<p><strong>ಯಾದಗಿರಿ: </strong>ಹಿರಿಯೂರ ಮತಕ್ಷೇತ್ರ ಶಾಸಕಿ ಪೂರ್ಣಿಮಾ ಶ್ರೀನಿವಾಸಗೆ ಸಚಿವ ಸ್ಥಾನ ನೀಡುವಂತೆ ಅಗ್ರಹಿಸಿ ಜಿಲ್ಲಾ ಯಾದವ ಗೊಲ್ಲ ಸಂಘವು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ.</p>.<p>ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ತಾಯಪ್ಪ ಯಾದವ ಕಾಳೆಬೆಳಗುಂದಿ ಮಾತನಾಡಿ, ಗೊಲ್ಲ ಜನಾಂಗದ ಏಕೈಕ ಮಹಿಳಾ ಶಾಸಕಿ ಕೆ. ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.</p>.<p>ಗೊಲ್ಲ ಸಮುದಾಯವು ಶತ ಶತಮಾನಗಳ ಇತಿಹಾಸ ಹೊಂದಿದೆ. ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಹಿಂದುಳಿದ ಸಮುದಾಯಕ್ಕೆ ಸರ್ಕಾರ ರಾಜಕೀಯ ಸ್ಥಾನಮಾನ ಕಲ್ಪಿಸದಿರುವುದು ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ನಮ್ಮ ಸಮುದಾಯದ ಶಾಸಕಿಗೆ ಸಚಿವ ಸ್ಥಾನ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.</p>.<p>ಈ ಸಂದರ್ಭದಲ್ಲಿ ಶಹಾಪುರ ತಾಲ್ಲೂಕುಅಧ್ಯಕ್ಷ ಲಕ್ಷ್ಮಣ ಯಾದವ, ಮಾಳಪ್ಪ ಯಾದವ, ನರಸಿಂಹ ಯಾದವ ಬದ್ದೇಪಲ್ಲಿ, ಅಂಬ್ರೇಶ ಯಾದವ, ನರಸಿಂಹ ಚಂಡ್ರಿಕಿ, ಗುರುಬದ್ದೇಪಲ್ಲಿ, ಸಾಯಬಣ್ಣ ಪುರ್ಲೆ, ಸುರೇಶ ಯಾದವ ಪೇಠ ಅಮ್ಮಾಪುರ, ಭೀಮಣ್ಣ ಮುಡಬೂಳ, ವೆಂಕಟೇಶ ಯಾದವ ಬದ್ದೇಪಲ್ಲಿ, ನಿಂಗಪ್ಪ ಕಟ್ಟಿಮನಿ, ಸತೀಶ ಯಾದವ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಹಿರಿಯೂರ ಮತಕ್ಷೇತ್ರ ಶಾಸಕಿ ಪೂರ್ಣಿಮಾ ಶ್ರೀನಿವಾಸಗೆ ಸಚಿವ ಸ್ಥಾನ ನೀಡುವಂತೆ ಅಗ್ರಹಿಸಿ ಜಿಲ್ಲಾ ಯಾದವ ಗೊಲ್ಲ ಸಂಘವು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದೆ.</p>.<p>ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ತಾಯಪ್ಪ ಯಾದವ ಕಾಳೆಬೆಳಗುಂದಿ ಮಾತನಾಡಿ, ಗೊಲ್ಲ ಜನಾಂಗದ ಏಕೈಕ ಮಹಿಳಾ ಶಾಸಕಿ ಕೆ. ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಮಾಜಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.</p>.<p>ಗೊಲ್ಲ ಸಮುದಾಯವು ಶತ ಶತಮಾನಗಳ ಇತಿಹಾಸ ಹೊಂದಿದೆ. ಅಲೆಮಾರಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಹಿಂದುಳಿದ ಸಮುದಾಯಕ್ಕೆ ಸರ್ಕಾರ ರಾಜಕೀಯ ಸ್ಥಾನಮಾನ ಕಲ್ಪಿಸದಿರುವುದು ನೋವುಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ನಮ್ಮ ಸಮುದಾಯದ ಶಾಸಕಿಗೆ ಸಚಿವ ಸ್ಥಾನ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.</p>.<p>ಈ ಸಂದರ್ಭದಲ್ಲಿ ಶಹಾಪುರ ತಾಲ್ಲೂಕುಅಧ್ಯಕ್ಷ ಲಕ್ಷ್ಮಣ ಯಾದವ, ಮಾಳಪ್ಪ ಯಾದವ, ನರಸಿಂಹ ಯಾದವ ಬದ್ದೇಪಲ್ಲಿ, ಅಂಬ್ರೇಶ ಯಾದವ, ನರಸಿಂಹ ಚಂಡ್ರಿಕಿ, ಗುರುಬದ್ದೇಪಲ್ಲಿ, ಸಾಯಬಣ್ಣ ಪುರ್ಲೆ, ಸುರೇಶ ಯಾದವ ಪೇಠ ಅಮ್ಮಾಪುರ, ಭೀಮಣ್ಣ ಮುಡಬೂಳ, ವೆಂಕಟೇಶ ಯಾದವ ಬದ್ದೇಪಲ್ಲಿ, ನಿಂಗಪ್ಪ ಕಟ್ಟಿಮನಿ, ಸತೀಶ ಯಾದವ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>