚಾಯಿತಿ ಇಒ ಮಲ್ಲಿಕಾರ್ಜುನ ಸಂಗ್ವಾರ, ಶಹಾಪುರ ಕೃಷಿ ಮಾರುಕಟ್ಟೆ ತಾಲ್ಲೂಕು ಅಧ್ಯಕ್ಷ ಅಯ್ಯಣ್ಣ ಹಾಲಗೇರಾ, ವೀರಭದ್ರಯ್ಯ ಸ್ವಾಮಿ ದೇವಸೂಗೂರ, ಕಾಂಗ್ರೆಸ್ ಹಿರಿಯ ಮುಖಂಡ ಶರಣಪ್ಪಗೌಡ ಕಾರಡ್ಡಿ ಮಲ್ಹಾರ, ಸಿದ್ದರಾಮಪ್ಪಗೌಡ ಬೆಳಗುಂದಿ, ಚಂದ್ರಶೇಖರಗೌಡ ಗೋನಾಲ, ರವಿಪಾಟೀಲ ಮನಗೂಳಿ, ವಿಶ್ವನಾಥ್ ರೆಡ್ಡಿ ಗೌಡ ಬಿಳ್ಹಾರ, ಶ್ರೀನಿವಾಸ ರೆಡ್ಡಿಗೌಡ ಚೆನ್ನೂರು, ಮರಿಲಿಂಗಪ್ಪ ಸಾಹುಕಾರ ಕುಮನೂರು, ಮೋಹನ್ ರಾವ್ ಹಾಗೂ ವಿವಿಧ ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಜನಪ್ರತಿನಿಧಿಗಳು, ಮಾಜಿ ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸುತ್ತಲಿನ ಗ್ರಾಮದ ಭಕ್ತರು, ಮಹಿಳೆಯರು ಮಠದ ಸಮಿತಿ ಸದಸ್ಯರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>