<p><strong>ಯಾದಗಿರಿ:</strong> ‘ನಗರ ಪ್ರದೇಶಗಳು ಅಭಿವೃದ್ದಿಯ ವೇಗ ಪಡೆದುಕೊಂಡಿವೆ. ಆದರೆ, ಗ್ರಾಮೀಣ ಪ್ರದೇಶಗಳು ತೀರಾ ಹಿಂದುಳಿದ ಕಾರಣ ಮಾನವ ಸೂಚ್ಯಂಕದಲ್ಲಿ ಹಿಂದುಳಿದಿದ್ದೇವೆ. ಹೀಗಾಗಿ ಗ್ರಾಮೀಣ ಜನರ ತಲಾ ಆದಾಯ ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡಬೇಕಿದೆ’ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಎಸ್.ಟಿ.ಬಾಗಲಕೋಟೆ ಹೇಳಿದರು.</p>.<p>ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಮಿತಿಯಿಂದ ಬುಧವಾರ ನಡೆದ ಹಿಂದುಳಿದ ಪ್ರದೇಶದಲ್ಲಿ ಇದುವರೆಗಿನ ಅಭಿವೃದ್ಧಿ ಹೊಂದಿರುವ ಆಧಾರದ ಮೇಲೆ ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ, ಸಂಘ-ಸಂಸ್ಥೆಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.</p>.<p>ಕೃಷಿಯೇ ಪ್ರಧಾನವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ತಲಾ ಆದಾಯ ವೃದ್ಧಿಯಾಗದ ಹೊರತು ಮಾನವ ಸೂಚ್ಯಂಕ ಅಭಿವೃದ್ಧಿಯಲ್ಲ ಪ್ರಗತಿ ಅಸಾಧ್ಯ ಎಂದರು.</p>.<p>ಡಿ.ಎಂ.ನಂಜುಂಡಪ್ಪ 2002ರ ವರದಿಯಲ್ಲಿ ಅಂದಿನ 176 ತಾಲ್ಲೂಕುಗಳನ್ನು ಹಿಂದುಳಿದ, ಅತಿ ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅಭಿವೃದ್ದಿ ಹೊಂದಿದ ತಾಲ್ಲೂಕುಗಳೆಂದು 4 ವರ್ಗದಲ್ಲಿ ವರ್ಗೀಕರಿಸಿ ಅದಕ್ಕನುಗುಣವಾಗಿ ಅನುದಾನ ಹಂಚಿಕೆಗೆ ಶಿಫಾರಸು ಮಾಡಿದರು. ಅದರಂತೆ 2007-08 ರಿಂದ 2015-16ರ ವರೆಗೆ ಹಾಗೂ ತದನಂತರ ಒಟ್ಟಾರೆ ₹45 ಸಾವಿರ ಕೋಟಿ ಹಿಂದುಳಿದ ಪ್ರದೇಶಕ್ಕೆ ಹಂಚಿಕೆಯಾಗಿ ₹34 ಸಾವಿರ ಕೋಟಿ ಖರ್ಚಾದರೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದ ವಿಶೇಷವಾಗಿ ಯಾದಗಿರಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತ ಪ್ರದೇಶ ಇದಾಗಿದೆ ಎಂದರು.</p>.<p>ನಂಜುಡಪ್ಪ ಅವರ ವರದಿಯಂತೆ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಇದುವರೆಗೆ 34 ಸಾವಿರ ಕೋಟಿ ಖರ್ಚಾಗಿದೆ. ಕೆಲವು ತಾಲ್ಲೂಕಿನಲ್ಲಿ ಹಿಂದುಳಿವಿಕೆ ಹೋಗಿದೆಯಾದರೂ ಪಾದೇಶಿಕ ಅಸಮಾನತೆ ಇನ್ನೂ ನೀಗಿಲ್ಲ. ಇಂದಿನ ದಿನಮಾನದಲ್ಲಿ ಖಾಸಗಿ ಕ್ಷೇತ್ರವು ತೀವ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವುದರಿಂದ ಪ್ರದೇಶದ ಅಭಿವೃದ್ಧಿಗೆ ಅವರ ಸಹಕಾರ ಅಗತ್ಯವಿದೆ. ಸಿಎಸ್ಆರ್ ನೆರವು ಪಡೆಯುವುದು, ಪಿಪಿಪಿ ಮಾದರಿಯಲ್ಲಿ ಯೋಜನೆ ಸಾಕಾರಗೊಳಿಸುವ ಅವಶ್ಯಕತೆ ಇದೆ ಎಂದರು.</p>.<p>ಬೆಂಗಳೂರು ನಗರದಿಂದಲೇ ರಾಜ್ಯದ ಬೊಕ್ಕಸಕ್ಕೆ ಶೇ 38 ಆದಾಯ ಬರುತ್ತಿದೆ. ರಾಜ್ಯಕ್ಕೆ ಹೋಲಿಸಿದರೆ ಯಾದಗಿರಿ ಜಿಲ್ಲೆಯಿಂದ ಶೇ 1, ರಾಯಚೂರು ಜಿಲ್ಲೆಯಿಂದ ಶೇ 1.77 ರಷ್ಟು ಆದಾಯ ಬರುತ್ತದೆ. ಇನ್ನು ರಾಜ್ಯದ ಸರಾಸರಿ ತಲಾ ಆದಾಯ ₹2.20 ಲಕ್ಷ ಗಳಿದ್ದರೆ ಯಾದಗಿರಿ ತಲಾ ಆದಾಯ ₹1.35 ಲಕ್ಷ ಆಗಿದೆ. 2ನೇ ಮತ್ತು 3ನೇ ಹಂತದ ನಗರಗಳು ಔದ್ಯೋಗಿಕವಾಗಿ ಬೆಳೆಸುವ ಮೂಲಕ ತಲಾ ಆದಾಯದಲ್ಲಿನ ಈ ಅಸಮಾನತೆ ಹೋಗಲಾಡಿಸಬೇಕಿದೆ ಎಂದರು.</p>.<p><strong>ಯೋಜನೆ ರೂಪಿಸಲು ಶಿಫಾರಸು:</strong> ದಕ್ಷಿಣ ಕರ್ನಾಟಕದ ಭಾಗದಲ್ಲಿ 25-30 ಮಕ್ಕಳಿಗೆ ಓರ್ವ ಶಿಕ್ಷಕರಿದ್ದರೆ, ಯಾದಗಿರಿಯಲ್ಲಿ 55-76 ಮಕ್ಕಳಿಗೆ ಓರ್ವ ಶಿಕ್ಷಕರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆ ಹೇಗೆ? ಎಂದು ಪ್ರಶ್ನಿಸಿದ ಅವರು, ಹತ್ತಿ, ಭತ್ತ, ತೊಗರಿ ಇಲ್ಲಿ ಬೆಳೆಯಲಾಗುತ್ತದೆ. ಆದಾಯ ಹೆಚ್ಚಿಸುವ ತರಕಾರಿ, ವಾಣಿಜ್ಯ ಬೆಳೆಗಳು ಬೆಳೆಯುವುದಿಲ್ಲ. ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಬೇಕಾದ ಸಂಸ್ಕರಣಾ ಘಟಕ ಇಲ್ಲ. ವಿಶೇಷವಾಗಿ ದುಡಿಯುವ ಕೈಗೆ ಕೆಲಸ ನೀಡುವ ಕಾರ್ಖಾನೆ ಇಲ್ಲ. ಮಹಿಳೆಯರನ್ನು ಆರ್ಥಿಕ ಒಳಗೊಳ್ಳುವಿಕೆಗೆ ಪ್ರೋತ್ಸಾಹಿಸಬೇಕಿದೆ. ಯುವ ಸಮೂಹಕ್ಕೆ ಕೌಶಲ ನೀಡಬೇಕಿದೆ ಎಂದ ಅವರು, ಈ ನಿಟ್ಟಿನಲ್ಲಿ ಎಲ್ಲಾ ಆಯಾಮದಿಂದ ಅಧ್ಯಯನ ಮಾಡಿ ಹಿಂದುಳಿವಿಕೆ ಹೋಗಲಾಡಿಸಲು ನೂತನ ತಾಲ್ಲೂಕುಗಳನ್ನು ಗಣನೆಗೆ ತೆಗೆದುಕೊಂಡು ಮಧ್ಯಮಾವಧಿ ಮತ್ತು ಧೀರ್ಘಾವಧಿ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಸಮಿತಿ ಶಿಫಾರಸು ಮಾಡಲಿದೆ ಎಂದರು.</p>.<p>ಶಿಕ್ಷಕರ ಭರ್ತಿಗೆ ನಿವೃತ್ತ ಉಪನ್ಯಾಸಕ ಸಿ.ಎಂ.ಪಟ್ಟೆದಾರ, ವೆಂಕಣ್ಣ ಡೊಳ್ಳೆಗೌಡರ್ ಒತ್ತಾಯಿಸಿದರು.</p>.<p>ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಭೌಗೋಳಿಕ ಇತಿಹಾಸದ ಜೊತೆಗೆ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಎಸ್ಡಿಪಿ ಯೋಜನೆಯಡಿ ಕೈಗೊಂಡ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು.</p>.<p>ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯೆ ಸಂಗೀತಾ ಕೆ.ಎನ್., ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.</p>.<p><strong>‘ಸಂಸ್ಕರಣಾ ಘಟಕ ಸ್ಥಾಪಿಸುವುದು ಅಗತ್ಯ’:</strong></p><p>ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು ಮಾತನಾಡಿ ತೊಗರಿ ಹತ್ತಿ ಭತ್ತ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾಗಿವೆ. ಏಷ್ಯಾ ಖಂಡದಲ್ಲಿ ಉತ್ತಮ ಹತ್ತಿ ತೊಗರಿ ಉತ್ಪಾದಿಸುವ ಗಿರಿ ಜಿಲ್ಲೆಗೆ ಥ್ರೆಡ್ ಇಂಡಸ್ಟ್ರಿ ದಾಲ್ ಮಿಲ್ ಇಲ್ಲ. 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿದೆ. ಈ ಕೃಷಿ ಉತ್ಪನ್ನುಗಳನ್ನು ಸಂಸ್ಕರಿಸಿ ಮಾರಾಟ ಮಾಡಲು ಸಂಸ್ಕರಣಾ ಘಟಕ ಸ್ಥಾಪಿಸಿದಲ್ಲಿ ಮಾರುಕಟ್ಟೆಗೆ ಬಲ ಸಿಕ್ಕು ರೈತರ ಆದಾಯ ದ್ವಿಗುಣವಾಗಲಿದೆ ಎಂದರು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಬರಬೇಕಿದೆ: ಜಿಲ್ಲೆಯಲ್ಲಿ 3175 ಶಿಕ್ಷಕರ ಕೊರತೆ ಇರುವುದರಿಂದ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಆಗುತ್ತಿಲ್ಲ. 371(ಜೆ) ಕಾಯ್ದೆಯಡಿ ನೇಮಕಾತಿ ಮುಂಬಡ್ತಿ ಪಡೆದ ನೌಕರರಿಗೆ ಪ್ರದೇಶದಲ್ಲಿ 10 ವರ್ಷ ಕಡ್ಡಾಯ ಸೇವೆ ಇದ್ದರೂ ಅಲ್ಪಾವಧಿಯಲ್ಲಿ ಬೇರೆ ಜಿಲ್ಲೆಗೆ ವರ್ಗಾವಣೆ ಹೊಂದುತ್ತಿರುವುದು ಶೈಕ್ಷಣಿಕ ಕುಂಠಿತಕ್ಕೆ ಪ್ರಮುಖ ಕಾರಣ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಇಲ್ಲದ ಕಾರಣ ಎಸ್ಎಸ್ಎಲ್ಸಿ ಮುಗಿಸಿದ ನಂತರ ಇಲ್ಲಿನ ಮಕ್ಕಳು ಉನ್ನತ ಶಿಕ್ಷಣಕ್ಕೆ ಸೇರಲು ಬೇರೆ ಜಿಲ್ಲೆ ಕಡೆ ಮುಖ ಮಾಡುತ್ತಿದ್ದು ಇದನ್ನು ತಪ್ಪಿಸಲು ಇಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಜಿಲ್ಲೆಗೆ ಕರೆತರಬೇಕಿದೆ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ಹೇಳಿದರು.</p>.<p><strong>ಹೈವೇ ಬಳಿ ಟೌನ್ಶಿಪ್ ಸ್ಥಾಪಿಸಿ:</strong></p><p>ಯಾದಗಿರಿ ಜಿಲ್ಲೆಯಲ್ಲಿ 65ಕಿ.ಮೀ ಸೂರತ್-ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿ ಹಾದು ಹೋಗುತ್ತಿದ್ದು ರಸ್ತೆ ಬದಿಯಲ್ಲಿ ಹೊಸದಾಗಿ ಇಂಡಸ್ಟ್ರಿ ಟೌನ್ಶಿಪ್ ಸ್ಥಾಪಿಸಬೇಕು. ನಗರಕ್ಕೆ ರಿಂಗ್ ರೋಡ್ ಅವಶ್ಯಕತೆ ಇದೆ. ಕಡೇಚೂರು ಕೈಗಾರಿಕೆ ಪ್ರದೇಶವು ತಕ್ಕ ಮಟ್ಟಿಗೆ ಫಾರ್ಮಾ ಹಬ್ ಆಗಿದೆ. ಇಲ್ಲಿ 800 ಎಕರೆ ಜಮೀನು ಲಭ್ಯವಿದ್ದು ಸೆಮಿ ಕಂಡಕ್ಟರ್ ಸ್ಥಾಪನೆಗೆ ಸೂಕ್ತವಾಗಿದೆ. ಕೃಷಿಗೆ ನೀರಿಲ್ಲ ಗುಳೆ ತಪ್ಪಿಲ್ಲ. ನೀರಾವರಿ ಯೋಜನೆ ಸಾಕಾರದ ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕೆ ನೀತಿ ಅವಶ್ಯಕ ಎಂದು ಯಾದಗಿರಿ ಚೆಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು. ಸ್ಲೀಪಿಂಗ್ ಬುದ್ಧ ಪ್ರವಾಸಿ ತಾಣವಾಗಲಿ: ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಂತೋಷ ಭರತನೂರ ಮಾತನಾಡಿ ಜಿಲ್ಲೆಯ ಶಹಾಪುರನಲ್ಲಿರುವ ಸ್ಲೀಪಿಂಗ್ ಬುದ್ಧ ನೋಡಲು ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಿದ್ದು ಇದನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ಧಿ ಮಾಡಿದಲ್ಲಿ ಸ್ಥಳೀಯವಾಗಿ ಆರ್ಥಿಕ ವಹಿವಾಟು ಜೋರಾಗಲಿದೆ. ಬೋನಾಳ ಪಕ್ಷಿಧಾಮ ನಾರಾಯಣಪುರ ಜಲಾಶಯ ಜಿಲ್ಲೆಯ ಇತರೆ ಫಾಲ್ಸ್ನಲ್ಲಿ ಪ್ರವಾಸಿ ಮೂಲಸೌಕರ್ಯ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ:</strong> ‘ನಗರ ಪ್ರದೇಶಗಳು ಅಭಿವೃದ್ದಿಯ ವೇಗ ಪಡೆದುಕೊಂಡಿವೆ. ಆದರೆ, ಗ್ರಾಮೀಣ ಪ್ರದೇಶಗಳು ತೀರಾ ಹಿಂದುಳಿದ ಕಾರಣ ಮಾನವ ಸೂಚ್ಯಂಕದಲ್ಲಿ ಹಿಂದುಳಿದಿದ್ದೇವೆ. ಹೀಗಾಗಿ ಗ್ರಾಮೀಣ ಜನರ ತಲಾ ಆದಾಯ ಹೆಚ್ಚಿಸಲು ಹೆಚ್ಚಿನ ಆದ್ಯತೆ ನೀಡಬೇಕಿದೆ’ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯ ಎಸ್.ಟಿ.ಬಾಗಲಕೋಟೆ ಹೇಳಿದರು.</p>.<p>ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸಮಿತಿಯಿಂದ ಬುಧವಾರ ನಡೆದ ಹಿಂದುಳಿದ ಪ್ರದೇಶದಲ್ಲಿ ಇದುವರೆಗಿನ ಅಭಿವೃದ್ಧಿ ಹೊಂದಿರುವ ಆಧಾರದ ಮೇಲೆ ಹೊಸದಾಗಿ ಸೂಚ್ಯಂಕ ನಿಗದಿಪಡಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ, ಸಂಘ-ಸಂಸ್ಥೆಗಳೊಂದಿಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.</p>.<p>ಕೃಷಿಯೇ ಪ್ರಧಾನವಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ತಲಾ ಆದಾಯ ವೃದ್ಧಿಯಾಗದ ಹೊರತು ಮಾನವ ಸೂಚ್ಯಂಕ ಅಭಿವೃದ್ಧಿಯಲ್ಲ ಪ್ರಗತಿ ಅಸಾಧ್ಯ ಎಂದರು.</p>.<p>ಡಿ.ಎಂ.ನಂಜುಂಡಪ್ಪ 2002ರ ವರದಿಯಲ್ಲಿ ಅಂದಿನ 176 ತಾಲ್ಲೂಕುಗಳನ್ನು ಹಿಂದುಳಿದ, ಅತಿ ಹಿಂದುಳಿದ, ಅತ್ಯಂತ ಹಿಂದುಳಿದ ಹಾಗೂ ಅಭಿವೃದ್ದಿ ಹೊಂದಿದ ತಾಲ್ಲೂಕುಗಳೆಂದು 4 ವರ್ಗದಲ್ಲಿ ವರ್ಗೀಕರಿಸಿ ಅದಕ್ಕನುಗುಣವಾಗಿ ಅನುದಾನ ಹಂಚಿಕೆಗೆ ಶಿಫಾರಸು ಮಾಡಿದರು. ಅದರಂತೆ 2007-08 ರಿಂದ 2015-16ರ ವರೆಗೆ ಹಾಗೂ ತದನಂತರ ಒಟ್ಟಾರೆ ₹45 ಸಾವಿರ ಕೋಟಿ ಹಿಂದುಳಿದ ಪ್ರದೇಶಕ್ಕೆ ಹಂಚಿಕೆಯಾಗಿ ₹34 ಸಾವಿರ ಕೋಟಿ ಖರ್ಚಾದರೂ ದಕ್ಷಿಣ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕ ಭಾಗದ ವಿಶೇಷವಾಗಿ ಯಾದಗಿರಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಂಡಿಲ್ಲ. ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತ ಪ್ರದೇಶ ಇದಾಗಿದೆ ಎಂದರು.</p>.<p>ನಂಜುಡಪ್ಪ ಅವರ ವರದಿಯಂತೆ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಇದುವರೆಗೆ 34 ಸಾವಿರ ಕೋಟಿ ಖರ್ಚಾಗಿದೆ. ಕೆಲವು ತಾಲ್ಲೂಕಿನಲ್ಲಿ ಹಿಂದುಳಿವಿಕೆ ಹೋಗಿದೆಯಾದರೂ ಪಾದೇಶಿಕ ಅಸಮಾನತೆ ಇನ್ನೂ ನೀಗಿಲ್ಲ. ಇಂದಿನ ದಿನಮಾನದಲ್ಲಿ ಖಾಸಗಿ ಕ್ಷೇತ್ರವು ತೀವ್ರಗತಿಯಲ್ಲಿ ಪ್ರಗತಿ ಕಾಣುತ್ತಿರುವುದರಿಂದ ಪ್ರದೇಶದ ಅಭಿವೃದ್ಧಿಗೆ ಅವರ ಸಹಕಾರ ಅಗತ್ಯವಿದೆ. ಸಿಎಸ್ಆರ್ ನೆರವು ಪಡೆಯುವುದು, ಪಿಪಿಪಿ ಮಾದರಿಯಲ್ಲಿ ಯೋಜನೆ ಸಾಕಾರಗೊಳಿಸುವ ಅವಶ್ಯಕತೆ ಇದೆ ಎಂದರು.</p>.<p>ಬೆಂಗಳೂರು ನಗರದಿಂದಲೇ ರಾಜ್ಯದ ಬೊಕ್ಕಸಕ್ಕೆ ಶೇ 38 ಆದಾಯ ಬರುತ್ತಿದೆ. ರಾಜ್ಯಕ್ಕೆ ಹೋಲಿಸಿದರೆ ಯಾದಗಿರಿ ಜಿಲ್ಲೆಯಿಂದ ಶೇ 1, ರಾಯಚೂರು ಜಿಲ್ಲೆಯಿಂದ ಶೇ 1.77 ರಷ್ಟು ಆದಾಯ ಬರುತ್ತದೆ. ಇನ್ನು ರಾಜ್ಯದ ಸರಾಸರಿ ತಲಾ ಆದಾಯ ₹2.20 ಲಕ್ಷ ಗಳಿದ್ದರೆ ಯಾದಗಿರಿ ತಲಾ ಆದಾಯ ₹1.35 ಲಕ್ಷ ಆಗಿದೆ. 2ನೇ ಮತ್ತು 3ನೇ ಹಂತದ ನಗರಗಳು ಔದ್ಯೋಗಿಕವಾಗಿ ಬೆಳೆಸುವ ಮೂಲಕ ತಲಾ ಆದಾಯದಲ್ಲಿನ ಈ ಅಸಮಾನತೆ ಹೋಗಲಾಡಿಸಬೇಕಿದೆ ಎಂದರು.</p>.<p><strong>ಯೋಜನೆ ರೂಪಿಸಲು ಶಿಫಾರಸು:</strong> ದಕ್ಷಿಣ ಕರ್ನಾಟಕದ ಭಾಗದಲ್ಲಿ 25-30 ಮಕ್ಕಳಿಗೆ ಓರ್ವ ಶಿಕ್ಷಕರಿದ್ದರೆ, ಯಾದಗಿರಿಯಲ್ಲಿ 55-76 ಮಕ್ಕಳಿಗೆ ಓರ್ವ ಶಿಕ್ಷಕರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆ ಹೇಗೆ? ಎಂದು ಪ್ರಶ್ನಿಸಿದ ಅವರು, ಹತ್ತಿ, ಭತ್ತ, ತೊಗರಿ ಇಲ್ಲಿ ಬೆಳೆಯಲಾಗುತ್ತದೆ. ಆದಾಯ ಹೆಚ್ಚಿಸುವ ತರಕಾರಿ, ವಾಣಿಜ್ಯ ಬೆಳೆಗಳು ಬೆಳೆಯುವುದಿಲ್ಲ. ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಬೇಕಾದ ಸಂಸ್ಕರಣಾ ಘಟಕ ಇಲ್ಲ. ವಿಶೇಷವಾಗಿ ದುಡಿಯುವ ಕೈಗೆ ಕೆಲಸ ನೀಡುವ ಕಾರ್ಖಾನೆ ಇಲ್ಲ. ಮಹಿಳೆಯರನ್ನು ಆರ್ಥಿಕ ಒಳಗೊಳ್ಳುವಿಕೆಗೆ ಪ್ರೋತ್ಸಾಹಿಸಬೇಕಿದೆ. ಯುವ ಸಮೂಹಕ್ಕೆ ಕೌಶಲ ನೀಡಬೇಕಿದೆ ಎಂದ ಅವರು, ಈ ನಿಟ್ಟಿನಲ್ಲಿ ಎಲ್ಲಾ ಆಯಾಮದಿಂದ ಅಧ್ಯಯನ ಮಾಡಿ ಹಿಂದುಳಿವಿಕೆ ಹೋಗಲಾಡಿಸಲು ನೂತನ ತಾಲ್ಲೂಕುಗಳನ್ನು ಗಣನೆಗೆ ತೆಗೆದುಕೊಂಡು ಮಧ್ಯಮಾವಧಿ ಮತ್ತು ಧೀರ್ಘಾವಧಿ ಯೋಜನೆಗಳನ್ನು ಜಾರಿಗೆ ತರಲು ಸರ್ಕಾರಕ್ಕೆ ಸಮಿತಿ ಶಿಫಾರಸು ಮಾಡಲಿದೆ ಎಂದರು.</p>.<p>ಶಿಕ್ಷಕರ ಭರ್ತಿಗೆ ನಿವೃತ್ತ ಉಪನ್ಯಾಸಕ ಸಿ.ಎಂ.ಪಟ್ಟೆದಾರ, ವೆಂಕಣ್ಣ ಡೊಳ್ಳೆಗೌಡರ್ ಒತ್ತಾಯಿಸಿದರು.</p>.<p>ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಪ್ರಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಭೌಗೋಳಿಕ ಇತಿಹಾಸದ ಜೊತೆಗೆ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಎಸ್ಡಿಪಿ ಯೋಜನೆಯಡಿ ಕೈಗೊಂಡ ಕೆಲಸ ಕಾರ್ಯಗಳ ಬಗ್ಗೆ ವಿವರಿಸಿದರು.</p>.<p>ಸಭೆಯಲ್ಲಿ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಸದಸ್ಯೆ ಸಂಗೀತಾ ಕೆ.ಎನ್., ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.</p>.<p><strong>‘ಸಂಸ್ಕರಣಾ ಘಟಕ ಸ್ಥಾಪಿಸುವುದು ಅಗತ್ಯ’:</strong></p><p>ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು ಮಾತನಾಡಿ ತೊಗರಿ ಹತ್ತಿ ಭತ್ತ ಜಿಲ್ಲೆಯಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾಗಿವೆ. ಏಷ್ಯಾ ಖಂಡದಲ್ಲಿ ಉತ್ತಮ ಹತ್ತಿ ತೊಗರಿ ಉತ್ಪಾದಿಸುವ ಗಿರಿ ಜಿಲ್ಲೆಗೆ ಥ್ರೆಡ್ ಇಂಡಸ್ಟ್ರಿ ದಾಲ್ ಮಿಲ್ ಇಲ್ಲ. 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿದೆ. ಈ ಕೃಷಿ ಉತ್ಪನ್ನುಗಳನ್ನು ಸಂಸ್ಕರಿಸಿ ಮಾರಾಟ ಮಾಡಲು ಸಂಸ್ಕರಣಾ ಘಟಕ ಸ್ಥಾಪಿಸಿದಲ್ಲಿ ಮಾರುಕಟ್ಟೆಗೆ ಬಲ ಸಿಕ್ಕು ರೈತರ ಆದಾಯ ದ್ವಿಗುಣವಾಗಲಿದೆ ಎಂದರು. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಬರಬೇಕಿದೆ: ಜಿಲ್ಲೆಯಲ್ಲಿ 3175 ಶಿಕ್ಷಕರ ಕೊರತೆ ಇರುವುದರಿಂದ ಎಸ್ಎಸ್ಎಲ್ಸಿ ಫಲಿತಾಂಶ ಸುಧಾರಣೆ ಆಗುತ್ತಿಲ್ಲ. 371(ಜೆ) ಕಾಯ್ದೆಯಡಿ ನೇಮಕಾತಿ ಮುಂಬಡ್ತಿ ಪಡೆದ ನೌಕರರಿಗೆ ಪ್ರದೇಶದಲ್ಲಿ 10 ವರ್ಷ ಕಡ್ಡಾಯ ಸೇವೆ ಇದ್ದರೂ ಅಲ್ಪಾವಧಿಯಲ್ಲಿ ಬೇರೆ ಜಿಲ್ಲೆಗೆ ವರ್ಗಾವಣೆ ಹೊಂದುತ್ತಿರುವುದು ಶೈಕ್ಷಣಿಕ ಕುಂಠಿತಕ್ಕೆ ಪ್ರಮುಖ ಕಾರಣ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಇಲ್ಲದ ಕಾರಣ ಎಸ್ಎಸ್ಎಲ್ಸಿ ಮುಗಿಸಿದ ನಂತರ ಇಲ್ಲಿನ ಮಕ್ಕಳು ಉನ್ನತ ಶಿಕ್ಷಣಕ್ಕೆ ಸೇರಲು ಬೇರೆ ಜಿಲ್ಲೆ ಕಡೆ ಮುಖ ಮಾಡುತ್ತಿದ್ದು ಇದನ್ನು ತಪ್ಪಿಸಲು ಇಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಜಿಲ್ಲೆಗೆ ಕರೆತರಬೇಕಿದೆ ಎಂದು ಡಿಡಿಪಿಐ ಚನ್ನಬಸಪ್ಪ ಮುಧೋಳ ಹೇಳಿದರು.</p>.<p><strong>ಹೈವೇ ಬಳಿ ಟೌನ್ಶಿಪ್ ಸ್ಥಾಪಿಸಿ:</strong></p><p>ಯಾದಗಿರಿ ಜಿಲ್ಲೆಯಲ್ಲಿ 65ಕಿ.ಮೀ ಸೂರತ್-ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿ ಹಾದು ಹೋಗುತ್ತಿದ್ದು ರಸ್ತೆ ಬದಿಯಲ್ಲಿ ಹೊಸದಾಗಿ ಇಂಡಸ್ಟ್ರಿ ಟೌನ್ಶಿಪ್ ಸ್ಥಾಪಿಸಬೇಕು. ನಗರಕ್ಕೆ ರಿಂಗ್ ರೋಡ್ ಅವಶ್ಯಕತೆ ಇದೆ. ಕಡೇಚೂರು ಕೈಗಾರಿಕೆ ಪ್ರದೇಶವು ತಕ್ಕ ಮಟ್ಟಿಗೆ ಫಾರ್ಮಾ ಹಬ್ ಆಗಿದೆ. ಇಲ್ಲಿ 800 ಎಕರೆ ಜಮೀನು ಲಭ್ಯವಿದ್ದು ಸೆಮಿ ಕಂಡಕ್ಟರ್ ಸ್ಥಾಪನೆಗೆ ಸೂಕ್ತವಾಗಿದೆ. ಕೃಷಿಗೆ ನೀರಿಲ್ಲ ಗುಳೆ ತಪ್ಪಿಲ್ಲ. ನೀರಾವರಿ ಯೋಜನೆ ಸಾಕಾರದ ಜೊತೆಗೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕೈಗಾರಿಕೆ ನೀತಿ ಅವಶ್ಯಕ ಎಂದು ಯಾದಗಿರಿ ಚೆಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು. ಸ್ಲೀಪಿಂಗ್ ಬುದ್ಧ ಪ್ರವಾಸಿ ತಾಣವಾಗಲಿ: ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಂತೋಷ ಭರತನೂರ ಮಾತನಾಡಿ ಜಿಲ್ಲೆಯ ಶಹಾಪುರನಲ್ಲಿರುವ ಸ್ಲೀಪಿಂಗ್ ಬುದ್ಧ ನೋಡಲು ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಿದ್ದು ಇದನ್ನು ಪ್ರವಾಸಿ ತಾಣವನ್ನಾಗಿಸಿ ಅಭಿವೃದ್ಧಿ ಮಾಡಿದಲ್ಲಿ ಸ್ಥಳೀಯವಾಗಿ ಆರ್ಥಿಕ ವಹಿವಾಟು ಜೋರಾಗಲಿದೆ. ಬೋನಾಳ ಪಕ್ಷಿಧಾಮ ನಾರಾಯಣಪುರ ಜಲಾಶಯ ಜಿಲ್ಲೆಯ ಇತರೆ ಫಾಲ್ಸ್ನಲ್ಲಿ ಪ್ರವಾಸಿ ಮೂಲಸೌಕರ್ಯ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>