<p><strong>ಹುಣಸಗಿ</strong>: ತಾಲ್ಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ (ಡಿ.30) ನಡೆಯಲಿದ್ದು, ಅಭ್ಯರ್ಥಿಗಳಿಗೆ ಎದೆಯಲ್ಲಿ ಢವಢವ ಶುರುವಾಗಿದೆ.</p>.<p>ಮಹಿಳಾ ಮೀಸಲಾಯಿತಿ ಫಲವಾಗಿ ಯುಕೆಪಿ ಕ್ಯಾಂಪ್, ಮಾತೋಶ್ರೀ ಶಿವಲಿಂಗಮ್ಮ ಕಾಲೊನಿ ಸೇರಿದಂತೆ ಇತರ ಕೆಲ ವಾರ್ಡ್ಗಳಲ್ಲಿ ಈ ಬಾರಿ ತಮ್ಮ ಮನೆಗೆ ಮಾತ್ರ ಸೀಮಿತವಾಗಿರುವವರಿಗೆ ಎರಡೂ ಪಕ್ಷಗಳು ಗುರುತಿಸಿ ಟಿಕೆಟ್ ನೀಡಲಾಗಿದೆ. ಇದರಿಂದಾಗಿ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ, ಮತದಾರ ಪ್ರಭುಗಳು ಯಾರಿಗೆ ಆಶೀರ್ವದಿಸಲಿದ್ದಾರೆ ತಿಳಿಯದಂತಾಗಿದೆ ಎಂದು ಮಹಿಳಾ ಅಭ್ಯರ್ಥಿಯೊಬ್ಬರು ತಿಳಿಸಿದರು.</p>.<p>‘ಇಲ್ಲಿಯವರೆಗೂ ನಮ್ಮ ಮನೆಗಳು ರಾಜಕೀಯದಿಂದ ದೂರ ಇದ್ದವು. ಆದರೆ ಈ ಬಾರಿ ಒಂದನೇ ವಾರ್ಡ್ನಿಂದ ಬಿಜೆಪಿ ಗುರುತಿಸಿ ಟಿಕೆಟ್ ನೀಡಿದ್ದರಿಂದಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಒಂದು ಲೆಕ್ಕಾಚಾರದಂತೆ ಬಹುತೇಕ ಮತಗಳು ನನಗೆ ಬಂದಿದ್ದು, ಗೆಲ್ಲುವ ವಿಶ್ವಾಸವಿದೆ’ ಎಂದು ಒಂದನೇ ವಾರ್ಡ್ ಅಭ್ಯರ್ಥಿ ಲಕ್ಷ್ಮಿಬಾಯಿ ಮರೆಪ್ಪ ಕಟ್ಟಿಮನಿ ಹೇಳಿದರು.</p>.<p>‘ಹುಣಸಗಿ ಅಭಿವೃದ್ಧಿಗಾಗಿ ನನಗೂ ಒಂದು ಅವಕಾಶ ಸಿಕ್ಕಲ್ಲಿ ಸಾಕಷ್ಟು ಶ್ರಮಿಸುವ ಉದ್ದೇಶದೊಂದಿಗೆ ಚುನಾವಣೆ ಎದುರಿಸಿದ್ದೇನೆ. ಫಲಿತಾಂಶಕ್ಕಾಗಿ ಕುತೂಹಲದಿಂದಲೇ ಕಾಯುತ್ತಿದ್ದೇನೆ’ ಎಂದು ಬಿ.ಇ, ಎಂ.ಟೆಕ್ ಪದವೀಧರ ಶಿವರುದ್ರಪ್ಪ ದೇಸಾಯಿ ತಿಳಿಸಿದರು.</p>.<p>‘ಹಲವು ಬಾರಿ ನಮ್ಮ ಕುಟುಂಬದವರು ಚುನಾವಣೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ನಾನು ಪದವೀಧರೆಯಾಗಿದ್ದು, ಈ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪದವೀಧರ ಮಹಿಳೆಯರು ಸ್ಪರ್ಧಿಸಿಲ್ಲ. ಆದ್ದರಿಂದ 14ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದು, ಯಾವುದೇ ಫಲಿತಾಂಶ ಬಂದರೂ ಗೌರವಿಸುತ್ತೇನೆ’ ಎಂದು ಶಶಿಕಲಾ ನರಸಪ್ಪಗೌಡ ಬಿರಾದಾರ ಹೇಳಿದರು.</p>.<p><strong>8 ಸುತ್ತುಗಳಲ್ಲಿ ಎಣಿಕೆ ಕಾರ್ಯ</strong></p><p>‘ಪಟ್ಟಣ ಪಂಚಾಯಿತಿಯ 16 ವಾರ್ಡ್ಗಳಿಗೆ ಬುಧವಾರ ಚುನಾವಣೆ ನಡೆದಿತ್ತು. ಚುನಾವಣೆಯ ಮತ ಎಣಿಕೆಗೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ’ ಎಂದು ತಹಶೀಲ್ದಾರ್ ಬಸಲಿಂಗಪ್ಪ ನೈಕೋಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ಒಟ್ಟು 16 ಬೂತ್ಗಳ ಪೈಕಿ 1ರಿಂದ 8ರ ವರೆಗೆ ಹಾಗೂ 9ರಿಂದ 16 ಹೀಗೆ ಎರಡು ಟೇಬಲ್ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು 8 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಇದಕ್ಕಾಗಿ ಓರ್ವ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ’ ಎಂದು ವಿವರಿಸಿದರು.</p>.<p>ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಕಲಂ 144 ಜಾರಿಗೊಳಿಸಲಾಗಿದ್ದು, ಶನಿವಾರವೂ ಮುಂದುವರಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸಗಿ</strong>: ತಾಲ್ಲೂಕಿನಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ಪಟ್ಟಣ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ (ಡಿ.30) ನಡೆಯಲಿದ್ದು, ಅಭ್ಯರ್ಥಿಗಳಿಗೆ ಎದೆಯಲ್ಲಿ ಢವಢವ ಶುರುವಾಗಿದೆ.</p>.<p>ಮಹಿಳಾ ಮೀಸಲಾಯಿತಿ ಫಲವಾಗಿ ಯುಕೆಪಿ ಕ್ಯಾಂಪ್, ಮಾತೋಶ್ರೀ ಶಿವಲಿಂಗಮ್ಮ ಕಾಲೊನಿ ಸೇರಿದಂತೆ ಇತರ ಕೆಲ ವಾರ್ಡ್ಗಳಲ್ಲಿ ಈ ಬಾರಿ ತಮ್ಮ ಮನೆಗೆ ಮಾತ್ರ ಸೀಮಿತವಾಗಿರುವವರಿಗೆ ಎರಡೂ ಪಕ್ಷಗಳು ಗುರುತಿಸಿ ಟಿಕೆಟ್ ನೀಡಲಾಗಿದೆ. ಇದರಿಂದಾಗಿ ಚುನಾವಣೆಯಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ, ಮತದಾರ ಪ್ರಭುಗಳು ಯಾರಿಗೆ ಆಶೀರ್ವದಿಸಲಿದ್ದಾರೆ ತಿಳಿಯದಂತಾಗಿದೆ ಎಂದು ಮಹಿಳಾ ಅಭ್ಯರ್ಥಿಯೊಬ್ಬರು ತಿಳಿಸಿದರು.</p>.<p>‘ಇಲ್ಲಿಯವರೆಗೂ ನಮ್ಮ ಮನೆಗಳು ರಾಜಕೀಯದಿಂದ ದೂರ ಇದ್ದವು. ಆದರೆ ಈ ಬಾರಿ ಒಂದನೇ ವಾರ್ಡ್ನಿಂದ ಬಿಜೆಪಿ ಗುರುತಿಸಿ ಟಿಕೆಟ್ ನೀಡಿದ್ದರಿಂದಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಒಂದು ಲೆಕ್ಕಾಚಾರದಂತೆ ಬಹುತೇಕ ಮತಗಳು ನನಗೆ ಬಂದಿದ್ದು, ಗೆಲ್ಲುವ ವಿಶ್ವಾಸವಿದೆ’ ಎಂದು ಒಂದನೇ ವಾರ್ಡ್ ಅಭ್ಯರ್ಥಿ ಲಕ್ಷ್ಮಿಬಾಯಿ ಮರೆಪ್ಪ ಕಟ್ಟಿಮನಿ ಹೇಳಿದರು.</p>.<p>‘ಹುಣಸಗಿ ಅಭಿವೃದ್ಧಿಗಾಗಿ ನನಗೂ ಒಂದು ಅವಕಾಶ ಸಿಕ್ಕಲ್ಲಿ ಸಾಕಷ್ಟು ಶ್ರಮಿಸುವ ಉದ್ದೇಶದೊಂದಿಗೆ ಚುನಾವಣೆ ಎದುರಿಸಿದ್ದೇನೆ. ಫಲಿತಾಂಶಕ್ಕಾಗಿ ಕುತೂಹಲದಿಂದಲೇ ಕಾಯುತ್ತಿದ್ದೇನೆ’ ಎಂದು ಬಿ.ಇ, ಎಂ.ಟೆಕ್ ಪದವೀಧರ ಶಿವರುದ್ರಪ್ಪ ದೇಸಾಯಿ ತಿಳಿಸಿದರು.</p>.<p>‘ಹಲವು ಬಾರಿ ನಮ್ಮ ಕುಟುಂಬದವರು ಚುನಾವಣೆಗಳನ್ನು ಎದುರಿಸುತ್ತಾ ಬಂದಿದ್ದಾರೆ. ನಾನು ಪದವೀಧರೆಯಾಗಿದ್ದು, ಈ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪದವೀಧರ ಮಹಿಳೆಯರು ಸ್ಪರ್ಧಿಸಿಲ್ಲ. ಆದ್ದರಿಂದ 14ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿದ್ದು, ಯಾವುದೇ ಫಲಿತಾಂಶ ಬಂದರೂ ಗೌರವಿಸುತ್ತೇನೆ’ ಎಂದು ಶಶಿಕಲಾ ನರಸಪ್ಪಗೌಡ ಬಿರಾದಾರ ಹೇಳಿದರು.</p>.<p><strong>8 ಸುತ್ತುಗಳಲ್ಲಿ ಎಣಿಕೆ ಕಾರ್ಯ</strong></p><p>‘ಪಟ್ಟಣ ಪಂಚಾಯಿತಿಯ 16 ವಾರ್ಡ್ಗಳಿಗೆ ಬುಧವಾರ ಚುನಾವಣೆ ನಡೆದಿತ್ತು. ಚುನಾವಣೆಯ ಮತ ಎಣಿಕೆಗೆ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ’ ಎಂದು ತಹಶೀಲ್ದಾರ್ ಬಸಲಿಂಗಪ್ಪ ನೈಕೋಡಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.</p>.<p>‘ಒಟ್ಟು 16 ಬೂತ್ಗಳ ಪೈಕಿ 1ರಿಂದ 8ರ ವರೆಗೆ ಹಾಗೂ 9ರಿಂದ 16 ಹೀಗೆ ಎರಡು ಟೇಬಲ್ಗಳಲ್ಲಿ ಮತ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು 8 ಸುತ್ತುಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ. ಇದಕ್ಕಾಗಿ ಓರ್ವ ಮೇಲ್ವಿಚಾರಕರು ಹಾಗೂ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ’ ಎಂದು ವಿವರಿಸಿದರು.</p>.<p>ಮುಂಜಾಗ್ರತಾ ಕ್ರಮವಾಗಿ ಪಟ್ಟಣದಲ್ಲಿ ಕಲಂ 144 ಜಾರಿಗೊಳಿಸಲಾಗಿದ್ದು, ಶನಿವಾರವೂ ಮುಂದುವರಿಯಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>