ದಾರಿಯುದ್ದಕ್ಕೂ ಭಜನೆ, ಶಿವನಾಮ ಕೀರ್ತನೆಯೊಂದಿಗೆ ಪಾದಯಾತ್ರೆ ಸಾಗಿದ್ದು, ಮಂಗಳವಾರ ಭ್ರಮರಾಂಭ ದೇವಸ್ಥಾನ, ಮಲ್ಲಿಕಾರ್ಜುನ ಜ್ಯೋತಿರ್ಲಿಂಗ ಹಾಗೂ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನಗಳ ದರ್ಶನ ಪಡೆದಿದ್ದು, ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ನಮ್ಮಲ್ಲಿ ಸಕಾರಾತ್ಮಕತೆ ಹೆಚ್ಚಿ, ಆತ್ಮಶುದ್ಧಿಯಾಗುತ್ತದೆ. ಜತೆಗೆ ಪಾದಯಾತ್ರೆಯಿಂದ ಆರೋಗ್ಯವೂ ಲಭಿಸಲಿದೆ ಎಂದು ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶರಣು ಗದ್ದುಗೆ ಹೇಳಿದ್ದಾರೆ.