<p><strong>ಶಹಾಪುರ/ವಡಗೇರಾ: </strong>ನಂಬಿಕೆ ಮತ್ತು ಭರವಸೆಯ ಬದುಕಿನ ಆಸರೆಯಾಗಿರುವ ಹರಿಗೋಲು ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹದ ಸೆಳೆತಕ್ಕೆ ಸಿಕ್ಕುಕೊಂಡಿದೆ. ತೆಪ್ಪ ಮತ್ತು ಮೀನಿನ ಬಲೆಯಲ್ಲಿ ಸಿಕ್ಕು ಗಾಳದಂತೆ ಒದ್ದಾಡುವಂತೆ ಆಗಿದೆ. ನದಿಯ ನೀರಿನ ಮೇಲೆ ಅವಲಂಬಿತ ಬದುಕು ಅತಂತ್ರ ಸ್ಥಿತಿಯಲ್ಲಿದೆ.</p>.<p>ಇದು ಕೃಷ್ಣಾ ನದಿಯ ದಂಡೆಯಲ್ಲಿ ನೆಲೆ ಕಂಡಿರುವ ಸುಮಾರು 50 ಮೀನುಗಾರರ ಕುಟುಂಬಗಳ ದುಸ್ಥಿತಿ.</p>.<p>ವಡಗೇರಾ ತಾಲ್ಲೂಕಿನ ಅಗ್ನಿಹಾಳ, ಗೊಂದೆನೂರ, ಅನಕಸೂಗೂರ, ಗೊಂದೆನೂರ, ಕಂದಳ್ಳಿ ಗ್ರಾಮ ಸೇರಿದಂತೆ 20ಕ್ಕೂ ಹಳ್ಳಿಗಳು ನದಿ ದಂಡೆಯ ಮೇಲೆ ಅವಲಂಬಿತವಾಗಿವೆ. ನದಿಯಲ್ಲಿ ಮೀನು ಹಿಡಿದು ಮಾರಾಟ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತವೆ. ಪ್ರವಾಹ ಎಲ್ಲವನ್ನು ಕಸಿದುಕೊಂಡಿದೆ.</p>.<p>‘ಕಳೆದ ವರ್ಷ 25 ದಿನ ಪ್ರವಾಹದ ಸಂಕಷ್ಟದಿಂದ ಸೋತು ಹೋಗಿದ್ದೇವು. ಈಗ ಐದು ದಿನದಿಂದ ಪ್ರವಾಹದ ಹೊಡೆತದಿಂದ ತತ್ತರಿಸುವಂತೆ ಆಗಿದೆ’ ಎನ್ನುತ್ತಾರೆ ಯಲ್ಲಪ್ಪ ಸೂರ್ಯವಂಶಿ.</p>.<p>‘ಕೊರೊನಾ ವೈರಸ್ ಹಾವಳಿಯಿಂದ ಜನರು ಮೀನು ಖರೀದಿ ಮಾಡುವುದನ್ನು ಕಡಿಮೆ ಮಾಡಿದ್ದರು. ನಿಧಾನವಾಗಿ ಮೀನು ಖರೀದಿಗೆ ಮುಂದಾಗುತ್ತಿದ್ದಂತೆ ಮತ್ತೊಂದು ಸಮಸ್ಯೆ ಉಂಟಾಗಿದೆ. ಕೂಲಿ ಕೆಲಸಕ್ಕೆ ತೆರಳಿದರೆ ಅಲ್ಲಿ ಸಿಗುವ ₹100 ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ. ಗುಡಿಸಲಿನ ಮನೆಯಲ್ಲಿ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದೇವೆ. ಜೀವನ ಮುನ್ನೆಡೆಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಮಹಿಳೆ ರೇಣುಕಾ.</p>.<p>ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹ ಹೆಚ್ಚಾಗುತ್ತಿದ್ದಂತೆ ತಾಲ್ಲೂಕು ಆಡಳಿತ ನದಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಹೀಗಾಗಿ ಮೀನುಗಾರರ ತೆಪ್ಪ, ಬಲೆ, ಬೆಂಡ್, ಹರಿಗೋಲು ಮೂಲೆ ಸೇರಿವೆ.</p>.<p>‘ಮೀನು ಹಿಡಿದು ಬದುಕು ಸಾಗಿಸುವ ನಾವು ಕೆಲಸವಿಲ್ಲದೆ ಊಟಕ್ಕೂ ತೊಂದರೆ ಅನುಭವಿಸುವಂತೆ ಆಗಿದೆ. ಕೊನೆ ಪಕ್ಷ ಆಹಾರ ಧಾನ್ಯ ನೀಡಿದರೆ ಹಸಿವು ಇಂಗಿಸಿಕೊಳ್ಳುತ್ತೇವೆ’ ಎಂದು ಮೀನುಗಾರರ ಕುಟುಂಬಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿವೆ.</p>.<p>***</p>.<p><strong>ಕೃಷ್ಣಾ ನದಿ ದಂಡೆಯ 23 ಹಳ್ಳಿಗಳಲ್ಲಿ ಪ್ರವಾಹ ಭೀತಿ ಮುಂದುವರೆದಿದೆ. ನದಿಗೆ ಹೆಚ್ಚಿನ ನೀರು ಹರಿಸಿದರೆ ಜಿಲ್ಲಾಧಿಕಾರಿ ಆದೇಶ ನೀಡಿದರೆ ಮುನ್ನೆಚ್ಚರಿಕೆ ಕ್ರಮವಾಗಿ ನಿರಾಶ್ರಿತ ಆಶ್ರಯ ತೆಗೆಯಲಾಗುವುದು</strong></p>.<p><strong>-ಸುರೇಶ ಅಂಕಲಗಿ, ವಡಗೇರಾ ತಹಶೀಲ್ದಾರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಪುರ/ವಡಗೇರಾ: </strong>ನಂಬಿಕೆ ಮತ್ತು ಭರವಸೆಯ ಬದುಕಿನ ಆಸರೆಯಾಗಿರುವ ಹರಿಗೋಲು ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹದ ಸೆಳೆತಕ್ಕೆ ಸಿಕ್ಕುಕೊಂಡಿದೆ. ತೆಪ್ಪ ಮತ್ತು ಮೀನಿನ ಬಲೆಯಲ್ಲಿ ಸಿಕ್ಕು ಗಾಳದಂತೆ ಒದ್ದಾಡುವಂತೆ ಆಗಿದೆ. ನದಿಯ ನೀರಿನ ಮೇಲೆ ಅವಲಂಬಿತ ಬದುಕು ಅತಂತ್ರ ಸ್ಥಿತಿಯಲ್ಲಿದೆ.</p>.<p>ಇದು ಕೃಷ್ಣಾ ನದಿಯ ದಂಡೆಯಲ್ಲಿ ನೆಲೆ ಕಂಡಿರುವ ಸುಮಾರು 50 ಮೀನುಗಾರರ ಕುಟುಂಬಗಳ ದುಸ್ಥಿತಿ.</p>.<p>ವಡಗೇರಾ ತಾಲ್ಲೂಕಿನ ಅಗ್ನಿಹಾಳ, ಗೊಂದೆನೂರ, ಅನಕಸೂಗೂರ, ಗೊಂದೆನೂರ, ಕಂದಳ್ಳಿ ಗ್ರಾಮ ಸೇರಿದಂತೆ 20ಕ್ಕೂ ಹಳ್ಳಿಗಳು ನದಿ ದಂಡೆಯ ಮೇಲೆ ಅವಲಂಬಿತವಾಗಿವೆ. ನದಿಯಲ್ಲಿ ಮೀನು ಹಿಡಿದು ಮಾರಾಟ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತವೆ. ಪ್ರವಾಹ ಎಲ್ಲವನ್ನು ಕಸಿದುಕೊಂಡಿದೆ.</p>.<p>‘ಕಳೆದ ವರ್ಷ 25 ದಿನ ಪ್ರವಾಹದ ಸಂಕಷ್ಟದಿಂದ ಸೋತು ಹೋಗಿದ್ದೇವು. ಈಗ ಐದು ದಿನದಿಂದ ಪ್ರವಾಹದ ಹೊಡೆತದಿಂದ ತತ್ತರಿಸುವಂತೆ ಆಗಿದೆ’ ಎನ್ನುತ್ತಾರೆ ಯಲ್ಲಪ್ಪ ಸೂರ್ಯವಂಶಿ.</p>.<p>‘ಕೊರೊನಾ ವೈರಸ್ ಹಾವಳಿಯಿಂದ ಜನರು ಮೀನು ಖರೀದಿ ಮಾಡುವುದನ್ನು ಕಡಿಮೆ ಮಾಡಿದ್ದರು. ನಿಧಾನವಾಗಿ ಮೀನು ಖರೀದಿಗೆ ಮುಂದಾಗುತ್ತಿದ್ದಂತೆ ಮತ್ತೊಂದು ಸಮಸ್ಯೆ ಉಂಟಾಗಿದೆ. ಕೂಲಿ ಕೆಲಸಕ್ಕೆ ತೆರಳಿದರೆ ಅಲ್ಲಿ ಸಿಗುವ ₹100 ಕುಟುಂಬ ನಿರ್ವಹಣೆಗೆ ಸಾಕಾಗುವುದಿಲ್ಲ. ಗುಡಿಸಲಿನ ಮನೆಯಲ್ಲಿ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದೇವೆ. ಜೀವನ ಮುನ್ನೆಡೆಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಮಹಿಳೆ ರೇಣುಕಾ.</p>.<p>ಕೃಷ್ಣಾ ಮತ್ತು ಭೀಮಾ ನದಿಗಳ ಪ್ರವಾಹ ಹೆಚ್ಚಾಗುತ್ತಿದ್ದಂತೆ ತಾಲ್ಲೂಕು ಆಡಳಿತ ನದಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ. ಹೀಗಾಗಿ ಮೀನುಗಾರರ ತೆಪ್ಪ, ಬಲೆ, ಬೆಂಡ್, ಹರಿಗೋಲು ಮೂಲೆ ಸೇರಿವೆ.</p>.<p>‘ಮೀನು ಹಿಡಿದು ಬದುಕು ಸಾಗಿಸುವ ನಾವು ಕೆಲಸವಿಲ್ಲದೆ ಊಟಕ್ಕೂ ತೊಂದರೆ ಅನುಭವಿಸುವಂತೆ ಆಗಿದೆ. ಕೊನೆ ಪಕ್ಷ ಆಹಾರ ಧಾನ್ಯ ನೀಡಿದರೆ ಹಸಿವು ಇಂಗಿಸಿಕೊಳ್ಳುತ್ತೇವೆ’ ಎಂದು ಮೀನುಗಾರರ ಕುಟುಂಬಗಳು ಜಿಲ್ಲಾಧಿಕಾರಿಗೆ ಮನವಿ ಮಾಡಿವೆ.</p>.<p>***</p>.<p><strong>ಕೃಷ್ಣಾ ನದಿ ದಂಡೆಯ 23 ಹಳ್ಳಿಗಳಲ್ಲಿ ಪ್ರವಾಹ ಭೀತಿ ಮುಂದುವರೆದಿದೆ. ನದಿಗೆ ಹೆಚ್ಚಿನ ನೀರು ಹರಿಸಿದರೆ ಜಿಲ್ಲಾಧಿಕಾರಿ ಆದೇಶ ನೀಡಿದರೆ ಮುನ್ನೆಚ್ಚರಿಕೆ ಕ್ರಮವಾಗಿ ನಿರಾಶ್ರಿತ ಆಶ್ರಯ ತೆಗೆಯಲಾಗುವುದು</strong></p>.<p><strong>-ಸುರೇಶ ಅಂಕಲಗಿ, ವಡಗೇರಾ ತಹಶೀಲ್ದಾರ್</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>