<p><strong>ಯಾದಗಿರಿ:</strong> ಜಿಲ್ಲೆಯಲ್ಲಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಉಂಟಾದ ಪ್ರವಾಹ, ಅತಿವೃಷ್ಟಿಯಿಂದ ದೀಪಾವಳಿ ಖರೀದಿ ವಹಿವಾಟು ಇಳಿಕೆಯಾಗಿದೆ.</p>.<p>ಮುಂಗಾರು ಆರಂಭದಿಂದಲೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಹೆಸರು ಬೆಳೆ ಬಂಪರ್ ಬರುವ ನಿರೀಕ್ಷೆ ಇತ್ತು. ಆದರೆ, ಅಧಿಕ ಮಳೆ ಬಂದು ಎಲ್ಲ ನಾಶವಾಗಿತ್ತು. ಆ ನಂತರ ಕೃಷ್ಣಾ, ಭೀಮಾ ನದಿ ತೀರದ ರೈತರು ಹತ್ತಿ, ಭತ್ತ ಬೆಳೆದಿದ್ದರು. ಆದರೆ, ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಪ್ರವಾಹದಿಂದ ಬಿತ್ತಿದ ಬೆಳೆ ಎಲ್ಲ ನಾಶವಾಗಿದೆ. ಇದು ಈಗ ದೀಪಾವಳಿ ಖರೀದಿ ಮೇಲೆಯೂ ಪ್ರಭಾವ ಬಿದ್ದಿದೆ.</p>.<p class="Subhead">ಕೈಯಲ್ಲಿ ಹಣವಿಲ್ಲ:ಗ್ರಾಮೀಣ ಭಾಗ ದಿಂದ ನಗರ ಪ್ರದೇಶಗಳಿಗೆ ಬಂದು ಖರೀದಿ ಮಾಡುವವರು ಬಹುತೇಕ ರೈತರೇ ಆಗಿದ್ದಾರೆ. ಈಗ ರೈತರ ಕೈಯಲ್ಲಿ ಹಣವಿಲ್ಲ. ಇದರಿಂದ ವ್ಯಾಪಾರ ವಹಿವಾಟಿನ ಮೇಲೆ ಪ್ರಭಾವ ಬೀರಿದೆ.</p>.<p>ನಗರದ ಗಾಂಧಿ ವೃತ್ತದ ಮಾರುಕಟ್ಟೆಯಲ್ಲಿ ಜನಸಂದಣಿಯೇ ಕಾಣುತ್ತಿಲ್ಲ. ಹೆಚ್ಚಾಗಿಹಣತೆಗಳು ಮಾತ್ರ ಕಾಣಸಿಗುತ್ತವೆ. ಆಕಾಶ ಬುಟ್ಟಿಗಳು ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಮಾರಾಟಕ್ಕೆ ಇಡಲಾಗಿದೆ.</p>.<p>ನಗರದ ಗಾಂಧಿ ವೃತ್ತದಲ್ಲಿ ಕುಂಬಾರ ಸಮುದಾಯದ ಮಹಿಳೆಯರು ಹಣತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ವ್ಯಾಪಾರವೇ ಆಗುತ್ತಿಲ್ಲ ಎಂದು ಆಳಲು ತೋಡಿಕೊಂಡರು.</p>.<p>ಹಣತೆಯಲ್ಲಿ ವಿವಿಧ ಆಕಾರಗಳಿದ್ದು, ಅವುಗಳಿಗೆ ತಕ್ಕಂತೆ ದರ ನಿಗದಿ ಮಾಡಿದ್ದಾರೆ. ಚಿಕ್ಕ ಗಾತ್ರ ಹಣತೆ ₹ 5, ಮಧ್ಯಮ ಗಾತ್ರದ ₹ 10, ದೊಡ್ಡ ಗಾತ್ರದ ಅಲಂಕಾರವುಳ್ಳ ಹಣತೆಗೆ ₹ 20 ದರವಿದೆ.</p>.<p>‘ಬೆಳಿಗ್ಗೆಯಿಂದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ, ₹ 200 ವ್ಯಾಪಾರವೂ ಆಗಿಲ್ಲ. ಅಲಂಕಾರವುಳ್ಳ ಹಣತೆಗಳನ್ನು ಸೊಲ್ಲಾಪುರದಿಂದ ತಂದಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ಲಕ್ಷ್ಮಿ ಕುಂಬಾರ.</p>.<p>ಆಕಾಶ ಬುಟ್ಟಿಗಳಿಗೆ ಹೆಚ್ಚಿನದರ ಇದೆ. ₹ 100 ರಿಂದ ₹ 200 ತನಕ ದರ ನಿಗದಿ ಪಡಿಸಲಾಗಿದೆ. ಆದರೆ, ಗ್ರಾಹಕರು ಮಾತ್ರ ಬರುತ್ತಿಲ್ಲ ಎಂದು ವ್ಯಾಪಾರಿಗಳು ತಿಳಿಸಿದರು.</p>.<p class="Subhead"><strong>ಕುಂಬಾರರ ಬದುಕಲ್ಲಿ ಕತ್ತಲು:</strong> ಕೊರೊನಾ ಲಾಕ್ಡೌನ್ ಮಧ್ಯೆ ಯುಗಾದಿ ಹಬ್ಬದ ಬೇವಿನ ಗಡಿಗೆಗಳು ವ್ಯಾಪಾರ ಇಲ್ಲದೆ ತೀರಾ ಸಂಕಷ್ಟವನ್ನು ಕುಂಬಾರರ ಕುಟುಂಬಗಳು ಅನುಭವಿಸಿದ್ದವು. ಈಗ ಭೀಮಾ ನದಿ ಪ್ರವಾಹದಿಂದ ಕುಂಬಾರರ ಬದುಕು ಕೊಚ್ಚಿಹೋಗಿದೆ. ದೀಪಾವಳಿ ಹಬ್ಬಕ್ಕೆ ತಯಾರಿಸಿದ ಹಣತೆಗಳು ನದಿ ನೀರಿನಲ್ಲಿ ಕೊಚ್ಚಿಹೋಗಿವೆ. ನಾಯ್ಕಲ್ ಗ್ರಾಮದ 5 - 6 ಕುಟುಂಬದವರು ದೀಪಾವಳಿಗಾಗಿ ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಅವರೆಲ್ಲರ ಸ್ಥಿತಿ ಶೋಚನೀಯವಾಗಿದೆ.</p>.<p>ಕುಂಬಾರರು ಕುಲ ಕಸುಬು ಕುಂಬಾರಿಕೆ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಾರೆ. ಇದೇ ವೃತ್ತಿಯಿಂದ ಯಾವ ಸಂಪಾದನೆಯೂ ಆಗುತ್ತಿಲ್ಲ.</p>.<p>’ಮಣ್ಣಿನ ಸಾಮಾಗ್ರಿಗಳ ಬಳಕೆ ಇರುವ ಟಿಗ್ರಿ ಸಹಿತ ಹಾಳಾಗಿದೆ. ಇದನ್ನು ತರಲು ಸುಮಾರು ₹ 20 ಸಾವಿರ ಹಣ ಬೇಕಾಗುತ್ತದೆ. ಕುಂಬಾರು ಕುಂಬಾರಿಕೆ ಮಾಡದೆ ಕೈ ಚೆಲ್ಲಿ ಕುಳಿತಿವೆ. ಕುಂಬಾರರ ಜೀವನ ದುಸ್ತರವಾಗಿದೆ’ ಎನ್ನುತ್ತಾರೆ ಇಲ್ಲಿನ ಕುಂಬಾರರು.</p>.<p>ಭೀಮಾ ನದಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿ, ಮನೆಗಳು ಜಲಾವೃತಗೊಂಡು ಹಣತೆಗಳು, ಮಡಿಕೆ ಕುಡಿಕೆಗಳು, ಕಟ್ಟಿಗೆಗಳು ಎಲ್ಲವೋ ಭೀಮೆ ಪಾಲಾಗಿ ಕೊಚ್ಚಿಹೋಗಿವೆ. ದೀಪಾವಳಿ ಕುಂಬಾರರ ಬದುಕಲ್ಲಿ ಕತ್ತಲೆ ಆವರಿಸಿದೆ.</p>.<p>***</p>.<p>ಎರಡು ದಿನಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಹಣತೆ ಕೇಳುವವರು ಇಲ್ಲ. ಇದರಿಂದ ಈ ವರ್ಷ ಅಳಿದುಳಿದ ಹಣತೆಗಳು ಹೇಗೆ ಮಾರಾಟ ಮಾಡುವುದು<br />- ಶಾಂತಮ್ಮ ಕುಂಬಾರ, ಹಣತೆ ವ್ಯಾಪಾರಿ</p>.<p>***</p>.<p>ಮನೆ ಮಂದಿ ಎಲ್ಲಾ ಸೇರಿ ದುಡಿದು ಸಂಗ್ರಹ ಮಾಡಿದ ಹಣತೆಗಳು ಎಲ್ಲವೂ ಭೀಮಾ ನದಿ ಪಾಲಾಗಿವೆ. ಕುಂಬಾರರ ಬದುಕಲ್ಲಿ ಕತ್ತಲು ಆವರಿಸಿದೆ<br />- ಹಣಮಂತ ಕುಂಬಾರ ನಾಯ್ಕಲ್ ಗ್ರಾಮಸ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ಜಿಲ್ಲೆಯಲ್ಲಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಉಂಟಾದ ಪ್ರವಾಹ, ಅತಿವೃಷ್ಟಿಯಿಂದ ದೀಪಾವಳಿ ಖರೀದಿ ವಹಿವಾಟು ಇಳಿಕೆಯಾಗಿದೆ.</p>.<p>ಮುಂಗಾರು ಆರಂಭದಿಂದಲೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಹೆಸರು ಬೆಳೆ ಬಂಪರ್ ಬರುವ ನಿರೀಕ್ಷೆ ಇತ್ತು. ಆದರೆ, ಅಧಿಕ ಮಳೆ ಬಂದು ಎಲ್ಲ ನಾಶವಾಗಿತ್ತು. ಆ ನಂತರ ಕೃಷ್ಣಾ, ಭೀಮಾ ನದಿ ತೀರದ ರೈತರು ಹತ್ತಿ, ಭತ್ತ ಬೆಳೆದಿದ್ದರು. ಆದರೆ, ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಪ್ರವಾಹದಿಂದ ಬಿತ್ತಿದ ಬೆಳೆ ಎಲ್ಲ ನಾಶವಾಗಿದೆ. ಇದು ಈಗ ದೀಪಾವಳಿ ಖರೀದಿ ಮೇಲೆಯೂ ಪ್ರಭಾವ ಬಿದ್ದಿದೆ.</p>.<p class="Subhead">ಕೈಯಲ್ಲಿ ಹಣವಿಲ್ಲ:ಗ್ರಾಮೀಣ ಭಾಗ ದಿಂದ ನಗರ ಪ್ರದೇಶಗಳಿಗೆ ಬಂದು ಖರೀದಿ ಮಾಡುವವರು ಬಹುತೇಕ ರೈತರೇ ಆಗಿದ್ದಾರೆ. ಈಗ ರೈತರ ಕೈಯಲ್ಲಿ ಹಣವಿಲ್ಲ. ಇದರಿಂದ ವ್ಯಾಪಾರ ವಹಿವಾಟಿನ ಮೇಲೆ ಪ್ರಭಾವ ಬೀರಿದೆ.</p>.<p>ನಗರದ ಗಾಂಧಿ ವೃತ್ತದ ಮಾರುಕಟ್ಟೆಯಲ್ಲಿ ಜನಸಂದಣಿಯೇ ಕಾಣುತ್ತಿಲ್ಲ. ಹೆಚ್ಚಾಗಿಹಣತೆಗಳು ಮಾತ್ರ ಕಾಣಸಿಗುತ್ತವೆ. ಆಕಾಶ ಬುಟ್ಟಿಗಳು ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಮಾರಾಟಕ್ಕೆ ಇಡಲಾಗಿದೆ.</p>.<p>ನಗರದ ಗಾಂಧಿ ವೃತ್ತದಲ್ಲಿ ಕುಂಬಾರ ಸಮುದಾಯದ ಮಹಿಳೆಯರು ಹಣತೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ವ್ಯಾಪಾರವೇ ಆಗುತ್ತಿಲ್ಲ ಎಂದು ಆಳಲು ತೋಡಿಕೊಂಡರು.</p>.<p>ಹಣತೆಯಲ್ಲಿ ವಿವಿಧ ಆಕಾರಗಳಿದ್ದು, ಅವುಗಳಿಗೆ ತಕ್ಕಂತೆ ದರ ನಿಗದಿ ಮಾಡಿದ್ದಾರೆ. ಚಿಕ್ಕ ಗಾತ್ರ ಹಣತೆ ₹ 5, ಮಧ್ಯಮ ಗಾತ್ರದ ₹ 10, ದೊಡ್ಡ ಗಾತ್ರದ ಅಲಂಕಾರವುಳ್ಳ ಹಣತೆಗೆ ₹ 20 ದರವಿದೆ.</p>.<p>‘ಬೆಳಿಗ್ಗೆಯಿಂದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಆದರೆ, ₹ 200 ವ್ಯಾಪಾರವೂ ಆಗಿಲ್ಲ. ಅಲಂಕಾರವುಳ್ಳ ಹಣತೆಗಳನ್ನು ಸೊಲ್ಲಾಪುರದಿಂದ ತಂದಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ಲಕ್ಷ್ಮಿ ಕುಂಬಾರ.</p>.<p>ಆಕಾಶ ಬುಟ್ಟಿಗಳಿಗೆ ಹೆಚ್ಚಿನದರ ಇದೆ. ₹ 100 ರಿಂದ ₹ 200 ತನಕ ದರ ನಿಗದಿ ಪಡಿಸಲಾಗಿದೆ. ಆದರೆ, ಗ್ರಾಹಕರು ಮಾತ್ರ ಬರುತ್ತಿಲ್ಲ ಎಂದು ವ್ಯಾಪಾರಿಗಳು ತಿಳಿಸಿದರು.</p>.<p class="Subhead"><strong>ಕುಂಬಾರರ ಬದುಕಲ್ಲಿ ಕತ್ತಲು:</strong> ಕೊರೊನಾ ಲಾಕ್ಡೌನ್ ಮಧ್ಯೆ ಯುಗಾದಿ ಹಬ್ಬದ ಬೇವಿನ ಗಡಿಗೆಗಳು ವ್ಯಾಪಾರ ಇಲ್ಲದೆ ತೀರಾ ಸಂಕಷ್ಟವನ್ನು ಕುಂಬಾರರ ಕುಟುಂಬಗಳು ಅನುಭವಿಸಿದ್ದವು. ಈಗ ಭೀಮಾ ನದಿ ಪ್ರವಾಹದಿಂದ ಕುಂಬಾರರ ಬದುಕು ಕೊಚ್ಚಿಹೋಗಿದೆ. ದೀಪಾವಳಿ ಹಬ್ಬಕ್ಕೆ ತಯಾರಿಸಿದ ಹಣತೆಗಳು ನದಿ ನೀರಿನಲ್ಲಿ ಕೊಚ್ಚಿಹೋಗಿವೆ. ನಾಯ್ಕಲ್ ಗ್ರಾಮದ 5 - 6 ಕುಟುಂಬದವರು ದೀಪಾವಳಿಗಾಗಿ ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಅವರೆಲ್ಲರ ಸ್ಥಿತಿ ಶೋಚನೀಯವಾಗಿದೆ.</p>.<p>ಕುಂಬಾರರು ಕುಲ ಕಸುಬು ಕುಂಬಾರಿಕೆ ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಾರೆ. ಇದೇ ವೃತ್ತಿಯಿಂದ ಯಾವ ಸಂಪಾದನೆಯೂ ಆಗುತ್ತಿಲ್ಲ.</p>.<p>’ಮಣ್ಣಿನ ಸಾಮಾಗ್ರಿಗಳ ಬಳಕೆ ಇರುವ ಟಿಗ್ರಿ ಸಹಿತ ಹಾಳಾಗಿದೆ. ಇದನ್ನು ತರಲು ಸುಮಾರು ₹ 20 ಸಾವಿರ ಹಣ ಬೇಕಾಗುತ್ತದೆ. ಕುಂಬಾರು ಕುಂಬಾರಿಕೆ ಮಾಡದೆ ಕೈ ಚೆಲ್ಲಿ ಕುಳಿತಿವೆ. ಕುಂಬಾರರ ಜೀವನ ದುಸ್ತರವಾಗಿದೆ’ ಎನ್ನುತ್ತಾರೆ ಇಲ್ಲಿನ ಕುಂಬಾರರು.</p>.<p>ಭೀಮಾ ನದಿ ಪ್ರವಾಹದ ನೀರು ಮನೆಗಳಿಗೆ ನುಗ್ಗಿ, ಮನೆಗಳು ಜಲಾವೃತಗೊಂಡು ಹಣತೆಗಳು, ಮಡಿಕೆ ಕುಡಿಕೆಗಳು, ಕಟ್ಟಿಗೆಗಳು ಎಲ್ಲವೋ ಭೀಮೆ ಪಾಲಾಗಿ ಕೊಚ್ಚಿಹೋಗಿವೆ. ದೀಪಾವಳಿ ಕುಂಬಾರರ ಬದುಕಲ್ಲಿ ಕತ್ತಲೆ ಆವರಿಸಿದೆ.</p>.<p>***</p>.<p>ಎರಡು ದಿನಗಳಿಂದ ವ್ಯಾಪಾರ ಮಾಡುತ್ತಿದ್ದೇನೆ. ಹಣತೆ ಕೇಳುವವರು ಇಲ್ಲ. ಇದರಿಂದ ಈ ವರ್ಷ ಅಳಿದುಳಿದ ಹಣತೆಗಳು ಹೇಗೆ ಮಾರಾಟ ಮಾಡುವುದು<br />- ಶಾಂತಮ್ಮ ಕುಂಬಾರ, ಹಣತೆ ವ್ಯಾಪಾರಿ</p>.<p>***</p>.<p>ಮನೆ ಮಂದಿ ಎಲ್ಲಾ ಸೇರಿ ದುಡಿದು ಸಂಗ್ರಹ ಮಾಡಿದ ಹಣತೆಗಳು ಎಲ್ಲವೂ ಭೀಮಾ ನದಿ ಪಾಲಾಗಿವೆ. ಕುಂಬಾರರ ಬದುಕಲ್ಲಿ ಕತ್ತಲು ಆವರಿಸಿದೆ<br />- ಹಣಮಂತ ಕುಂಬಾರ ನಾಯ್ಕಲ್ ಗ್ರಾಮಸ್ಥ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>