ಸ್ವಲ್ಪ ಮಳೆಯಾದರೆ, ನಲ್ಲಿ ನೀರು ಜಾಸ್ತಿ ಹೊತ್ತು ಬಂದರೂ ಹಿಂದಿನ ಬಜಾರ ರಸ್ತೆಗಳೆಲ್ಲ ಚರಂಡಿಗಳಾಗಿ ಮಾರ್ಪಾಡಾಗುತ್ತವೆ. ವಿದ್ಯಾರ್ಥಿಗಳು, ವೃದ್ಧರು ಅಡ್ಡಾಡಲು ಕಷ್ಟಪಡುವಂತಾಗಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗುತ್ತಿದ್ದು ಜನರು ಸಾಂಕ್ರಾಮಿಕ ರೋಗದ ಭಯದಲ್ಲೇ ಜೀವಿಸುತ್ತಿದ್ದಾರೆ. ಸಂತೆಯ ದಿನ (ಸೋಮವಾರ) ಬಂದರಂತೂ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಬೇರೆ ಬೇರೆ ಊರುಗಳಿಂದ ಬರುವ ಜನ ಶಾಪ ಹಾಕಿ ಹೋಗುವಂತಾಗಿದೆ.