‘ಒಂದು ಜಿಲ್ಲೆಗೆ ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಎಣ್ಣೆಕಾಳು ನಿಗಮ ಯಾದಗಿರಿ ಜಿಲ್ಲೆಯಿಂದ ಶೇಂಗಾ ಬೆಳೆಯನ್ನು ಆಯ್ಕೆ ಮಾಡಿದೆ. ಆದರೆ ಸರ್ಕಾರದ ಯೋಜನೆ ನೆಚ್ಚಿಕೊಂಡು ಬಿತ್ತನೆ ಮಾಡಿದ ರೈತರು ಈಗ ಕೈ ಕೈ ಹಿಸಿಕಿಕೊಳ್ಳುವಂತಾಗಿದೆ. ರೈತರ ಅಳಲಿಗೆ ಜಿಲ್ಲಾಡಳಿತ ಕಿವಿಯಾಗುತ್ತಿಲ್ಲ. ಶೇಂಗಾ ಎಣ್ಣೆ ಪ್ರತಿ ಕೆ.ಜಿಗೆ ₹180 ಇದೆ’ ಎಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.